ಭೂಮಿ ಅ’ಮಲಿಕಾ ನೆಲನೆಲ್ಲಿ, ಕಿರುನೆಲ್ಲಿ, ಭೂನೆಲ್ಲಿ, ಜಾಂಡಿಸ್ ಸೊಪ್ಪು,ಕೀಳಾನೆಲ್ಲಿ, ನ್ಯಾಲ ಉಸರಿಚೆಟ್ಟು, ಬಹುಫಲ ಮುಕ್ಕ, ಬಹುಪತ್ರ, ಭೂಧಾತ್ರಿ, ಬಹುಸುತ, ಸೂಕ್ಷ್ಮವತಿ, ಬ’ಹುವೀರ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ನೆಲನೆಲ್ಲಿ ಗಿಡವು ಏ’ಕವಾರ್ಷಿಕ ಸಸ್ಯವಾಗಿದ್ದು, ಹೊಲ, ತೋಟ, ಬೀಳುಭೂಮಿ, ತೇವಾಂಶ ಇರುವ ಕಡೆ ಕಳೆಯಂತೆ 1ರಿಂದ 1-1/2 ಅಡಿ ಬೆಳೆಯುತ್ತದೆ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ, ಈ ಕಿರುನೆಲ್ಲಿ ಸಸ್ಯವು ತನ್ನ ಒಡಲಲ್ಲಿ ಔಷಧೀಯ ಕಣಜವನ್ನೇ ತುಂಬಿಕೊಂಡಿದೆ.ಸಮೂಲ ಸಹಿತ ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ನೆಲನೆಲ್ಲಿ”
Monthly Archives: June 2020
ಜೂನ್ 30, 2020 ಮಂಗಳವಾರ : ಇಂದಿನ ರಾಶಿ ಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ದಶಮಿ ತಿಥಿ,ಮಂಗಳವಾರ, ಸ್ವಾತಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:39 ರಿಂದ 5:15ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:03ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51 ಮೇಷ ಸಂತೋಷದ ಸುದ್ದಿಯೊಂದನ್ನು ಕೇಳುವಿರಿ. ಬಹುದಿನಗಳಿಂದಿರುವ ಕೆಲಸದ ಒತ್ತಡಗಳಿಂದ ಮುಕ್ತಿ ದೊರೆತು ನಿರಾಳರಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆ. ವೃಷಭ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಕೊಳ್ಳುವಿರಿ. ಕೆಲಸದಲ್ಲಿ ಹಿರಿಯರ ಸಹಕಾರ ದೊರಕಲಿದೆ. ಆರ್ಥಿಕ ಪ್ರಗತಿಯಿಂದಾಗಿ ಸಂತಸ. ಮಕ್ಕಳಿಂದ ವಿಶೇಷ ಗೌರವ ಪ್ರಾಪ್ತಿಯಾಗುವುದು.Continue reading “ಜೂನ್ 30, 2020 ಮಂಗಳವಾರ : ಇಂದಿನ ರಾಶಿ ಭವಿಷ್ಯ”
ಡಿಜಿಟಲ್ ಸ್ಟ್ರೈಕ್! ಟಿಕ್ ಟಾಕ್ ಸೇರಿ ರೆಡ್ ಡ್ರಾಗನ್ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದ ಮೋದಿ ಸರ್ಕಾರ..
ಭಾರತ ಮತ್ತು ಚೀನಾ ನಡುವಿನ ಘರ್ಷಣೆ ಮುಂ’ದುವರೆದಿರುವ ಬೆನ್ನಲ್ಲೇ ಚೀನಾ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ಮುಗಿಲು ಮುಟ್ಟಿದೆ. ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ಭಾರತದಿಂದ ನಿಷೇಧಿಸುವಂತೆ ಕೂಗು ಕೇಳಿ ಬರುತ್ತಿದೆ. ಸಿಎಐಟಿಯಂತಹ ಕೆಲವು ವ್ಯಾಪಾರ ಸಂಸ್ಥೆಗಳು ಗಡಿ ಬಿಕ್ಕಟಿಗೆ ಸಂ’ಬಂಧಿಸಿದಂತೆ ಪ್ರತಿಭಟನೆ ನಡೆಸಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ. ಚೀನಾ ಮೂಲದ ಸ್ಮಾ’ರ್ಟ್ಫೋನ್ಗಳ ಅಬ್ಬರದ ಜೊತೆಗೆ ಚೀನಿ ನಿರ್ಮಿತ ಆ್ಯಪ್ ಗಳನ್ನೂ ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದರ ಭಾಗವಾಗಿ ಕೇಂದ್ರ ಸರ್ಕಾರ ಇಂದು ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿ ಮಹತ್ವದContinue reading “ಡಿಜಿಟಲ್ ಸ್ಟ್ರೈಕ್! ಟಿಕ್ ಟಾಕ್ ಸೇರಿ ರೆಡ್ ಡ್ರಾಗನ್ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದ ಮೋದಿ ಸರ್ಕಾರ..”
