ಫೆಬ್ರವರಿ 03, ಬುಧವಾರ: 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 20 ಸಲುವ ಪೌಷ ಬಹುಳದಿನ ವಿಶೇಷ :ಪಣಂಬೂರು ರಥನಿತ್ಯ ನಕ್ಷತ್ರ :ಚಿತ್ರಾ 35|| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ

ಮೇಷ

ಪದೋನ್ನತಿಯ ಸಲುವಾಗಿ ಪ್ರಯಾಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವ್ಯವಹಾರಗಳಲ್ಲಿ ಶ್ರೇಯಸ್ಸು. ಸಂಗ್ರಹಿಸಿಟ್ಟ ವಸ್ತುಗಳಿಂದ ಧನಲಾಭವಾಗುವ ಸಾಧ್ಯತೆ. ನೌಕರಿಯಲ್ಲಿನ ತೀವ್ರ ಒತ್ತಡದಿಂದಾಗಿ ಬೇಸರ ಉಂಟಾದೀತು.

ವೃಷಭ

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹ ನವೀಕರಣ ವಾ ಹೊಸ ಗೃಹ ನಿರ್ಮಾಣ ಯೋಜನೆಯನ್ನು ಕೈಗಿತ್ತಿಕೊಳ್ಳಲಿದ್ದೀರಿ. ನೀರಾವರಿ ಭೂಮಿಯನ್ನು ಖರೀದಿ ಮಾಡುವ ಸಾಧ್ಯತೆ. ಆರೋಗ್ಯದಲ್ಲಿ ಸುಧಾರಣೆ.

ಮಿಥುನ

ಸುವಾರ್ತೆಯನ್ನು ಕೇಳಲಿದ್ದೀರಿ. ಅತಿಯಾದ ಕಾರ್ಯ ಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಉಂಟಾದೀತು. ಮಕ್ಕಳು ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುವುದು.

ಕಟಕ

ಉದ್ಯೋಗ ವ್ಯವಹಾರಗಳ ಪ್ರತಿ ಹೆಜ್ಜೆಯಲ್ಲೂ ಪ್ರಗತಿಯನ್ನು ಕಾಣುವಿರಿ. ರಿಯಲ್ ಎಸ್ಟೇಟ್ ವ್ಯಹಾರದಲ್ಲಿ ಅಧಿಕ ಧನ ಲಾಭ. ಸ್ನೇಹ ಸಂವರ್ತನೆ. ಶತೃಗಳ ಪರಾಜಯ ಸಾಧ್ಯತೆ. ಹೈನುಗಾರಿಕೆಯವರಿಗೆ ವಿಶೇಷ ಶುಭ ಹಾಗೂ ಲಾಭದಲ್ಲಿ ಹೆಚ್ಚಳ.

ಸಿಂಹ

ಸ್ಥಿರಾಸ್ತಿಯನ್ನು ಖರೀದಿಸುವ ಸಾಧ್ಯತೆ ಕಂಡುಬರುವುದು. ನೆರೆಯವರ ವಿರೋಧವನ್ನು ಎದುರಿಸಬೇಕಾದೀತು. ತಂಟೆ ತಕರಾರುಗಳ ತಲೆದೋರುವ ಸಾಧ್ಯತೆ ಇದೆ. ಹಳೆಯ ಸಾಲಗಳು ತೀರುವಳಿಯಿಂದಾಗಿ ನೆಮ್ಮದಿ ಮೂಡಲಿದೆ.

ಕನ್ಯಾ

ಉದ್ಯೋಗ ವ್ಯವಹಾರಗಳು ಸುಗಮವಾಗಿ ಸಾಗಲಿವೆ. ಶುಭವಾರ್ತೆಯೊಂದನ್ನು ಕೇಳಲಿದ್ದೀರಿ. ವಿರೋಧಿಗಳು ದೂರ ಸರಿಯಲಿದ್ದಾರೆ. ಸ್ತಿöçÃಯರಿಗೆ ಉದ್ಯೋಗ ಭಾಗ್ಯ ಕಂಡುಬರುವುದು. ಅಧಿಕಾರ್ಯಗಳ ಔದಾರ್ಯ ಮತ್ತು ಗೌರವ ಲಾಭವಾಗಲಿದೆ.

