ಫೆಬ್ರವರಿ19, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 7 ಸಲುವ ಮಾಘ ಶುದ್ಧ ಸಪ್ತಮಿ 10| ಗಳಿಗೆ ದಿನ ವಿಶೇಷ :ರಥಸಪ್ತಮಿ ಮಹಾನಕ್ಷತ್ರ ಶತಭಿಷಾ ಆರಂಭನಿತ್ಯ ನಕ್ಷತ್ರ :ಕೃತ್ತಿಕಾ 57|| ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.35 ಗಂಟೆಸೂರ್ಯೋದಯ :6.56 ಗಂಟೆ

ಮೇಷ

ಅಧಿಕಾರ ಅಥವಾ ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ಎಲ್ಲ ಕಡೆಯಿಂದಲೂ ಗೌರವಾದರಗಳನ್ನು ಪಡೆದುಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಬಂಧುಗಳಿಂದ ಸಹಾಯ ದೊರಕುವ ಸಾಧ್ಯತೆ ಕಂಡುಬರುವುದು.

ವೃಷಭ

ಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ. ಅತಿಯಾದ ಪ್ರಯಾಣದ ಆಲಸ್ಯ ಉಂಟಾಗುವ ಸಾಧ್ಯತೆ. ಸ್ತ್ರೀಯರಿಂದ ಅವಮಾನಕರ ಸನ್ನಿವೇಶ ಎದುರಾದೀತು. ದೇವತಾರಾಧನೆಯಿಂದ ನೆಮ್ಮದಿ.

ಮಿಥುನ

ಉನ್ನತ ಅಧಿಕಾರಿಗಳ ನೆರವಿನಿಂದಾಗಿ ಉದ್ಯೋಗದಲ್ಲಿ ಸ್ಥಿರತೆ. ಪ್ರಯಾಣ ಮಾಡಬೇಕಾದ ಸಂಭವ. ಆದಾಯದಲ್ಲಿ ಹೆಚ್ಚಳ. ಹೊಸ ಯೋಜನೆಯೊಂದನ್ನು ಸ್ಥಾಪಿಸುವ ಸಲುವಾಗಿ ಸಮಾಲೋಚನೆ ನಡೆಸಲಿದ್ದೀರಿ.‌

ಕಟಕ

ವಿವಾಹಿತರಿಗೆ ಪ್ರಾಪಂಚಿಕ ವಿಷಯಗಳನ್ನು ಉತ್ತಮವಾಗಿ ಅನುಭವಿಸುವ ಯೋಗ. ಬಂಧುಗಳೊಂದಿಗೆ ಮೃಷ್ಠಾನ್ನ ಭೋಜನ ಸವಿಯುವ ಸಾಧ್ಯತೆ. ಮಹಿಳೆಯರು ಚೋರಭಯವನ್ನು ಎದುರಿಸಬೇಕಾದೀತು.

ಸಿಂಹ

ಜ್ಞಾನಾರ್ಜನೆಗಾಗಿ ಪರಸ್ಥಳದಲ್ಲಿ ವಾಸಿಸಬೇಕಾದ ಅಥವಾ ದೂರ ಪ್ರಯಾಣ ಕೈಗೊಳ್ಳಬೇಕಾದ ಪ್ರಸಂಗ ಎದುರಾದೀತು. ಜ್ಞಾನದೊಂದಿಗೆ ಧನಾರ್ಜನೆಯ ಕೆಲಸವೂ ನಡೆಯಲಿದೆ. ಸಜ್ಜನರ ಸಾಂಗತ್ಯದಿಂದಾಗಿ ನೆಮ್ಮದಿ.

ಕನ್ಯಾ

ಆಸೆ ಆಕಾಂಕ್ಷೆಗಳು ಸುಗಮವಾಗಿ ನೆರವೇರುವುದರಿಂದಾಗಿ ಮಾನಸಿಕ ನೆಮ್ಮದಿಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಸ್ತ್ರಾಭರಣ ಖರೀದಿ ಸಾಧ್ಯತೆ ಕಂಡುಬರುವುದು.

ತುಲಾ

ಉತ್ತಮ ಆರೋಗ್ಯವನ್ನು ಹೊಂದುವಿರಿ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಹೆಚ್ಚಳ. ಆದಾಯದಲ್ಲಿ ಹೆಚ್ಚಳದಿಂದಾಗಿ ಆರ್ಥಿಕ ಅಭಿವೃದ್ಧಿ. ಹಿರಿಯರ ಆರೋಗ್ಯದ ನಿಮಿತ್ತ ಖರ್ಚು.

ವೃಶ್ಚಿಕ

ಅಪರೂಪದ ಬಂಧುಗಳ ಭೇಟಿ ಅಥವಾ ಆಗಮನ ಸಾಧ್ಯತೆ. ಅಧಿಕಾರಿಗಳಿಂದ ಗೌರವ, ಪ್ರಶಂಸೆಗಳನ್ನು ಗಳಿಸಿಕೊಳ್ಳಲಿದ್ದೀರಿ. ಆಕಾಂಕ್ಷಿಗಳಿಗೆ ಸಂತಾನ ಪ್ರಾಪ್ತಿಯಾಗುವ ಸಾದ್ಯತೆ.

ಧನು

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು. ವ್ಯವಹಾರದಲ್ಲಿ ಉತ್ತಮ ಪ್ರತಿಫಲ ನಿರೀಕ್ಷೆ. ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಉತ್ತಮ. ಸಂಗಾತಿಯೊಂದಿಗೆ ಸ್ನೇಹಪರ ಮಾತುಕತೆ. ಒಟ್ಟಾರೆ ದಿನವಿಡೀ ಸಂತಸ.

ಮಕರ

ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಮಕ್ಕಳ ವಿವಾಹ ಸಂಬಂಧಿಸಿದ ಪ್ರಯತ್ನಗಳು ಫಲಕಾರಿಯಾಗಿ ಪರಿಣಮಿಸುವವು.

ಕುಂಭ

ವಾಹನ ಖರೀದಿ ಸಾಧ್ಯತೆ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿದೆ. ರೈತಾಪಿ ವರ್ಗದವರಿಗೆ ಹೈನುಗಾರಿಕೆ ನಡೆಸುವವರಿಗೆ ಉತ್ತಮ ದಿನ. ಉನ್ನತಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ಮೀನ

ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಿರಿ.

Leave a comment

Design a site like this with WordPress.com
Get started