
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ : ಪುಷ್ಯ
ರಾಹುಕಾಲ: 3.33 ರಿಂದ 5.01
ಗುಳಿಕಕಾಲ: 12.37 ರಿಂದ 2.05
ಯಮಗಂಡಕಾಲ: 9.42 ರಿಂದ 11.10
ಮೇಷ
ವಿವಾಹಾಕಾಂಕ್ಷಿಗಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ.
ವೃಷಭ
ಸಂಪನ್ಮೂಲ ವೃದ್ಧಿಗಾಗಿ ಹೊಸದೊಂದು ಮಾರ್ಗ ಕಂಡುಕೊಳ್ಳುವಲ್ಲಿ ಯಶಸ್ಸು. ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸ. ತುರುಸಿನ ಕೆಲಸದಿಂದಾಗಿ ಮನೆಯ ಕೆಲಸಗಳನ್ನು ಮುಂದೂಡುವ ಸಾಧ್ಯತೆ.
ಮಿಥುನ
ಈ ದಿನ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ವಿರಾಮ ಹೇಳಿ ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆಯಲು ನಿಶ್ಚಯಿಸುವಿರಿ. ಸಂಜೆಯ ವೇಳೆಗೆ ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕಟಕ
ಅತಿಯಾದ ಕಾರ್ಯದೊತ್ತಡ ಉಂಟಾಗಲಿದೆ. ಕಾರ್ಯಬಾಹುಳ್ಯದಿಂದಾಗಿ ಮನೆಯ ವಿಷಯದಲ್ಲಿ ಉದಾಸೀನತೆ ಮಾಡಲಾಗದು. ಕಮಿಷನ್ ವ್ಯವಹಾರ ನಡೆಸುವವರಿಗೆ ಉತ್ತಮ ಆದಾಯ.
ಸಿಂಹ
ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಷ್ಮವಾಗಿ ಪರಿಶೀಲಿಸಿ ಮುಂದುವರಿಯುವುದು ಉಚಿತ. ಸಂಸ್ಥೆಯ ಅಭಿವೃದ್ಧಿಗಾಗಿ ಕಾರ್ಮಿಕ ವರ್ಗದವರೊಡನೆ ಸಕಾರಾತ್ಮಕ ಮಾತುಕತೆ ನಡೆಸಿ ಯಶಸ್ಸನ್ನು ಕಾಣಲಿದ್ದೀರಿ.
ಕನ್ಯಾ
ಸ್ಥಗಿತಗೊಂಡಿರುವ ಅಭ್ಯಾಸ ಅಥವಾ ಅಧ್ಯಯನವನ್ನು ಮುಂದುವರೆಸಲಿದ್ದೀರಿ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ನಿಶ್ಚಯವಾಗಲಿದೆ. ಹಿರಿಯರೊಬ್ಬರ ಆಗಮನದ ಜೊತೆ ವಿವಾಹ ವಿಷಯ ಪ್ರಸ್ತಾಪವಾಗಲಿದೆ.
ತುಲಾ
ಹೆಣ್ಣು ಮಕ್ಕಳಿಗೆ ಹೊಸ ಸಂಬಂಧವೊಂದು ಕಂಡುಬರುವ ಸಾಧ್ಯತೆ. ನೂತನ ಉದ್ಯಮವೊಂದರ ಸ್ಥಾಪನೆಯ ಬಗ್ಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ.
ವೃಶ್ಚಿಕ
ನಿಮ್ಮ ಪ್ರಯತ್ನಗಳು ವ್ಯರ್ಥಗೊಳ್ಳದೆ ಸಮಯೋಚಿತವೆನಿಸಲಿದೆ. ನಿಧಾನವಾದರೂ ಶ್ರಮಕ್ಕೆ ಮೀರಿದ ಪ್ರತಿಫಲ ದೊರಕಿ ನೆಮ್ಮದಿ ಮೂಡಿಬರಲಿದೆ. ಹಿರಿಯರ ಪ್ರಶಂಸೆ ಭಾಜನರಾಗುವ ಸಾಧ್ಯತೆ.
ಧನು
ಊರಿನ ವ್ಯಾಜ್ಯವೊಂದರ ಪರಿಹಾರಾರ್ಥ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಒದಗಿಬರಲಿದೆ. ಕಾರ್ಯಾನುಕೂಲವಿರುವುದು. ಕುಟುಂಬ ಸಮೇತ ಕುಲದೇವತಾ ದರ್ಶನಕ್ಕಾಗಿ ತೆರಳುವ ಸಾಧ್ಯತೆ ಇದೆ.
ಮಕರ
ಭವಿಷ್ಯದ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಲಿದ್ದೀರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನವಾಗಿ ಪರಿಣಮಿಸಲಿದೆ. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಹರುಷ. ಕವಿಗಳಿಗೆ ಮನ್ನಣೆಯ ದಿನ.
ಕುಂಭ
ಮನೆಯಲ್ಲಿ ಹಿತಕರ ವಾತಾವರಣ. ಧಾನ್ಯಗಳ ಸಗಟು ವರ್ತಕರಿಗೆ ಲಾಭದಾಯಕ ದಿನ. ದ್ರವ ಪದಾರ್ಥಗಳ ವ್ಯಾಪಾರಸ್ತರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಮಕ್ಕಳೊಂದಿಗೆ ಸಂಜೆ ಹಿತವಾದ ಸುತ್ತಾಟ ನೆಮ್ಮದಿ ತರಲಿದೆ.
ಮೀನ
ಮಕ್ಕಳೊಂದಿಗೆ ಕಿರು ಪ್ರವಾಸದ ಯೋಜನೆಯನ್ನು ಹಾಕುವಿರಿ. ವೈದ್ಯರಿಗೆ ಆದಾಯ ಹೆಚ್ಚಾಗುವುದು. ಶುಭ ಕಾರ್ಯದ ಬಗ್ಗೆ ಆತ್ಮೀಯರೊಂದಿಗೆ ಮಾತುಕತೆ ನಡೆಸಲಿದ್ದೀರಿ.