ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .

ಎಲ್ಲವೂ ಸರ್ಕಾರದ ಆದೇಶದಂತೆ ನಡೆದದ್ದು.

ಕೊರೋನಾ ನಿಯಂತ್ರಣದಲ್ಲೂ ಉಡುಪಿ No-1 ಜಿಲ್ಲೆ ಆಗಿತ್ತು …
ಸರ್ಕಾರ ನಿಯಮಗಳನ್ನು ರೂಪಿಸಿದೆ. ಅಧಿಕಾರಿಗಳು ಅದನ್ನು ಪಾಲಿಸಿದ್ದಾರೆ. ಜನ ಸಹಕಾರ ನೀಡಿದ್ದಾರೆ. ಮತ್ತೇನಿದೆ.
ಇಲ್ಲಿ ಒಳ್ಳೆಯದಾದರೆ ಅದು ಅಧಿಕಾರಿಗಳಿಂದ. .
ಸ್ವಲ್ಪ ಸಮಸ್ಯೆ ಆದರೆ ಅದಕ್ಕೆ ಜನ ಪ್ರತಿನಿಧಿಗಳು ಕಾರಣ. . ಯಾಕೀ ಧೋರಣೆ?????

ವರದಿ ಬರುವ ಮೊದಲು ಕ್ವಾರಂಟೈನ್ ನಲ್ಲಿ ಇದ್ದವರನ್ನು ಮನೆಗೆ ಕಳುಹಿಸಲು ಸರ್ಕಾರದ ಆದೇಶ ಅದನ್ನು ಪಾಲನೆ ಮಾಡಿದ್ದಾರೆ.
ಉಡುಪಿ ಜಿಲ್ಲೆ ಗ್ರೀನ್ ಝೋನ್ ಬರಲು ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಅಷ್ಟೇ..

ಇಲ್ಲಿ ಅಧಿಕಾರಿಗಳು ಯಾರೇ ಇರಲಿ. ಪಾಲನೆ ಆಗಿದ್ದು, ಸರ್ಕಾರದ ಆದೇಶ.

ಹೊರ ರಾಜ್ಯ, ಹೊರ ದೇಶದಿಂದ ಬಂದವರು 14 ದಿನ ಕ್ವಾರಂಟೈನ್ ಗೊಳಗಾಗಿ ವರದಿ ಬಂದ ನಂತರ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆ. . . ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್. . . ಎಂದು ಸರ್ಕಾರ ಮೊದಲು ಆದೇಶಿಸಿತ್ತು.

ಕ್ವಾರಂಟೈನ್ ನಲ್ಲಿ ಇದ್ದವರನ್ನು ವರದಿ ಕೈ ಸೇರುವ ಮುನ್ನ ಮನೆಗೆ ಕಳುಹಿಸಿದ್ದು ಯಾರು. ಆನಂತರದ ಆವಾಂತರಕ್ಕೆ ಕಾರಣ ಯಾರು. ಬಂದ ವರದಿಗಳನ್ನು ತಕ್ಷಣದಲ್ಲಿ ವಿಭಾಗಿಸಿ ಆಯಾ ತಾಲೂಕಿಗೆ ಕಳುಹಿಸುವಲ್ಲಿ ವಿಳಂಬ ಮಾಡಿದ್ದು ಯಾರು. ಉತ್ತರ ಜಿಲ್ಲಾಡಳಿತ ನೀಡಬೇಕು.
ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .

Leave a comment

Design a site like this with WordPress.com
Get started