ಇಂದಿನ ಔಷಧೀಯ ಸಸ್ಯದ ಪರಿಚಯ: ತಂಗಡೀಗಿಡ

ಆವರ್ತಿಕಿ, ಆವರಿಕೆ, ತಂಗಡಿಗಿಡ, ಹೊ’ನ್ನಂಬರಿ, ತಂಗಡಿಚೆಟ್ಟು, ಆ’ವರಮ್ ಪೂ, ಚರ್ಮರಂಗ, ಮಾಯಹರಿ, ಆ’ವರ್ತಿಕಾ ಎಂಬಾ ಹೆಸರುಗಳಿಂದ ಕರೆಯುತ್ತಾರೆ.
ಕಾಡುಗಳಲ್ಲಿ, ಬೆಟ್ಟಗುಡ್ಡ ಪ್ರ’ದೇಶಗಳಲ್ಲಿ, ಪಾಳು ಭೂಮಿ, ರಸ್ತೆಗಳ ಪಕ್ಕ ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎ’ತ್ತರವಾಗಿ ಪೊದೆಯಂತೆ ಬೆಳೆಯುತ್ತದೆ. ತಂಗಡಿಯಲ್ಲಿ, ತಂಗಡಿ, ನೆ^ಲತಂಗಡಿ, ಮರತಂಗಡಿ, ಸೀ’ಮೆತಂಗಡಿ, ಕಾಡು ತಂಗಡಿ ಎಂಬ ಹತ್ತಾರು ಪ್ರಭೇದಗಳಿದ್ದುರು, ಅ’ವುಗಳಲ್ಲೂ ಔಷಧೀಯ ಗುಣಗಳಿದ್ದರು, ಔಷಧೀಯವಾಗಿ ಉಪ’ಯೋಗಿಸುವುದು ಈ ಕೆಳಗಿನ ಚಿ’ತ್ರದಲ್ಲಿರುವ ತಂಗಡಿ ಗಿಡವನ್ನೆ. ತಂಗಡಿ ಎಲ್ಲೆಂದರಲ್ಲಿ ಬೆಳೆಯುವ ಗಿ’ಡವೆಂದು ಜನರಲ್ಲಿ ತಾತ್ಸಾ’ರವಿದ್ದರೂ, ತಂಗಡಿ ಅಪಾರ ಪ್ರಮಾಣದ ಔಷ’ಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.
ತೆಲಾಂ’ಗಣ ಸರ್ಕಾರ ಐದು ವರ್ಷಗಳ ಹಿಂದೆ “ರಾಜ್ಯಪುಷ್ಫ” ಎಂದು ಘೋ’ಷಣೆ ಮಾಡಿದೆ. ತೆಲಾಂಗಣದ ಜನರಲ್ಲಿ ತಂಗಡಿಗಿಡ ಎಷ್ಟು ಪವಿತ್ರ ಹಾಗು ಪ್ರಾ’ಮುಖ್ಯತೆ ಪಡಿದಿದೆ ಎಂದರೆ “ಬ’ದುಕಮ್ಮ ಪಂಡುಗ” ಹಬ್ಬವೆ ಸಾಕ್ಷಿ.ಈ ಹೂ’ವುಗಳು ಇಲ್ಲದೆ ಹಬ್ಬವೆ ಇಲ್ಲಾ….!
