ಫೆಬ್ರವರಿ 16, ಮಂಗಳವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ರಾಹುಕಾಲ:3.34 ರಿಂದ 5.02
ಗುಳಿಕಕಾಲ:12.38 ರಿಂದ 2.06
ಯಮಗಂಡಕಾಲ:9.42 ರಿಂದ 11.10
ವಾರ : ಮಂಗಳವಾರ,
ತಿಥಿ : ಪಂಚಮಿ,
ನಕ್ಷತ್ರ : ರೇವತಿ,

ಮೇಷ

ವ್ಯವಹಾರಸ್ಥರಿಗೆ ಉತ್ತಮ ಫಲ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ನೆರೆಹೊರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತವಾಗಲಿದೆ. ಕುಟುಂಬದಲ್ಲಿ ವೈಮನಸ್ಸು.

ವೃಷಭ

ವೃತ್ತಿಯಲ್ಲಿ ವರ್ಗಾವಣೆ ಅಥವಾ ಸ್ಥಾನ ಬದಲಾವಣೆ ಸಾಧ್ಯತೆ. ಸಾಲಕ್ಕಾಗಿ ಜಾಮೀನು ನೀಡದಿರುವುದು ಒಳ್ಳೆಯದು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತವಾಗುವ ಸಾಧ್ಯತೆ.

ಮಿಥುನ

ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದು ಸೂಕ್ತ. ವ್ಯವಹಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿ. ನ್ಯಾಯಾಲಯದಲ್ಲಿರುವ ಕಟ್ಟಳೆಗಳು ವಿಳಂಬವಾಗುವ ಸಾಧ್ಯತೆ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ.

ಕಟಕ

ಬಟ್ಟೆ, ಹತ್ತಿ ವ್ಯಾಪಾರಿಗಳಿಗೆ ವಿಶೇಷ ಲಾಭವಾಗುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸ್ವಯಂ ಉದ್ಯೋಗಿಗಳಿಗೆ ಯಶಸ್ಸು ದೊರಕಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾದೀತು.

ಸಿಂಹ

ವಿದ್ಯುತ್ ಉಪಕರಣಗಳನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸುವುದು ಅವಶ್ಯ. ಮಹಿಳೆಯರು ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಮಿತ್ರರಿಂದ ಧನ ಲಾಭ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ.

ಕನ್ಯಾ

ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯದಿಂದ ಮುಕ್ತಿ ದೊರಕುವ ಸಾಧ್ಯತೆ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳಲಿದ್ದೀರಿ. ವ್ಯವಹಾರ ಉತ್ತಮಗೊಳ್ಳುವ ಸಾಧ್ಯತೆ. ಗೃಹದಲ್ಲಿ ಧಾರ್ಮಿಕ ಕಾರ್ಯ ನೆರವೇರುವ ಸಾಧ್ಯತೆ.

ತುಲಾ

ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ವಹಿಸುವುದು ಅವಶ್ಯ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಉತ್ತಮ ಫಲ ಪ್ರಾಪ್ತಿ. ಸಂತೃಪ್ತಿದಾಯಕ ದಾಂಪತ್ಯ ಜೀವನ ನಿಮ್ಮದಾಗಲಿದೆ.

ವೃಶ್ಚಿಕ

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ. ಸೋದರರಿಂದ ಸಹಕಾರ ದೊರಕಲಿದೆ. ಮಧುಮೇಹದಂತಹ ರೋಗ ಬಾಧೆ ಹೆಚ್ಚಾಗುವ ಸಾಧ್ಯತೆ. ವಿದೇಶ ಪ್ರಯಾಣ ಸಾಧ್ಯತೆ ಕಂಡುಬರುವುದು.

ಧನು

ದೈನಂದಿನ ಕೆಲಸ–ಕಾರ್ಯಗಳಲ್ಲಿ ಉತ್ಸಾಹ ಮತ್ತು ಗಣನೀಯ ಸಾಧನೆ. ದೂರದ ಪ್ರಯಾಣ ಸಾಧ್ಯತೆ. ಮಕ್ಕಳ ಬಗ್ಗೆ ವಿಶೇಷ ಗಮನ ಅಗತ್ಯ. ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ. ಕಲಾವಿದರಿಗೆ ಉತ್ತಮ ಪ್ರೋತ್ಸಾಹ.

ಮಕರ

ಹಿತಶತ್ರುಗಳ ವಿಚಾರದಲ್ಲಿ ಬಹಳ ಜಾಗೃತೆ ವಹಿಸುವುದು ಅವಶ್ಯಕ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಸಾಧ್ಯತೆ. ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ವಾಹನ ಚಾಲಕರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಕುಂಭ

ಪ್ರಿಯ ವ್ಯಕ್ತಿಗಳೆಂದು ನಂಬಿ ವಿಚಾರಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಲಾರದು. ಬಂಧುಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ ಒಮ್ಮತ ಮೂಡಲಿದೆ. ಸಂತೃಪ್ತ ದಾಂಪತ್ಯ ಜೀವನ ಅನುಭವಿಸಲಿದ್ದೀರಿ.

ಮೀನ

ಆರೋಗ್ಯದ ಕಡೆಗೆ ಹೆಚ್ಚು ಗಮನ ಅಗತ್ಯ. ಬಂಧುಗಳೊಡನೆ ಆಕಸ್ಮಿಕ ಪ್ರಯಾಣ ಸಾಧ್ಯತೆ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ ಕೂಡಬರಲಿದೆ. ಆಸ್ತಿ ವಿವಾದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ.

Leave a comment

Design a site like this with WordPress.com
Get started