ಎಪ್ರಿಲ್ 06,ಮಂಗಳವಾರ, 2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ,
ತಿಥಿ : ದಶಮಿ,
ನಕ್ಷತ್ರ : ಶ್ರವಣ,
ರಾಹುಕಾಲ: 3.30 ರಿಂದ 5.02
ಗುಳಿಕಕಾಲ: 12.26 ರಿಂದ 1.58
ಯಮಗಂಡಕಾಲ: 9.22 ರಿಂದ 10.54

ಮೇಷ

ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತಲೂ ಅಧಿವಾದ ಯಶಸ್ಸು. ವಿವಾಹಾಕಾಂಕ್ಷಿಗಳಿಗೆ ಶುಭ ವಾರ್ತೆ. ಆದಾಯದಲ್ಲಿ ತಕ್ಕ ಮಟ್ಟಿನ ಹೆಚ್ಚಳ.

ವೃಷಭ

ಯಾವುದೇ ವಿಷಯದಲ್ಲಿ ದುಗುಡಕ್ಕೆ ಎಡೆ ಮಾಡಿಕೊಡುವುದು ಉತ್ತಮವಲ್ಲ. ತಾಳ್ಮೆ ನಿಮಗೆ ನೆಮ್ಮದಿ ತಂದುಕೊಡುವುದು. ದಿನದ ಮಟ್ಟಿಗೆ ವಿವಾಹಾದಿ ಕಾರ್ಯಗಳಿಗೆ ಹಿನ್ನಡೆ ಉಂಟಾದೀತು.

ಮಿಥುನ

ಸ್ನೇಹಿತರ ಸಹಕಾರದಿಂದ ನಿಮ್ಮ ಕಾರ್ಯಸಾಧನೆ ಅತ್ಯಂತ ಯಶ ಕಾಣುವುದು. ಸಮಸ್ಯೆಗಳು ಎದುರಾದಲ್ಲಿ ನಿಧಾನ ಚಿಂತಿಸಿ ಪರಿಹರಿಸಿಕೊಳ್ಳಿ. ಸಂಗಾತಿಯ ತಾಳ್ಮೆಯಿಂದ ಕೂಡಿದ ವರ್ತನೆಯಿಂದ ನೆಮ್ಮದಿ.

ಕಟಕ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಕಾಣಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಧನ ಹೊಂದಾಣಿಕೆ ಮಾಡಬೇಕಾದೀತು. ಸರ್ಕಾರಿ ನೌಕರಸ್ಥರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾದೀತು.

ಸಿಂಹ

ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುವವು. ಎದುರಾದ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಧನವ್ಯಯ.

ಕನ್ಯಾ

ದೂರಪ್ರಯಾಣದ ಯೋಗ. ಮಹಿಳೆಯರಿಗೆ ಬಂಧು ಬಾಂಧವರೊಂದಿಗೆ ಸಂತಸದ ದಿನವಾಗಿ ಪರಿಣಮಿಸುವುದು. ಹೊಸ ಯೋಜನೆಗೆ ಸಕಾಲವಲ್ಲ.

ತುಲಾ

ದಾಯಾದಿಗಳ ನಡುವಿನ ವೈಮನಸ್ಸು ದೂರ. ಜನ ಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಸರ್ಕಾರಿ ನೌಕರ ವರ್ಗದವರಿಂದಿ ಕಿರಿಕಿರಿ ಅನುಭವಿಸಬೇಕಾದೀತು. ಸಾರ್ವಜನಿಕ ಕ್ಷೇತ್ರದಲ್ಲಿ ನಿಂದನೆಗಳನ್ನು ಎದುರಿಸಬೇಕಾದೀತು.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಗೆ ಅನುಕೂಲ ವಾತಾವರಣ. ವ್ಯವಹಾರಸ್ಥರಿಗೆ ಸಾಧಾರಣ ಲಾಭ. ಉನ್ನತ ಸ್ಥಾನದಲ್ಲಿರುವವರಿಗೆ ಗೌರವಕ್ಕೆ ಕುತ್ತುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಧನು

ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ತಾತ್ಕಾಲಿಕ ನೆಮ್ಮದಿ. ಉದ್ಯೋಗದಲ್ಲಿರುವವರು ಶಿಸ್ತು ಸಂಯಮ ಕಾಪಾಡಿಕೊಳ್ಳುವುದು ಅವಶ್ಯ.

ಮಕರ

ಮದುವೆ ಮುಂಜಿ ಮುಂತಾದ ಮಂಗಳ ಕಾರ್ಯಗಳು ನಿಶ್ಚಯಗೊಂಡು ನಿರ್ವಿಘ್ನವಾಗಿ ಸಾಗುವವು. ಸರ್ಕಾರಿ ನೌಕರಿಯಲ್ಲಿರುವವರಿಗೆ ಅತಿಯಾದ ಕಾರ್ಯ ಬಾಹುಳ್ಯ.

ಕುಂಭ

ಮಹಿಳೆಯರು ಸಂತಸ ಸಂಭ್ರಮದೊಂದಿಗೆ ದಿನವನ್ನು ಕಳೆಯುವಿರಿ. ಕಲಾವಿದರು, ಪತ್ರಕರ್ತರಿಗೆ ಎಲ್ಲಿಲ್ಲದ ತುರುಸು ಕೆಲಸಗಳೊಂದಿಗೆ ವಾದ ವಿವಾದಗಳು ಏರ್ಪಟ್ಟು ಮಾನಸಿಕ ನೆಮ್ಮದಿಗೆ ಕುತ್ತಾದೀತು.

ಮೀನ

ಮಕ್ಕಳೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ. ವಿಶೇಷವಾಗಿ ಮಹಿಳೆಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

Leave a comment

Design a site like this with WordPress.com
Get started