
ನಿದ್ರಾಭಂಗಿ (ಲಜ್ಜಾಕು) ಮುಟ್ಟಿದರೆ ಮುನಿ ಒಳಮುಚ್ಚುಗ ಮುಡಗುಧಾಮರೆ ನಾಚಿಕೆ ಗಿಡ ಅತ್ತಿಪತ್ತಿ ಚೆಟ್ಟು ಸಿಗ್ಗಾಕು ಸಿಗ್ಗುಸಿಟಿಕಾ ಲಜ್ಜಾಲು ತೊಟ್ಟಾಲ್ ಸಿನುಂಗಿ ಕಾಮವರ್ಧಿನಿ ನಮಸ್ಕಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಒಳಮುಚ್ಚುಗ, ಹೊರಮುಚ್ಚುಗ, ಎಂಬ ಎರಡು ಪ್ರಭೇದಗಳಿವೆ.ಒಳಮುಚ್ಚುಗ ಎಲ್ಲೆಂದರಲ್ಲಿ ಕಳೆಯಂತೆ ಬೆಳೆದರೆ, ಹೊರಮುಚ್ಚುಗ ನೀರು ಹರಿಯುವ ಪ್ರದೇಶಗಳಲ್ಲಿ ಕಾಣಸಿಗುತ್ತೆ. ಒಳಮುಚ್ಚುಗ ಎಂದು ಕರೆಯುವ ಮುಟ್ಟಿದರೆ ಮುನಿ ಗಿಡವು ಮೈಯಲ್ಲ ಮುಳ್ಳುಗಳನ್ನು ತುಂಬಿಕೊಂಡಿರುವ ಸಸ್ಯ,ಮುಟ್ಟಿದರೆ ಎಲೆಗಳು ಮುದರಿಕೊಳ್ಳುತ್ತವೆ.ಭಾರತೀಯ ಆಯುರ್ವೇದ ಹಾಗೂ ಸಂಪ್ರದಾಯಾ ವೈದ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಮುಟ್ಟಿದಮುನಿ ಗಿಡದ ಸಮೂಲ ಚೂರ್ಣವನ್ನು ಬೆಳಿಗ್ಗೆ ಸಂಜೆ ಎರಡು ಚಿಟಿಕೆ ನೀರಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ. ಈ ಗಿಡದ ಕಷಾಯವನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು ವಾಸಿಯಾಗಿ,ಬಾಯಿಂದ ಬರುವ ದುರುವಾಸನೆ ದೂರವಾಗುತ್ತೆ. ಒಂದು ಮಂಡಲ ಕಾಲ (48 ದಿನಗಳು) ಇದರ ಚೂರ್ಣ ಅಥವಾ ಕಷಾಯ ಸೇವಿಸುತ್ತಾ ಬಂದರೆ ಮನೋಶಕ್ತಿ ಹೆಚ್ಚುತ್ತೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಮುಟ್ಟಿದಮುನಿ ಗಿಡವನ್ನು ಸಮೂಲ ಸಹಿತ ತಂದು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕುದಿಸಿದ ನೀರನ್ನು ಸ್ನಾನ ಮಾಡುವ ನೀರಿನಲ್ಲಿ ಕಳಸಿ ಸ್ನಾನ ಮಾಡಿದರೆ ಮೈಕೈ ನೋವು ಸೊಂಟ ನೋವು ಕೀಲು ನೋವುಗಳು ವಾಸಿಯಾಗುತ್ತೆ. ವಯಸ್ಸಾದ ಹೆಂಗಸರಲ್ಲಿ ಗರ್ಭಕೋಶ ಜಾರಿಕೆ ಉಂಟಾದಾಗ, ಅಂದರೆ ಗರ್ಭಕೋಶದ ಮಾಂಸಖಂಡಗಳು ಶಕ್ತಿ ಕಳೆದುಕೊಂಡು, ಗರ್ಭಕೋಶ ದೇಹದಿಂದ ಹೊರಗಡೆ ಜಾರಿಕೆಉಂಟಾಗುತ್ತದೆ.