ಶಿವಮೊಗ್ಗ: ಜಿಲೆಟಿನ್ ಸ್ಪೋಟ ದುರಂತ ಗುತ್ತಿಗೆದಾರ ಸುಧಾಕರ್ ಜಿಲೆಟಿನ್ ಪೂರೈಕೆದಾರ ನರಸಿಂಹ ಬಂಧನ…!

ಶಿವಮೊಗ್ಗ: ಜಿಲೆಟಿನ್ ಸ್ಪೋಟ ದುರಂತ ಗುತ್ತಿಗೆದಾರ ಸುಧಾಕರ್ ಜಿಲೆಟಿನ್ ಪೂರೈಕೆದಾರ ನರಸಿಂಹ ಬಂಧನ…!

ಶಿವಮೊಗ್ಗ ಜಿಲ್ಲೆಯ ಅಬ್ಬಲಗೇರಿ ಹತ್ತಿರ ರೈಲ್ವೇ ಕ್ರಷರ್ ನಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಕಲ್ಲು ಗಣಿಗಾರಿಕೆಯ ಗುತ್ತಿಗೆದಾರ ಸುಧಾಕರ್, ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬುವರನ್ನು ಪೋಲಿಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಅಬ್ಬಲಗೆರೆ–ಹುಣಸೋಡು ನಡುವೆ ಇರುವ ಜಲ್ಲಿ ಕ್ರಷರ್‌ ಬಳಿಯಲ್ಲಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಡೈನಾಮೈಟ್‌ ನಿನ್ನೆ ರಾತ್ರಿ ಸ್ಫೋಟಿಸಿ, ಇಲ್ಲಿವರೆಗೆ ಸುಮಾರು 8 ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು,

ಸ್ಫೋಟದ ತೀವ್ರತೆಗೆ ಮೃತ ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ ಎಂದು ತಿಳಿದು ಬಂದಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ತನಿಖೆಗೆ ಆದೇಶ ನೀಡಿದ್ದಾರೆ.

Leave a comment

Design a site like this with WordPress.com
Get started