ಇಂದಿನ ಔಷಧೀಯ ಸಸ್ಯ : ಅಂಕೋಲೆ
ಅಂಕೋಲ್ಲಕತಾಮ್ರ ಫಲ ಪೀತಧಾರ ನಿರೋಚಕ ಗುಪ್ತಸ್ನೇಹ ವಿ’ರೇಚಿ ಭೂ ಸುಧಾ ದೀರ್ಘ ಕೀಲಕ ಅಂಕೋಲೆ ಅಂಕೋಲಂ ಅಂಕೋಲಮು ಅಂಕೋಲ ಶೋಧನಂ ಅಲಾಂಜಿ ಊಡುಗ ಚೆಟ್ಟು(ಮಾನು) ಕಲ್ಲುಮಾವು ಗುಡ್ಡದಗೋಣಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕಾಡು ಮೇಡುಗಳು,ಕುರಚಲು ಕಾಡುಗಳು, ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಪೊದೆಯಂತೆ ಬೆಳೆಯುತ್ತದೆ.ಕೆಲವು ಪ್ರಾಂತ್ಯಗಳಲ್ಲಿ ಬೇ’ಲಿಗಿಡವಾಗಿ ಬೆಳಿಸಿದರೆ,ಕೆಲವು ಕಡೆ ಹೊಲ ಗದ್ದೆಗಳ ಬದಿಗಳ ಮೇಲೆ ಮರಗಳಂತೆ ಬೆಳೆಸುತ್ತಾರೆ.ಮರವು ತುಂಬಾ ಗಟ್ಟಿಯಾಗಿದ್ದು,ಮುಳ್ಳುಗಳಿಂದ ಕೂಡಿದ್ದು,8 ರಿಂದ 15 ಅಡಿವರಿಗೂ ಬೆಳೆಯುತ್ತೆ.ಬಿಳಿ ಕೆಂಪು ಹಾಗೂ ಕಪ್ಪು ಎಂಬ ಮೂರು ಪ್ರ’ಭೇದಗಳಿದ್ದು,ಬಿಳಿ ಕೆಂಪು ಹೆಚ್ಚಿಗೆContinue reading “ಇಂದಿನ ಔಷಧೀಯ ಸಸ್ಯ : ಅಂಕೋಲೆ”
ಇಂದಿನ ರಾಶಿ ಭವಿಷ್ಯ : ಜೂನ್ 29, 2020 ಸೋಮವಾರ
ಮೇಷ ಸಮಾಧಾನದ ವರ್ತನೆಯಿಂದಾಗಿ ಒದಗಬಹುದಾದ ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರಗಳಲ್ಲಿನ ತೊಂದರೆಗಳಿಂದ ಮುಕ್ತರಾಗುವಿರಿ. ಘನವಾದ ಕಾರ್ಯವೊಂದರ ಸಾಧನೆಯಿಂದಾಗಿ ವಿಶೇಷ ಮನ್ನಣೆಗೆ ಪಾತ್ರರಾಗುವಿರಿ. ವೃಷಭ ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ಹೊಸ ವಿಚಾರಗಳನ್ನು ಕಲೆ ಹಾಕುವುದರಿಂದ ಸಂತೃಪ್ತಿ. ಮಿಥುನ ನಿಮ್ಮ ಬೇಜವಾಬ್ದಾರಿತನದಿಂದಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು ಆಲಸ್ಯ ಯಾವುದಕ್ಕೂ ಕೂಡದು. ಅಹಂಭಾವವನ್ನು ತೊರೆದು ಎಲ್ಲರೊಂದಿಗೆ ಬೆರೆತು ಸಂತಸದ ದಿನವನ್ನಾಗಿಸಿಕೊಳ್ಳಿ. ಕಟಕ ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದಿರುವುದು ಉತ್ತಮ. ಪ್ರಯಾಣದಲ್ಲಿ ತೊಂದರೆಯ ಸಾಧ್ಯತೆ ಎಚ್ಚರವಿರಲಿ. ಉದ್ಯೋಗದಲ್ಲಿನ ತೊಡಕುಗಳುContinue reading “ಇಂದಿನ ರಾಶಿ ಭವಿಷ್ಯ : ಜೂನ್ 29, 2020 ಸೋಮವಾರ”
ಮಹಾಮಾರಿ ಕೊರೋನಾ: ಬೆಂಗಳೂರಿನಲ್ಲಿ 783 ಸೇರಿ 1267 ಮಂದಿಗೆ ಸೋಂಕು ದೃಢ