ಅಂತಹ ಸಮಯದಲ್ಲಿ 2 ಲೋಟ ಹಾಲಿಗೆ ನಾಲ್ಕೈದು ರೆಕ್ಕೆ ಮುಟ್ಟಿದಮುನಿ ಎಲೆಗಳನ್ನು ಹಾಕಿ ಕುದಿಸಿ 1 ಲೋಟದಷ್ಟು ಆದಾಗ ಕೆಳಗಿಳಿಸಿ ಅದಕ್ಕೆ ಒಂದು ಸಣ್ಣ ಗೋಲಿಯಷ್ಟು ತಾಟಿಬೆಲ್ಲ ಅಥವಾ ಬೆಲ್ಲ ಸೇರಿಸಿ ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದರೆ ಮಾಂಸಖಂಡಗಳು ಬಲಗೊಂಡು ಗರ್ಭಕೋಶ ಹೊರಗಡೆ ಬರುವುದನ್ನು ತಡೆಯುತ್ತದೆ. ಮಲ ವಿಸರ್ಜನೆ ಮಾಡುವಾಗ ಗುದುದ್ವಾರದ ಕರುಳಿನ ಕೊನೆಯ ಭಾಗ ಹೊರಗಡೆ ಬರುವುದನ್ನು ಶಸ್ತ್ರ ಚಿಕಿತ್ಸೆ ಇಲ್ಲದೆ ತಡೆಗಟ್ಟಲು,ಎರಡು ಲೋಟ ನೀರಿಗೆ ಮುಟ್ಟಿದಮುನಿ ಸಸ್ಯದ ಸಮೂಲವನ್ನು ಕುಟ್ಟಿ ಹಾಕಿ ಚೆನ್ನಾಗಿ ಕುದಿಸಿ ಒಂದು ಲೋಟ ಆದಾಗ ಕೆಳಗಿಳಿಸಿ ಬೆಲ್ಲ ಅಥವಾ ತಾಟಿಬೆಲ್ಲ ಒಂದು ಚಮಚ ಹಾಕಿ ಸೇವಿಸುತ್ತಾ ಬಂದರೆ, ಗುದುದ್ವಾರದ ಮಾಂಸಖಂಡಗಳು ಬಲಗೊಂಡು ಕರುಳಿನ ಭಾಗ ಹೊರಗಡೆ ಬರದಂತೆ ತಡೆಯುತ್ತದೆ. ಎಳ್ಳೆಣ್ಣೆ ಅಥವಾ ಕೊಬರಿ ಎಣ್ಣೆಗೆ ಮುಟ್ಟಿದಮುನಿ ಸಸ್ಯವನ್ನು ಸಮೂಲ ಸಹಿತ ಹಾಕಿ ಕುದಿಸಿ ಆ ಎಣ್ಣೆಯನ್ನು ಹಚ್ಚಿದರೆ ಮೊಣಕಾಲು ನೋವು ಗುಣವಾಗುತ್ತೆ. 1ಲೀಟರ್ ಎಳ್ಳೆಣ್ಣೆಗೆ 1ಹಿಡಿ ಮುಟ್ಟಿದಮುನಿ ಸಸ್ಯದ ಸಮೂಲ ಹಾಕಿ ಚೆನ್ನಾಗಿ ಕುದಿಸಿ ಸೋಸಿ ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು ದಿನವು ಮೈಗೆಲ್ಲ ಮಸಾಜ್ ಮಾಡಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುತ್ತಿದ್ದರೆ ಚರ್ಮ ಗಟ್ಟಿಯಾಗುತ್ತೆ, ಚರ್ಮ ಸುಕ್ಕಾಗುವುದಿಲ್ಲ, ಜಗ್ಗುವುದಿಲ್ಲ. ಮುಟ್ಟಿದಮುನಿ ಗಿಡದ ಕಾಯಿಗಳ ಚೂರ್ಣವನ್ನು ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತೆ.ವೀರ್ಯಾಣು ವೃದ್ಧಿಗೊಂಡು ನಪುಂಷಕತ್ವ ದೂರವಾಗುತ್ತೆ. ಅತಿ ಮೂತ್ರ ರೋಗದವರು ಇದರ ಎಲೆಗಳ ಜೊತೆ ತಾಟಿಬೆಲ್ಲ ಸೇರಿಸಿ ಜಗಿದು ಸೇವಿಸಿದರೆ ಅತೋಟಿಗೆ ಬರುತ್ತೆ.ಮುಟ್ಟಿದಮುನಿ ಗಿಡದ ಉಪಯೋಗಗಳು ಅಪಾರ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು