ಇಂದಿನ ಔಷಧೀಯ ಸಸ್ಯ : ಪೇರಳೆ ಯಾ ಸೀಬೆಕಾಯಿ

ಅಮೃತಾ ಫಲಂ ಪೇರಳೆ,ಸೀಬೆಕಾಯಿ,ಚೇಪೆಕಾಯಿ,ಸೀಬೆ ಹಣ್ಣು,ಜಾಮುಕಾಯಿ,ಕೊಯ್ಯ ಫಳಮ್,ಗುವ, ಅಮೃದ್, ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೆರೆ ಕಟ್ಟೆಗಳ ಮೇಲೆ,ಹೊಲ,ಗದ್ದೆಗಳ ಬದಿಗಳ ಮೇಲೆ,ಕೆಲವು ಕಡೆ ತೋಟಗಳಲ್ಲಿ ವಿರಳವಾಗಿ ಬೆಳೆಯುತ್ತಿದ್ದ ಸೀಬೆಹಣ್ಣು ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು,ಈಗ ಎಲ್ಲೆಲ್ಲೂ ವಾಣಿಜ್ಯ ಬೆಳೆಯಾಗಿ ಹೇರಳವಾಗಿ ಬೆಳೆದು ಅಪಾರ ಲಾಭ ಗಳಿಸುತ್ತಿದ್ದಾರೆ. ಸೀಬೆ ಎಲೆಗಳನ್ನು ತಂದು,ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ದಿನಕ್ಕೆ 50ml ನಂತೆ ಸೇವಿಸುತ್ತಿದ್ದರೆ,

ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.ದೇಹದ
ತೂಕ ಇಳಿಯುತ್ತದೆ.ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತೆ.ರಕ್ತದ್ಲಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತೆ. ಜೀರ್ಣಕ್ರಿಯೆ ಚೆನ್ನಾಗಾಗಿ, ಹೊಟ್ಟೆಯಲ್ಲಿನ ಹುಣ್ಣನ್ನು
ಗುಣಪಡಿಸುತ್ತೆ.
2 ಸೀಬೆ ಎಲೆ 2 ಮಾವಿನ ಎಲೆ 2 ನೇರಳೆ ಎಲೆ 10 ತುಳಸಿ ಎಲೆ 4 ದೊಡ್ಡ ಪತ್ರೆ 200ml ನೀರಿನಲ್ಲಿ ಹಾಕಿ ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ ಸೋಸಿ, ಉಗರು ಬೆಚ್ಚಗಾದಾಗ 2 ಚಮಚ ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ,ನೆಗಡಿ,ಕೆಮ್ಮು,ಕಫ,ವಾತ, ಪಿತ್ತ,ಜ್ವರ,ಅಜೀರ್ಣ ಸಮಸ್ಯೆ ಗುಣವಾಗುತ್ತೆ.ಒಣ ಕೆಮ್ಮು, ಅಸ್ತಮಾ ಸಹಾ ವಾಸಿಯಾಗುತ್ತೆ.
ತೊಗಟೆಯನ್ನು ಗಂಧ ತೇಯ್ದು ಬಾವು,
ಗಾಯ, ಹುಣ್ಣುಗಳ ಮೇಲೆ ಲೇಪನ ಮಾಡಿದರೆ
ವಾಸಿಯಾಗುತ್ತೆ.
ಸೀಬೆ ಹಣ್ಣಿನಲ್ಲಿ ನಾರಿನಾಂಶ ಅಧಿಕವಿದ್ದು,
ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯಿಂದ
ಮುಕ್ತಿಹೊಂದಬಹುದು.ಹಸಿಕಾಯಿ ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ.ಸೀಬೆಕಾಯಿ
ರಸ ತೆಗೆದು ಅದಕ್ಕೆ ಜೇನುತುಪ್ಪ ಕಲಸಿ ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಿ, ಹೃದಯವನ್ನು
ಗಟ್ಟಿಗೊಳಿಸುತ್ತೆ.
ಕಣ್ಣು ನೋವು, ಕಣ್ಣು ಕೆಂಪಗೆ ಇದ್ದಾಗ ಸೀಬೆ ಹೂವಿನ ರಸ ಹಿಂಡಿ, ಅದನ್ನು ಹರಳೆಣ್ಣೆಯಲ್ಲಿ ರಂಗಳಿಸಿ, ಕಣ್ಣಿಗೆ ಎರಡು ಮೂರು ತೊಟ್ಟು ಬಿಟ್ಟರೆ ಶೀಘ್ರ ವಾಸಿಯಾಗುತ್ತೆ.
ವಸಡುಗಳಲ್ಲಿ ಬಲವಿಲ್ಲದೆ ಹಲ್ಲುಗಳು ಅಲ್ಲಾಡುವುದು, ವಸುಡುಗಳಲ್ಲಿ ರಕ್ತ ಸುರಿಯುವಾಗ ಸೀಬೆ ದ್ವಾರಕಾಯಿಯನ್ನು ಜಗಿದು ತಿನ್ನುತ್ತಿದ್ದರೆ,
ವಸಡುಗಳು ಬಲಗೊಂಡು ದಂತಪಂಕ್ತಿ ಗಟ್ಟಿಯಾಗಿ
ರಕ್ತಸ್ರಾವ ನಿಲ್ಲುತ್ತೆ.
ಹಸಿ ಸೀಬೆಕಾಯಿಯನ್ನು ಜಜ್ಜಿ 200ml ನೀರು ಹಾಕಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಸೋಸಿ ಉಗರು ಬೆಚ್ಚಗಾದಾಗ ಮಜ್ಜಿಗೆಯಲ್ಲಿ ಕಲಸಿ ಕುಡಿದರೆ, ಅತಿಸಾರ ಭೇದಿ, ವಾಂತಿ ನಿಲ್ಲುತ್ತೆ.
1ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣಿನ ರಸ ತೆಗೆದು,(ಬೀಜ ಬಿಸಾಕಿ) ಸೋಸಿದ ರಸಕ್ಕೆ 2 ಚಮಚ
ಜೇನುತುಪ್ಪ ಕಲಸಿ, ಅದನ್ನು ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಬಲಹೀನತೆ ದೂರವಾಗುತ್ತೆ.ಇದರಲ್ಲಿ ವಿಟಮಿನ್ C ಇದ್ದು,ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ದೊರೆಯುತ್ತದೆ.
(ಗರ್ಭಿಣಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಟಾನಿಕ್ ನಂತೆ ಅದ್ಭುತವಾಗಿ ಕೆಲಸ ಮಾಡುತ್ತೆ)
ಇದು ಹೃದಯ ಬಲ ಹೀನತೆ, ಜೀರ್ಣಕ್ರಿಯೆ,
ಮೂತ್ರದಲ್ಲಿನ ಉರಿ ಮುಂತಾದ ಸಮಸ್ಯೆಗಳಿಗೂ ಅದ್ಭುತವಾಗಿ ಕೆಲಸ ಮಾಡುತ್ತೆ.
ಸೀಬೆಯಲ್ಲಿ ಔಷಧೀಯ ಭಂಡಾರವೆ ತುಂಬಿದೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ ವಂದನೆಗಳು

Leave a comment

Design a site like this with WordPress.com
Get started