ಎಪ್ರಿಲ್ 09, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ

9-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ‌ ದಿನ 26 ಸಲುವ ಫಾಲ್ಗುಣ ಬಹುಳ ತ್ರಯೋದಶಿ 55| ಗಳಿಗೆ ದಿನ ವಿಶೇಷ :ಪ್ರದೋಷನಿತ್ಯ ನಕ್ಷತ್ರ :ಪೂರ್ವಾಭಾದ್ರಾ 60 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.23 ಗಂಟೆ

ಮೇಷ

ಸರ್ಕಾರಿ ನೌಕರಿಯಲ್ಲಿರುವವರು ಕಾರ್ಯ ನೈಪುಣ್ಯತೆಯಿಂದ ಪ್ರಶಂಸೆಗೆ ಭಾಜನರಾಗುವಿರಿ. ಒಪ್ಪಿಕೊಂಡ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿ. ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಿ. ದೇವತಾ ಆರಾಧನೆ ಶ್ರೇಯಸ್ಕರ.

ವೃಷಭ

ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸಿ. ಸಹೋದ್ಯೋಗಿಗಳಿಂದ ಸಕಾಲಿಕ ಸಲಹೆಗಳು ದೊರೆಯುವವು. ಬೇರೆಯವರ ಒತ್ತಡಕ್ಕೆ ದುಂದು ವೆಚ್ಚ ಮಾಡುವ ಸಾಧ್ಯತೆ.

ಮಿಥುನ

ಆಕಸ್ಮಿಕ ಧನ ಪ್ರಾಪ್ತಿ. ಕಳೆದು ಹೋದ ವಸ್ತುವನ್ನು ಮರಳಿ ಪಡೆಯಲಿದ್ದೀರಿ. ಮಹಿಳೆಯರಿಗೆ ಸಾಮಾಜಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿಖರತೆ ದೊರಕಲಿದೆ.

ಕಟಕ

ವ್ಯವಹಾರದಲ್ಲಿ ಮಿತವ್ಯಯ ಸಾಧಿಸಲಿದ್ದೀರಿ. ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನೈಪುಣ್ಯತೆ ಕಾಯ್ದುಕೊಳ್ಳುವಿರಿ. ಕಾರ್ಯನಿಮಿತ್ತ ದೂರ ಪ್ರಯಾಣ.

ಸಿಂಹ

ಅಡ್ಡಿ ಆತಂಕಗಳಿಲ್ಲದೆ ಕಾರ್ಯಗಳು ನೆರವೇರುವವು. ಮಧ್ಯವರ್ತಿಗಳ ಸಹಾಯದಿಂದ ವಿವಾಹಾದಿ ಕಾರ್ಯಗಳು ಸುಸೂತ್ರವಾಗಿ ನೆರವೇರುವವು. ಸಂಗಾತಿಯ ಮಾತುಗಳನ್ನು ಗೌರವಿಸಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.

ಕನ್ಯಾ

ವಿಶೇಷ ಸಮಾರಂಭವೊಂದರಲ್ಲಿ ಭಾಗಿ. ವರ್ತಮಾನದ ವಿಷಯಗಳನ್ನು ಅವಲೋಕಿಸಿ ಕಾರ್ಯ ಮಗ್ನರಾಗುವುದು ಉಚಿತ. ಆರ್ಥಿಕ ಸಮೃದ್ಧಿಯ ದಿನ. ಪರರಿಂದ ಸಹಾಯ ಸಹಕಾರಗಳು ಧಾರಾಳವಾಗಿ ದೊರಕುವುದು.

ತುಲಾ

ಸೌಜನ್ಯದಿಂದ ಘನತೆ ಗೌರವಗಳನ್ನು ಪಡೆಯುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು. ಕಳೆದುಹೋದುದನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಬಂಧುವರ್ಗದವರಿಂದ ಪ್ರಶಂಸೆ.

ವೃಶ್ಚಿಕ

ನೈತಿಕ ಬಲದಿಂದಾಗಿ ಸುತ್ತಮುತ್ತಲೂ ಉತ್ತಮ ವಾತಾವರಣ ಸೃಷ್ಟಿ ಮಾಡುವಿರಿ. ಸಾರ್ವಜನಿಕವಾಗಿ ಪ್ರಶಂಸೆಗಳು ಕೇಳಿಬರಲಿವೆ. ಹಿತ ಶತ್ರುಗಳಿಂದ ತೊಂದರೆ ಎದುರಿಸಬೇಕಾದೀತು.

ಧನು

ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಇಕ್ಕಟ್ಟಿಕೆ ಸಿಲುಕುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ. ಆರೋಗ್ಯದಲ್ಲಿ ಸುಧಾರಣೆ. ಸಹೋದ್ಯೋಗಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆ.

ಮಕರ

ತೊಗರಿ, ಕಡಲೆ ಮುಂತಾದ ಹಳದಿ ಕಾಳುಗಳ ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ಪ್ರಶಂಸೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಿ ನಷ್ಟ ಅನುಭವಿಸುವ ಸಾಧ್ಯತೆ.

ಕುಂಭ

ಕ್ರೀಡಾಪಟುಗಳಿಗೆ ವಿಶೇಷ ಸಾಧನೆ ಮಾಡುವ ಅವಕಾಶ. ಅನುಭವಿಕರಿಂದ ಸಹಾಯ ದೊರಕಲಿದೆ. ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅನೇಕ ಮಾರ್ಗಗಳು ಕಂಡುಬರಲಿವೆ.

ಮೀನ

ಯಾಂತ್ರಿಕ ಸಲಕರಣೆಗಳ ಮಾರಾಟ ವ್ಯವಹಾರದಿಂದಾಗಿ ಉತ್ತಮ ಲಾಭ. ದಕ್ಷತೆಯಿಂದಾಗಿ ವ್ಯವಹಾರದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕಾರ್ಯಬಾಹುಳ್ಯದಿಂದಾಗಿ ಅತಿಯಾದ ಆಯಾಸ.

Leave a comment

Design a site like this with WordPress.com
Get started