
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘ ಮಾಸ,
ಶುಕ್ಲಪಕ್ಷ,ದ್ವಿತೀಯ,
ಶನಿವಾರ, ಶತಭಿಷಾ ನಕ್ಷತ್ರ/ಪೂರ್ವ ಭಾದ್ರಪದ ನಕ್ಷತ್ರ,
ರಾಹುಕಾಲ 9.42 ರಿಂದ 11:10
ಗುಳಿಕಕಾಲ 06:46 ರಿಂದ 08:14
ಯಮಗಂಡಕಾಲ 02:06 ರಿಂದ 3.34
ಮೇಷ
ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದೀರಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ.
ವೃಷಭ
ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಮನೆಯವರೆಲ್ಲರಿಗೂ ಅತೀವ ಸಂತೋಷ. ಉನ್ನತ ವ್ಯಾಸಂಗದ ವಿಚಾರದಲ್ಲಿ ಚರ್ಚೆ, ಅನುಕೂಲಕರ ವಾತಾವರಣ. ಸಂಪನ್ಮೂಲ ಕೂಡಿಬರಲಿದೆ.
ಮಿಥುನ
ಹೊಸ ಮನೆ ಕಟ್ಟುವ ಯತ್ನವು ಈಡೇರಲಿದೆ. ವಯಸ್ಕರು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಲಿದ್ದೀರಿ. ದೇವತಾ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ.
ಕಟಕ
ವಿವಾಹ ಸಂಬಂಧಿ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅವಕಾಶಗಳು ದೊರಕಲಿವೆ. ದೇವತಾನುಗ್ರಹದಿಂದ ಸರ್ವಕಾರ್ಯ ಸಿದ್ಧಿ.
ಸಿಂಹ
ಸಲಹೆಯನ್ನು ಬಯಸಿ ಬಂದವರಿಗೆ ನಿರಾಕರಿಸದೇ ಉತ್ತಮ ಸಲಹೆಗಳನ್ನು ನೀಡಿ ಅನುಕೂಲ ಹೊಂದಲಿದ್ದೀರಿ. ಮನೆಯ ವಹಿವಾಟಿನತ್ತ ವಿಶೇಷ ಗಮನ ಹರಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿಯು ಲಭ್ಯವಾಗಲಿದೆ.
ಕನ್ಯಾ
ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಬೆಂಬಲ ದೊರೆತು ಕಾರ್ಯ ಸುಗಮವಾಗಲಿದೆ. ಪ್ರೀತಿಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುವಿರಿ. ತಾಪತ್ರಯಗಳಿಂದ ಮುಕ್ತರಾಗಿ ನೆಮ್ಮದಿ.
ತುಲಾ
ಜೀವನಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರ ನಡೆಸಲು ತೀರ್ಮಾನ. ತಂದೆಯವರ ಸಹಕಾರದಿಂದಾಗಿ ವ್ಯವಹಾರದಲ್ಲಿ ಯಶಸ್ಸನ್ನು ಹೊಂದುವಿರಿ.
ವೃಶ್ಚಿಕ
ಚಿತ್ರಕಲೆಯಲ್ಲಿ ತೊಡಗಿಕೊಂಡವರಿಗೆ ಸೃಜನಶೀಲತೆಯ ಉತ್ತುಂಗಕ್ಕೇರುವ ಅವಕಾಶ. ಮನಸ್ಸಿಗೆ ಮುದ ನೀಡುವ ಸಂಗತಿಗಳು ಜರುಗಲಿವೆ. ಜಟಿಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೀರಿ.
ಧನು
ನಿತ್ಯದ ಕೆಲಸ ಕಾರ್ಯಗಳ ಬಗೆಗೆ ಹೆಚ್ಚಿನ ನಿಗಾ. ಮನೆಯವರೊಂದಿಗೆ ದೇವತಾರಾಧನೆ ನಡೆಸಲಿದ್ದೀರಿ. ನೆನೆಗುದಿಗೆ ಬಿದ್ದಿರುವ ಕೆಲಸ ಪೂರ್ಣ. ಜೀವನದಲ್ಲಿ ಬದಲಾವಣೆಯೊಂದನ್ನು ನಿರೀಕ್ಷಿಸಬಹುದು.
ಮಕರ
ಕಾನೂನು ಕಾಯ್ದೆ ವಿಚಾರದಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ. ನೇರ ನಡೆ ನುಡಿಯಿಂದಾಗಿ ಇತರರ ಮನ ಗೆಲ್ಲುವಿರಿ. ಹೆಣೆದಿರುವ ತಂತ್ರಗಾರಿಕೆಯು ಫಲ ನೀಡಲಿದೆ. ದೇವಾಲಯ ದರ್ಶನ ಮಾಡುವ ಸಾಧ್ಯತೆ.
ಕುಂಭ
ಹಣಕಾಸು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ. ಕೂಡಿಟ್ಟ ಬಂಡವಾಳದಿಂದಾಗಿ ನಿರೀಕ್ಷೆ ಮೀರಿದ ಲಾಭ. ಸಂಗಾತಿಯೊಂದಿಗೆ ಸಂತಸವನ್ನು ಹಂಚಿಕೊಳ್ಳಲಿದ್ದೀರಿ. ಹಸಿರು ಬಣ್ಣ ಶುಭ ತರಲಿದೆ.
ಮೀನ
ಕಛೇರಿಯಲ್ಲಿನ ನಿಮ್ಮ ಮೇಲಿನ ಭರವಸೆಗಳನ್ನು ದೃಢಪಡಿಸುವಿರಿ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ. ಉತ್ತಮ ಆರೋಗ್ಯದ ನಿಮಿತ್ತ ದೇವರ ಆರಾಧನೆ ಮಾಡಲಿದ್ದೀರಿ.