ತಾಜಾ ತಂಗಡಿ ಹೂ’ವುಗಳನ್ನು ತಂದು, ನುಣ್ಣಗೆ ಅರೆದು, ಅದಕ್ಕೆ 2 ಚಮಚ ಗಟ್ಟಿಯಾದ ಮೊಸರು, ಚಿಟಿಕೆ ಅ’ರಸಿಣ ಸೇರಿಸಿ, ಚೆನ್ನಾಗಿ ಮಿ’ಶ್ರಣಮಾಡಿ, ಮುಖಕ್ಕೆ ಲೇ’ಪನಮಾಡಿ, ಅರ್ಧ ಗಂಟೆ ಬಿಟ್ಟು ಮು’ಖವನ್ನು ಉಗರು ಬೆಚ್ಚಗಿನ ನೀರಲ್ಲಿ ತೊ’ಳೆದುಕೊಂಡರೆ, ಮೊಡವೆ, ಕಪ್ಪುಕಲೆಗಳು, ಮಚ್ಚೆಗಳು ಮಾ’ಯವಾಗಿ, ಮುಖದ ಚರ್ಮ ಮೃ’ದುವಾಗಿ ಅದ್ಭುತವಾದ ಕಾಂತಿಯಿಂದ ಹೊ’ಳೆಯುತ್ತದೆ.
100ಗ್ರಾಂ ತಂ’ಗಡಿ ಹೂ’ವುಗಳನ್ನು ತಂದು ಶು’ಭ್ರಗೊಳಿಸಿ, 250ml ಶುದ್ಧ ಕೊ’ಬ್ಬರಿ ಎಣ್ಣೆಯಲ್ಲಿ ಹಾಕಿ, ಒಲೆ’ಯಮೇಲಿಟ್ಟು ಚೆನ್ನಾಗಿ ಕುದಿಸಿ, ಉಗರು ಬೆ’ಚ್ಚಗಾದಾಗ, ತಲೆಕೂದಲಿನ ಬುಡಕ್ಕೆ ಮ’ಸಾಜ್ ಮಾಡಿಕೊಂಡರೆ, ತ’ಲೆಯಲ್ಲಿನ ಹೊಟ್ಟು (d’andruff) ನವೆ ಮಾಯವಾಗುತ್ತೆ. ತಲೆ’ಕೂದಲು ಕಪ್ಪುಗೆ ಸೊಂ’ಪಾಗಿ ಬೆಳೆಯುತ್ತೆ.
ದೇಹದಲ್ಲಿ ಮೂ’ಳೆಮುರಿತವಾದಾಗ, ತಂಗಡಿ ಎಲೆಗಳನ್ನು ತಂದು ಅದಕ್ಕೆ ಕೋ’ಳಿಮೊಟ್ಟೆಯ ಬಿ’ಳಿಯಭಾಗ ಸೇರಿಸಿ, ನುಣ್ಣಗೆ ಅರೆದು ಮೂಳೆ ಮುರಿದಕಡೆ ಲೇ’ಪನಮಾಡಿ, ಹತ್ತಿಬಟ್ಟೆಯಿಂದ ಕಟ್ಟು’ಕಟ್ಟಿದರೆ, ನೋವು, ಊತ ನಿ’ವಾರಣೆಯಾಗಿ ಮುರಿದ ಮೂಳೆ ಬೇಗನೆ ಕೂ’ಡಿಕೊಳ್ಳುತ್ತೆ.
ದಿನವು ಬೆಳಿಗ್ಗೆ ಖಾಲಿ ಹೊ’ಟ್ಟೆಯಲ್ಲಿ, ಹತ್ತರಿಂದ ಹ’ದಿನೈದು ಹೂವಿನ ದಳಗಳನ್ನು ಬಾಯಲ್ಲಿ ಹಾಕಿ’ಕೊಂಡು ಜಗಿದು ತಿನ್ನುತ್ತಾ ಬಂದರೆ ಮಧುಮೇಹಿಗಳ ರ’ಕ್ತದಲ್ಲಿನ ಸಕ್ಕರೆ ಪ್ರಮಾಣ (b’lood sugar) ಕಡಿಮೆಯಾಗುವು’ದಲ್ಲದೆ, ಹ’ತೋಟಿಯಲ್ಲಿರುತ್ತೆ.ಬಹುಮೂತ್ರ ರೋಗವು ಸಹ ಹ’ತೋಟಿಗೆ ಬರುತ್ತೆ.ಮಲಬದ್ಧತೆ ಸಹ ದೂರವಾಗುತ್ತೆ.