ರಾಜ್ಯದಲ್ಲಿ ಇಂದು ಕೊರೋನಾ ಸ್ಫೋಟವಾಗಿತ್ತು ಬರೋಬ್ಬರಿ 1267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ ದಾಖಲೆಯ 783 ಮಂದಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಧಾರವಾಡ, ಮೈಸೂರು ತಲಾ 18, ಬಾಗಲಕೋಟೆ 17, ಉತ್ತರಕನ್ನಡ 14, ಹಾವೇರಿ 12, ಕೋಲಾರContinue reading “ಮಹಾಮಾರಿ ಕೊರೋನಾ: ಬೆಂಗಳೂರಿನಲ್ಲಿ 783 ಸೇರಿ 1267 ಮಂದಿಗೆ ಸೋಂಕು ದೃಢ”
ಇಂದಿನ ಔಷಧೀಯ ಸಸ್ಯ ಪರಿಚಯ : ಸಂಧಿ ಬಳ್ಳಿ ಅಥವಾ ವಜ್ರವಲ್ಲಿ
ವಜ್ರವಲ್ಲಿಅಸ್ಥಿಸಂಹಾರಿಕ ಅಸ್ಥಿಶ್ರಾಂಕುಲ ಮಂಗರವಳ್ಳಿ ಸುಂದುಬಳ್ಳಿ ಸುಂದೂಕದಗಿಡ ಪೆರಂಡೈ ಹರ್ಜೋರ್ ನಲ್ಲೇರು ನಲ್ಲರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಬೇಲಿ ಪೊದೆಗಳು ಪಾಳು ಬಿದ್ದ ಗೋಡೆಗಳ ಮೇಲೆ ಕುರಚಲು ಕಾಡುಗಳಲ್ಲಿ ಮರ ಗಿಡಗಳನ್ನ ಹಬ್ಬಿ ಬಳ್ಳಿಯಂತೆ ಬೆಳೆಯುತ್ತದೆ.ಮಂಗರವಳ್ಳಿಯನ್ನು ತಂದು ಅದರ ಮೇಲಿನ ಪದರ ತೆಗೆದು,ತಿರಳಿಗೆ ಉಪ್ಪು ಕಾರ ಹಾಕಿ ಚೆಟ್ನಿ ಅಥವಾ ವಡೆಯಂತೆ ಎಣ್ಣೆಯಲ್ಲಿ ಕರಿದು ತಿಂದರೆ ಕಫ,ಅಜೀರ್ಣ ವಾಸಿಯಾಗುತ್ತೆ.ದೇಹದಲ್ಲಿನ ರಕ್ತ ಶುದ್ದಿಯಾಗುತ್ತೆ.ಇದರ ಚಿಗರನ್ನು ಪಚ್ಚಡಿ ಮಾಡಿ ಸೇವಿಸುತ್ತಿದ್ದರೆ,ಜೀರ್ಣಸಮಸ್ಯೆಗಳುಗುಣವಾಗುತ್ತೆ.ಕೀಲು ನೋವುಗಳು, ಮಾಂಸ ಖಂಡಗಳ ನೋವುಗಳು ಶಮನವಾಗುತ್ತೆ, ಮೂಳೆಗಳು ಗಟ್ಟಿಯಾಗುತ್ತವೆ. ಮೈಯಲ್ಲಿನ ಅಧಿಕContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ಸಂಧಿ ಬಳ್ಳಿ ಅಥವಾ ವಜ್ರವಲ್ಲಿ”
ಜೂನ್ 28 ,2020; ಭಾನುವಾರ: ಇಂದಿನ ರಾಶಿಫಲ
ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ಅಷ್ಟಮಿ ತಿಥಿ,ಭಾನುವಾರ, ಉತ್ತರ ನಕ್ಷತ್ರ ರಾಹುಕಾಲ: ಸಂಜೆ 5:14 ರಿಂದ 6:50ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:14ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 2:02 ಮೇಷ ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ. ಕೆಲ ವಿಷಯಗಳ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಿ. ವೃಷಭ ಹೊಸಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿContinue reading “ಜೂನ್ 28 ,2020; ಭಾನುವಾರ: ಇಂದಿನ ರಾಶಿಫಲ”
