ಜುಲೈ 22,2020; ಬುಧವಾರ: ಇಂದಿಶ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವಸಂತ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಬುಧವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:18

ಮೇಷ

ಉದ್ಯೋಗದ ವಿಷಯದಲ್ಲಿ ಭಾಗ್ಯೋದಯದ ವಾರ್ತೆಯನ್ನು ಕೇಳಲಿದ್ದೀರಿ. ಮಿತ್ರರ ಔದಾರ್ಯವು ದೊರಕುವುದು. ಆರ್ಥಿಕ ಅಭಿವೃದ್ಧಿ ಕಾಣುವಿರಿ. ಬಂಧುಗಳೊಂದಿಗೆ ಅತಿಯಾದ ಜಿಗುಟುತನದಿಂದಾಗಿ ವಿರಸ.

ವೃಷಭ

ವ್ಯವಹಾರದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ. ಹತ್ತಿ, ಬಟ್ಟೆ ವ್ಯಾಪಾರದಿಂದ ಅಧಿಕ ಲಾಭವನ್ನು ಹೊಂದುವಿರಿ. ಗುತ್ತಿಗೆ ಕೆಲಸ ನಿರ್ವಹಣೆಗಾಗಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಧ್ಯತೆ.

ಮಿಥುನ

ಗಣಿಗಾರಿಕೆ, ಕಲ್ಲು ಕೆಲಸಗಾರರಿಗೆ ಬೇಡಿಕೆ ಹೆಚ್ಚಿ ಉತ್ತಮ ಆದಾಯ ದೊರಕಲಿದೆ. ಸರ್ಕಾರದಿಂದ ಬರಬೇಕಾದ ಸಹಾಯಧನ ದೊರಕುವ ಸಾಧ್ಯತೆ. ಬಹುದಿನಗಳ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಕೊನೆಗೊಳ್ಳುವುದು.

ಕಟಕ

ಉದ್ಯೋಗದಲ್ಲಿ ಪ್ರಗತಿ. ಬಟ್ಟೆ, ಶೃಂಗಾರ ಸಾಮಗ್ರಿಗಳ ವ್ಯಾಪಾರಸ್ಥರು, ಪ್ರಸಾದನ ಕಲಾವಿದರುಗಳಿಗೆ ಹೆಚ್ಚಿನ ಆದಾಯ. ಮಹಿಳಾ ರಾಜಕಾರಣಿಗಳಿಗೆ ಗೌರವ ಪ್ರತಿಷ್ಠೆಗಳು ಪ್ರಾಪ್ತವಾಗುವವು.

ಸಿಂಹ

ಭೂಮಿ ಖರಿದಿ ಸಾಧ್ಯತೆ ಕಂಡುಬರುತ್ತಿದೆ. ಪತ್ರ ವ್ಯವಹಾರ ನಡೆಸುವಾಗ ಯೋಚಿಸಿ ಮುಂದುವರಿಯುವುದು ಉತ್ತಮ. ನಾನಾ ಮೂಲಗಳಿಂದ ಸಂಪದಭಿವೃದ್ಧಿಯನ್ನು ಕಾಣಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕನ್ಯಾ

ಸ್ಟೀಲ್, ಕಬ್ಬಿಣ ಮುಂತಾದ ಲೋಹಗಳ ವ್ಯಾಪಾರಸ್ಥರು ವಿಶೇಷ ಲಾಭ ಹೊಂದಲಿದ್ದೀರಿ. ವಿಶೇಷ ಕೆಲಸದ ನಿಮಿತ್ತ ದೂರದ ಪ್ರಯಾಣ ಸಾಧ್ಯತೆ. ಮಂಗಳ ಕಾರ್ಯಗಳ ಸಲುವಾಗಿ ಮಾತುಕತೆ ನಡೆಸಲಿದ್ದೀರಿ.

ತುಲಾ

ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ. ತಾಳ್ಮೆ ಮತ್ತು ಬುದ್ಧಿಮತ್ತೆಯಿಂದಾಗಿ ಯಶಸ್ಸನ್ನು ಹೊಂದುವಿರಿ. ಆಹಾರಧಾನ್ಯಗಳ ವ್ಯಾಪಾರಿಗಳಿಗೆ ಉತ್ತಮ ಆದಾಯ.

ವೃಶ್ಚಿಕ

ಕ್ರೀಡೆ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಉಪಾಧ್ಯಾಯರು, ಉಪನ್ಯಾಸಕರುಗಳಿಗೆ ಸನ್ಮಾನ, ಗೌರವಗಳು ಪ್ರಾಪ್ತವಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿ ಸಾಧ್ಯತೆ.

ಧನು

ಸ್ಥಿರಾಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ. ವಿದ್ಯುತ್, ಬೆಂಕಿ ಮುಂತಾದವುಗಳ ಜೊತೆ ಕೆಲಸ ಮಾಡುವವರು ಅತ್ಯಂತ ಜಾಗರೂಕರಾಗಿರುವುದು ಒಳಿತು. ವಿವಿಧ ಮೂಲಗಳಿಂದ ಆದಾಯವು ಹರಿದುಬರಲಿದೆ.

ಮಕರ

ವೈದ್ಯ ವೃತ್ತಿಯಲ್ಲಿರುವವರಿಗೆ, ವಾಣಿಜ್ಯ ಬೆಳೆಗಳ ದಲ್ಲಾಳಿಗಳಿಗೆ ಉತ್ತಮ ಆದಾಯ. ಅರಣ್ಯಾಧಿಕಾರಿಗಳಿಗೆ ಅನಿರೀಕ್ಷಿತ ವರಮಾನ ದೊರಕಲಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ಮೆಟ್ಟಿಲು ದೊರಕುವುದು.

ಕುಂಭ

ಉದ್ಯೋಗದಲ್ಲಿ ಯಶಸ್ಸು ಮತ್ತು ಖ್ಯಾತಿ ದೊರಕುವುದು. ಮಕ್ಕಳಿಗೆ ಅದೃಷ್ಟ ಒದಗಿ ಬರುವುದು. ಷೇರುಪೇಟೆ ವಹಿವಾಟುದಾರರಿಗೆ ವ್ಯವಹಾರದಲ್ಲಿ ಹೆಚ್ಚಳವಾಗುವ ಸಾಧ್ಯತೆ.

ಮೀನ

ದೊಡ್ಡ ದೊಡ್ಡ ಸಾಹಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಖರೀದಿ ವ್ಯವಹಾರದಲ್ಲಿ ತೊಡಕುಂಟಾಗಿ ದುಂದು ವೆಚ್ಚವನ್ನು ಭರಿಸಬೇಕಾದೀತು. ಮನೆಯವರೊಂದಿಗೆ ವಿರಸವುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

Leave a comment

Design a site like this with WordPress.com
Get started