ತಂಗಡಿ ಮೊಗ್ಗು, ಬೀಜ ತೆ’ಗೆದ ಬೆಟ್ಟದ ನೆ’ಲ್ಲಿಕಾಯಿ, ನೇರಳೆ ಬೀಜ, ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವ’ಸ್ತ್ರಗಾಲಿತ ಚೂರ್ಣ ಮಾ’ಡಿಟ್ಟುಕೊಂಡು, ದಿನವು ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ 1 ಚ’ಮಚ ಕಲಸಿ ಕುಡಿ’ಯುತ್ತಿದ್ದರೆ, ಮಧುಮೇಹ ಹತೋಟಿಗೆ ಬರುತ್ತೆ.
ತಂಗಡಿ ಹೂವಿನ ಜೊ’ತೆಗೆ ಬೆಳ್ಳುಳ್ಳಿ ಸೇರಿಸಿ ದಿನವು ಜಗಿದು ತಿನ್ನುತ್ತಿದ್ದರೆ ಪು’ರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನ’ಪುಂಸಕತ್ವ ದೂ’ರವಾಗುತ್ತೆ. ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಸಾಯುತ್ತವೆ.
10-12 ತಂಗಡಿ ಮೊ’ಗ್ಗುಗಳನ್ನು ಚೆನ್ನಾಗಿ ನುಣ್ಣಗೆ ಅರೆದು, ಅದಕ್ಕೆ ಚಿಟಿಕೆ ಅ’ತಿಮಧುರ ಚೂರ್ಣ ಸೇರಿಸಿ, ನು’ಣ್ಣಗೆ ಅರೆದು, ಗುಳಿಗೆಗಳನ್ನು ಮಾಡಿ, ನೆ’ರಳಲ್ಲಿ ಒಣಗಿಸಿ, ದಿನವು ಬೆಳಿಗ್ಗೆ ಸಂಜೆ ಒಂ’ದೊಂದು ಮಾತ್ರೆ ನುಂಗಿ, ಅದರ ಮೇಲೆ ಒಂದು ‘ಲೋಟ ಹಸುವಿನ ಹಾಲು ಕು’ಡಿಯುತ್ತಾ ಬಂದರೇ ಧಾತು ವೃದ್ಧಿಯಾಗಿ ದೇಹಕ್ಕೆ ಅ’ಪಾರ ಶಕ್ತಿಬರುತ್ತೆ.
ಮಕ್ಕಳಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿ’ಸಿಕೊಂಡಾಗ, ಮಜ್ಜಿಗೆಯಲ್ಲಿ ಕಾಂಡದ ತೊ’ಗಟೆ ಅಥವಾ ಬೇರಿನ ಗಂಧ ತೇಯ್ದು, ಕಿ’ಬ್ಬೊಟ್ಟೆಯ ಸುತ್ತ ಲೇಪನ ಮಾ’ಡಿದರೆ ಶೀಘ್ರ ಶಮನವಾಗುತ್ತೆ.
ಒಂದು ಪಾ’ತ್ರೆಯಲ್ಲಿ 250ml ನೀರು ಹಾಕಿ, 10-15 ತಂಗಡಿ ಹೂ’ವುಗಳು, ಚಿಟಿಕೆ ಜೀರಿಗೆ ಐದಾರು ಕಾ’ಳುಮೆಣಸು, ಚಿಟಿಕೆ ಉಪ್ಪು ಹಾಕಿ, ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 50ml ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಕೆಮ್ಮು ದಮ್ಮು ಕಫ, ನೆಗಡಿ, ಗಂಟಲು ನೋವು ನಿವಾರಣೆಯಾಗುತ್ತೆ. ಕಷಾಯ ಸೇವನೆಯಿಂದ ದೇಹ ತಂಪಾಗುತ್ತೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತೆ.ಇದು ತುಂಬಾ ಅದ್ಭುತವಾದ ಪಾನೀಯ.
