ಜೂನ್ 18,2020;ಗುರುವಾರ ಇಂದಿನ ರಾಶಿ ಫಲ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 9:41 ನಂತರ ತ್ರಯೋದಶಿ ತಿಥಿ,
ಗುರುವಾರ, ಭರಣಿ ನಕ್ಷತ್ರ
ಬೆಳಗ್ಗೆ 8:30 ನಂತರ ಕೃತ್ತಿಕಾ ನಕ್ಷತ್ರ

ದಿನ ವಿಶೇಷ: ಪ್ರದೋಷ

ರಾಹುಕಾಲ: ಮಧ್ಯಾಹ್ನ 2:01 ರಿಂದ 3:37
ಗುಳಿಕಕಾಲ: ಬೆಳಗ್ಗೆ 9:12 ರಿಂದ 10:48
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:36

ಮೇಷ: ಉದ್ಯೋಗ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ಕಲಹ ಬಗೆಹರಿಯವುದು.

ವೃಷಭ: ಭಾವನೆಗಳಿಗೆ ಮನ್ನಣೆ, ಕಾರ್ಯ ನಿಮಿತ್ತ ಓಡಾಟ, ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ನೆರೆಹೊರೆಯವರಿಂದ ಪ್ರಯಾಣ,

ಮಿಥುನ: ಪಿತ್ರಾರ್ಜಿತ ಆಸ್ತಿ ತಗಾದೆ, ವ್ಯವಹಾರದಲ್ಲಿ ಅಡೆತಡೆ, ಕುಟುಂಬಕ್ಕಾಗಿ ಖರ್ಚು, ವಸ್ತ್ರಾಭರಣ ಖರೀದಿ, ಆಕಸ್ಮಿಕ ಧನಾಗಮನ.

ಕಟಕ: ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಕುಟುಂಬಸ್ಥರಿಂದಲೇ ಮಾನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

ಸಿಂಹ: ಬಂಧುಗಳಲ್ಲಿ ಕಲಹ, ಮಿತ್ರರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಗೌರವ-ಕೀರ್ತಿ ಸಂಪಾದನೆಗೆ ಹಂಬಲ, ಉನ್ನತ ಹುದ್ದೆಗಾಗಿ ಕನಸು.

ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ವ್ಯಾಪಾರಸ್ಥರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.

ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಸ್ಥಿರಾಸ್ತಿಯಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಹಣಕಾಸು ಸಮಸ್ಯೆ, ಅಧಿಕ ಚಿಂತೆ, ಅನಗತ್ಯ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ,

ಮಕರ: ಸಂಗಾತಿಯಿಂದ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ ಪ್ರಾಪ್ತಿ, ರೋಗ ಬಾಧೆಗಳಿಂದ ಮುಕ್ತಿ, ಅಹಂಭಾವದಿಂದ ಅಪನಂಬಿಕೆ.

ಕುಂಭ: ಸೇವಕರಿಂದ ಕಿರಿಕಿರಿ, ಕೆಲಸಗಾರರಿಂದ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸದಲ್ಲಿ ವಿಪರೀತ ಒತ್ತಡ, ಸ್ಥಿರಾಸ್ತಿ-ವಾಹನದ ಮೇಲೆ ಸಾಲದ ಬೇಡಿಕೆ.

ಮೀನ: ಭಾವನಾ ಲೋಕದಲ್ಲಿ ವಿಹಾರ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ.

Leave a comment

Design a site like this with WordPress.com
Get started