ಇಂದಿನ ಔಷಧೀಯ ಸಸ್ಯದ ಪರಿಚಯ : ಕೊಮ್ಮೇಗಿಡ
ಪುನಃನವಾ ಶ್ವೇತಪುನಃನವ, ರಕ್ತಪುನಃನವ, ಸೌಭಾಗ್ಯನಿ, ಥಿಕ್ರ, ಕೊಮ್ಮೇಗಿಡ, ಗೊನಜಾಲಿ, ಗಣಜಲಿ, ಅಡಕುಪಟ್ಟಿಗಿಡ, ಗಣಜೇರು, ಗಲಜೇರು, ಆಟಕಮಾಮಿಡಿ, ಮೂಕರತೈ ಚಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊಮ್ಮೇಗಿಡವು ಏಕವಾರ್ಷಿಕ ಸಸ್ಯವಾದರು, ತೇವಾಂಶ ಇರುವ ಭೂಮಿಯಲ್ಲಿ ಸದಾಕಾಲ ಕಾಣುಬರುತ್ತೆ. ಹೊಲ, ತೋಟ, ಬೀಳುಭೂಮಿ, ಪಾಳುಭೂಮಿ, ರಸ್ತೆಗಳ ಪಕ್ಕ, ಮನೆಗಳ ಪಕ್ಕಾ ಎಲ್ಲೆಂದರಲ್ಲಿ ಕಳೆಯಂತೆ ನೆಲದಲ್ಲಿ ಹಬ್ಬಿ ಬೆಳೆಯುತ್ತೆ. ಕೊಮ್ಮೆಗಿಡದಲ್ಲಿ ನಾಲ್ಕಾರು ಪ್ರಭೇದಗಳಿದ್ದರೂ, ಬಿಳಿ ಹೂ ಬಿಡುವ ಹಾಗು ಕೆಂಪು ಹೂ ಬಿಡುವ ಗಿಡಗಳನ್ನು ಮಾತ್ರ ಔಷಧಿಯಲ್ಲಿ ಬಳಸುತ್ತಾರೆ. ಕೊಮ್ಮೇಗಿಡದಲ್ಲಿರುವ ಅಭೂತಪೂರ್ವ ಔಷಧಿContinue reading “ಇಂದಿನ ಔಷಧೀಯ ಸಸ್ಯದ ಪರಿಚಯ : ಕೊಮ್ಮೇಗಿಡ”
ದೈನಂದಿನ ರಾಶಿ ಭವಿಷ್ಯ | ಶನಿವಾರ, ಜೂನ್ 27, 2020 ದೈನಂದಿನ ರಾಶಿ ಭವಿಷ್ಯ
ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು,ಆಷಾಢ ಮಾಸ, ಶುಕ್ಲ ಪಕ್ಷ,ಸಪ್ತಮಿ ತಿಥಿ, ಶನಿವಾರ,ಪೂರ್ವ ಫಾಲ್ಗುಣಿ ನಕ್ಷತ್ರಬೆಳಗ್ಗೆ 10:11 ನಂತರ ಉತ್ತರ ಫಾಲ್ಗುಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 9:14 ರಿಂದ 10:50ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38ಯಮಗಂಡಕಾಲ: ಮಧ್ಯಾಹ್ನ 2:02ರಿಂದ 3:38 ಮೇಷ ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ನಿರ್ಲಕ್ಷ್ಯ ಮಾಡದಿರಿ. ವೃಷಭ ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದContinue reading “ದೈನಂದಿನ ರಾಶಿ ಭವಿಷ್ಯ | ಶನಿವಾರ, ಜೂನ್ 27, 2020 ದೈನಂದಿನ ರಾಶಿ ಭವಿಷ್ಯ”