ತಂಗಡಿ ಚಿಗರು ಎಲೆಗಳು ತಂದು, ಅದಕ್ಕೆ ಚಿಟಿಕೆ ಅರಸಿಣ, ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ವ್ರಣದ ಮೇಲೆ ಲೇಪನ ಮಾಡಿದರೆ, ಶೀಘ್ರ ಗುಣವಾಗುತ್ತೆ. ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಹೊಟ್ಟೆಯಲ್ಲಿನ ಜಂತುಹುಳುಗಳು ಸಾಯುತ್ತವೆ. ಮೂತ್ರಕೋಶ ವ್ಯಾಧಿಗಳು, ಮೂತ್ರದಲ್ಲಿನ ಹುರಿ, ನೋವು ವಾಸಿಯಾಗುತ್ತೆ.
ತಂಗಡಿ ಬೀಜ, ನೇರಳೆ ಬೀಜ, ಮೆಂತ್ಯಕಾಳು ಸಮನಾಗಿ ತೆಗೆದುಕೊಂಡು, ನೆರಳಲ್ಲಿ ಒಣಗಿಸಿ ಪುಡಿಮಾಡಿ, ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು 1 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಕುಡಿಯುತ್ತಿದ್ದರೆ ಮಧುಮೇಹ ಅತೋಟಿಯಲ್ಲಿರುತ್ತೆ.
ತಂಗಡಿ ಹೂವುಗಳಲ್ಲಿ ರಸವನ್ನು ತೆಗೆದು, 2 ಚಮಚ ರಸಕ್ಕೆ1 ಚಮಚ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ, ಉಷ್ಣತೆಯಿಂದ ಕೂಡಿರುವ ದೇಹವನ್ನು ತಂಪಾಗಿಸಿ, ಆಲಸ್ಯ ದೂರಮಾಡುತ್ತೆ.ಅತಿ ಮೂತ್ರ ಸಹ ಹತೋಟಿಗೆ ಬರುತ್ತೆ.
ಜೇನುಹುಳು, ಚೇಳು ಕಚ್ಚಿದ ಕಡೆ ಇದರ ಎಲೆಗಳ ರಸವನ್ನು ಲೇಪಿಸಿದ್ರೆ, ವಿಷ ನಿವಾರಣೆಯಾಗುತ್ತೆ.
ಪಾದದಲ್ಲಿ ಬಿರಕು ಬಿಟ್ಟಾಗ, ತಂಗಡಿ ಎಲೆಗಳನ್ನು ಮಜ್ಜಿಗೆಯಲ್ಲಿ ನುಣ್ಣಗೆ ಅರೆದು ಲೇಪನ ಮಾಡಿದರೆ ಬೇಗನೆ ಕೂಡಿಕೊಂಡು ನೋವು ನಿವಾರಣೆಯಾಗುತ್ತೆ.
ಐದಾರು ತಂಗಡಿ ಚಿಗರು ನುಣ್ಣಗೆ ಅರೆದು, ಮೊಸರಲ್ಲಿ ಕಲಸಿ ಬೆಳಿಗ್ಗೆ ಸಂಜೆ ಸೇವಿಸಿದರೆ ಅತಿಸಾರಭೇದಿ ಬೇಗನೆ ಗುಣವಾಗುತ್ತೆ.
ತಂಗಡಿ ಹೂವುಗಳನ್ನು ಶೇಖರಿಸಿ ಅದಕ್ಕೆ ಸಕ್ಕರೆ, ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ, ಉರಿಮೂತ್ರ ರೋಗ ನಿವಾರಣೆಯಾಗುತ್ತೆ.
ತಂಗಡಿ ಅಪಾರ ಔಷಧೀಯ ಗುಣಗಳುಳ್ಳ ಗಣಿ ನಾಳೆ ಇನ್ನೊಂದು ಔಷಧೀಯ ಸಸ್ಯದ ಪರಿಚಯ ಮಾಡಿಕೊಳ್ಳೋಣ ಗೆಳೆಯರೇ

Leave a comment

Design a site like this with WordPress.com
Get started