ಫೆಬ್ರವರಿ 04, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 21 ಸಲುವ ಪೌಷ ಬಹುಳದಿನ ವಿಶೇಷ :ವಿವೇಕಾನಂದ ಜಯಂತಿ (ತಿಥಿ ಪ್ರಕಾರ) ಪಂಚಗ್ರಹ ಯೋಗಾರಂಭನಿತ್ಯ ನಕ್ಷತ್ರ :ಸ್ವಾತಿ 32 ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ

ಮೇಷ

ಮನಸ್ಸಿಗೆ ಬೇಸರ, ಖಿನ್ನತೆ. ವೃತ್ತಿಯಲ್ಲಿ ಹಿನ್ನಡೆಯುಂಟಾಗುವ ಸಾಧ್ಯತೆ. ತಾಯಿ ಆರೋಗ್ಯದಲ್ಲಿ ವ್ಯತ್ಯಯ. ಎದೆಗುಂದದೇ ಮುಂದುವರಿಯುವುದು ಅವಶ್ಯಕ. ಯಂತ್ರೋಪಕರಣಗಳಿಂದ ನಿಶ್ಚಿತ ಆದಾಯ ಪ್ರಾಪ್ತವಾಗಲಿದೆ.

ವೃಷಭ

ಸಮಯಕ್ಕೆ ಸರಿಯಾಗಿ ಕೆಲಸ–ಕಾರ್ಯಗಳು ಪೂರ್ಣಗೊಳ್ಳದೆ ಒತ್ತಡ. ಲೇವಾದೇವಿ ವ್ಯವಹಾರದಲ್ಲಿ ಹಾನಿ. ತಾಳ್ಮೆಯಿಂದ ನೆಮ್ಮದಿ ದೊರಕಲಿದೆ. ಆರೋಗ್ಯದಲ್ಲಿ ತೊಂದರೆ ಕಂಡುಬಂದೀತು.

ಮಿಥುನ

ಸರ್ಕಾರಿ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಲೆಕ್ಕಪತ್ರ ವ್ಯವಹಾರಗಳಲ್ಲಿನ ಗೊಂದಲ ನಿವಾರಣೆಯಾಗಿ ನೆಮ್ಮದಿ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ದೊರೆಯಲಿದೆ. ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಕಂಡುಕೊಳ್ಳುವಿರಿ.

ಕಟಕ

ವ್ಯಾಪಾರ ವ್ಯವಹಾರಗಳಲ್ಲಿನ ಲಾಭದಲ್ಲಿ ಸ್ಥಿರತೆ. ಪ್ರೀತಿಪಾತ್ರರೊಬ್ಬರ ಭೇಟಿಯಾಗುವ ಸಾಧ್ಯತೆ. ಗೃಹಿಣಿಯರಿಗೆ ಕೆಲಸದ ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು. ವಿಶೇಷ ಭೋಜನ ಸವಿಯಲಿದ್ದೀರಿ.

ಸಿಂಹ

ಕೆಲಸ–ಕಾರ್ಯಗಳಲ್ಲಿ ಸಾಫಲ್ಯತೆ. ವ್ಯಾಪಾರ, ವ್ಯವಹಾರಗಳಲ್ಲಿನ ಲಾಭದಲ್ಲಿ ಹೆಚ್ಚಳವಾಗಲಿದೆ. ಹಿರಿಯರಿಂದ ಉತ್ತಮ ಮಾರ್ಗದರ್ಶನ ದೊರಕಲಿದೆ. ವಿರೋಧಿಗಳ ಉಪದ್ರದಿಂದಾಗಿ ಮನಸ್ಸಿಗೆ ಕಿರಿಕಿರಿ.

ಕನ್ಯಾ

ಇಡೀ ದಿನವೂ ಸಂತಸದ ದಿನವಾಗಿ ಪರಿಣಮಿಸಲಿದೆ. ಕುಟುಂಬದಲ್ಲಿ ವಿಷಯವೊಂದರ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಲಿದ್ದೀರಿ. ಕಾರ್ಯದಲ್ಲಿ ಸಫಲತೆ. ಲೇವಾದೇವಿ ವ್ಯವಹಾರದಲ್ಲಿ ಉತ್ತಮ ಲಾಭ.

ತುಲಾ

ಕೆಲಸ–ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು. ಖರೀದಿ, ಮಾರಾಟ ವ್ಯವಹಾರದಿಂದ ಅಧಿಕ ಲಾಭದ ನಿರೀಕ್ಷೆ. ಪ್ರಯಾಣದಲ್ಲಿ ಸುಖಾನುಭವ. ಬರಬೇಕಾದ ಹಣ ಹಿಂತಿರುಗಿ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ವೃಶ್ಚಿಕ

ಕೆಲಸ–ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗದು. ವ್ಯವಹಾರದಲ್ಲಿ ನಷ್ಟ. ತಂದೆಯ ಮೇಲೆ ವಿನಾಕಾರಣ ಮುನಿಸು. ತಾಳ್ಮೆಯ ನಡೆಯಿಂದಾಗಿ ನೆಮ್ಮದಿ. ಸಂಗಾತಿಯ ಪ್ರೀತಿ ಬೆಂಗಾವಲಾಗಲಿದೆ.

ಧನು

ಕೆಲಸ–ಕಾರ್ಯಗಳಲ್ಲಿನ ಅತಿಯಾದ ಒತ್ತಡದಿಂದಾಗಿ ತಪ್ಪುಗಳು ಉಂಟಾಗುವ ಸಾಧ್ಯತೆ. ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ.

ಮಕರ

ಕಾರ್ಯ ಕಲಾಪಗಳು ಸರಾಗವಾಗಿ ನಡೆಯುವುದು. ವ್ಯಾಪಾರದಲ್ಲಿನ ಲಾಭದಲ್ಲಿ ಹೆಚ್ಚಳ. ಸ್ವಂತ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ. ತಂಟೆ ತಗಾದೆಗಳಲ್ಲಿ ಜಯ. ಆಪ್ತರೊಬ್ಬರ ಆಗಮನ ಸಾಧ್ಯತೆ.

ಕುಂಭ

ಸರಾಗವಾಗಿ ನಡೆಯುವ ಕೆಲಸ–ಕಾರ್ಯಗಳು. ಆರೋಗ್ಯದಲ್ಲಿ ಸ್ಥಿರತೆ. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ಮಿತ್ರವರ್ಗದವರಿಂದ ಸಹಾಯ ದೊರಯಲಿದೆ. ಸಾಲ ತೀರುವಳಿಯಾಗಲಿದೆ.

ಮೀನ

ವ್ಯವಹಾರದಲ್ಲಿ ಅನುಕೂಲತೆಯುಂಟಾಗಿ ಅಭಿವೃದ್ಧಿ. ಹಿತಕರ ಘಟನೆಗಳು ಸಂಭವಿಸಲಿವೆ. ಅಧ್ಯಯನದಲ್ಲಿ ಪ್ರಗತಿ. ಶತ್ರುಭೀತಿ ದೂರವಾಗಲಿದೆ. ಸಮರಸದ ದಾಂಪತ್ಯ ಜೀವನದಿಂದಾಗಿ ನೆಮ್ಮದಿ.

Leave a comment

Design a site like this with WordPress.com
Get started