ತುಲಾ

ಆರ್ಥಿಕ ಬಲವರ್ಧನೆಯಾಗಲಿದೆ. ತಾಂತ್ರಿಕ ಯಂತ್ರೋಪ ಕರಣಗಳನ್ನು ಖರೀದಿಸುವ ಸಾಧ್ಯತೆ. ಅಧಿಕಾರ ವೃದ್ಧಿಯಾಗಲಿದೆ. ವ್ಯವಸಾಯಿಕ ಹಾಗೂ ಗೃಹ ನಿರ್ಮಾಣ ಚ ಟುವಟಿಕೆಗಳು ಚುರುಕುಗೊಳ್ಳಲಿವೆ.

ವೃಶ್ಚಿಕ

ತಾಳ್ಮೆಯಿಂದ ಕಾರ್ಯಾನುಕೂಲ ಒದಗಿಬರಲಿದೆ. ವಿದ್ಯಾರ್ಥಿಗಳಿಗೆ ಉಚ್ಛಶಿಕ್ಷಣ ದಲ್ಲಿ ಅಧ್ಯಯನ ನಿಮಿತ್ತ ಸಂಚಾರ ಮಾಡಬೇಕಾದೀತು. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ವಸ್ತಾöçಭರಣ ಹಾಗೂ ಆಸ್ತಿ ಖರೀದಿ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಧನು

ಬೌದ್ಧಿಕ ಮಟ್ಟ ಹೆಚ್ಚಲಿದೆ. ಉಚ್ಛ ಶಿಕ್ಷಣದ ಯೋಜನೆ ಕೈಗೂಡಲಿದೆ. ಹುದ್ದೆಯಲ್ಲಿನ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ. ಸಾಹಿತ್ಯ, ಕಲೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶದಿಂದಾಗಿ ಕೀರ್ತಿ ಲಾಭ.

ಮಕರ

ಲೋಹದ ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರಕಲಿದೆ. ಆಯವ್ಯಯಗಳನ್ನು ಮರು ಪರಿಶೀಲನೆ ಮಾಡಬೇಕಾದೀತು. ಬ್ಯಾಂಕ್ ಅಧಿಕಾರಿಗಳಿಂದ ವಂಚನೆಗೊಳಗಾಗುವ ಸಾಧ್ಯತೆ ಕಂಡುಬರುತ್ತಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ವಿರಸ ಸಾಧ್ಯತೆ.

ಕುಂಭ

ಭವ್ಯ ಜೀವನಕ್ಕೆ ನಾಂದಿಯಾಗುವ ಆರ್ಥಿಕ ಸಂಪನ್ಮೂಲವೊAದು ಗೋಚರವಾಗುವ ಸಾಧ್ಯತೆ ಕಂಡುಬರುತ್ತಿದೆ. ನಗರ ಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಪದೋನ್ನತಿ ವಾ ಅಧಿಕಾರದಲ್ಲಿ ಬದಲಾವಣೆ ಸಾಧ್ಯತೆ.

ಮೀನ

ಸಂಗಾತಿಯ ವಿರೋಧ ಹಾಗೂ ವಿರಸ ಮೂಡುವ ಸಾಧ್ಯತೆ. ಹೊಸ ಹೊಸ ವ್ಯವಹಾರಕ್ಕಾಗಿ ಹಣ ವಿನಿಯೋಗಿಸಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನ ವಿನಿಯೋಗ ಮಾಡುವ ಸಾಧ್ಯತೆ ಕಂಡುಬರುವುದು.

Leave a comment

Design a site like this with WordPress.com
Get started