ಮಾರ್ಚ್ 23, ಮಂಗಳವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ: ನವಮಿ,
ನಕ್ಷತ್ರ: ಪುನರ್ವಸು,
ರಾಹುಕಾಲ:3.32 ರಿಂದ 5.03
ಗುಳಿಕಕಾಲ :12.30 ರಿಂದ 2.01
ಯಮಗಂಡಕಾಲ :9.28 ರಿಂದ 10.59

ಮೇಷ

ನಿರಾಯಾಸವಾಗಿ ಕೆಲಸ ಕಾರ್ಯಗಳನ್ನು ಸಾಧಿಸಲಿದ್ದೀರಿ. ಸಂಘ ಸಂಸ್ಥೆಗಳ ಸಹಕಾರವು ದೊರೆತು ಕಾರ್ಯಾನುಕೂಲ. ಅಧ್ಯಯನಶೀಲರು ಮುನ್ನಡೆ ಕಂಡುಕೊಳ್ಳುವಿರಿ. ಮಾನಸಿಕ ಶಾಂತಿ, ನೆಮ್ಮದಿ ದೊರಕಲಿದೆ.

ವೃಷಭ

ವ್ಯಾಪಾರದಲ್ಲಿ ವಿಶೇಷ ಲಾಭ. ಪ್ರೀತಿಪಾತ್ರರ ಭೇಟಿಯಿಂದ ಮನಸ್ಸಿನಲ್ಲಿ ಉಂಟಾದ ಆತಂಕಗಳು ಶಮನ. ಉದ್ಯೋಗದಲ್ಲಿರುವವರಿಗೆ ಸ್ವಲ್ಪಮಟ್ಟಿನ ಕಿರಿ ಕಿರಿ ಸಾಧ್ಯತೆ.

ಮಿಥುನ

ವ್ಯವಹಾರದಲ್ಲಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ವಿನಾಕಾರಣ ಮನೆ ಮಂದಿಯೊಂದಿಗಿನ ದುಡುಕಿನಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ. ಸಂಗಾತಿಯ ಸಮಾಧಾನದಿಂದ ಅನುಕೂಲಕರ ವಾತಾವರಣ.

ಕಟಕ

ನಿರೀಕ್ಷೆಯಂತೆ ನಿತ್ಯದ ಕೆಲಸ ಕಾರ್ಯಗಳು ಸಾಗಿ ಜೀವನಾಧಾರ ಮೂಡಿಸಲಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ದಿನವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅನುಕೂಲ. ಆರೋಗ್ಯದಲ್ಲಿ ಸುಧಾರಣೆ.

ಸಿಂಹ

ಹೊಸ ವಾಹನವೊಂದರ ಖರೀದಿ ಮಾಡುವ ಸಲುವಾಗಿ ಮಿತ್ರರೊಂದಿಗೆ ಚರ್ಚೆ. ಜಮೀನು ಅಥವಾ ನಿವೇಶನ ಖರೀದಿ ಮಾಡುವ ಆಲೋಚನೆ ಕೈಗೂಡುವ ಸಾಧ್ಯತೆ. ಅಲ್ಪ ಪ್ರಮಾಣದ ಕಿರಿಕಿರಿ ಉಂಟಾದೀತು.

ಕನ್ಯಾ

ಬಹುದಿನಗಳಿಂದ ನಡೆಯುತ್ತಿದ್ದ ತಂಟೆ ತಕರಾರುಗಳು ಬಗೆಹರಿದು ನಿಶ್ಚಿಂತರಾಗಲಿದ್ದೀರಿ. ಕೋಪ ತಾಪಗಳಿಂದಾಗಿ ವ್ಯವಹಾರದಲ್ಲಿ ಹಿನ್ನಡೆ. ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಿ.

ತುಲಾ

ಉದ್ಯೋಗದಲ್ಲಿ ಒತ್ತಡದ ವಾತಾವರಣದಿಂದಾಗಿ ಮಾನಸಿಕ ಚಂಚಲತೆ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಮಕ್ಕಳೊಂದಿಗೆ ವೃಥಾ ವಾಗ್ವಾದ ಸಲ್ಲದು. ಆರೋಗ್ಯದ ಕಡೆ ಗಮನ ವಹಿಸುವುದು ಅಗತ್ಯ.

ವೃಶ್ಚಿಕ

ಧೈರ್ಯದ ನಡೆಯಿಂದಾಗಿ ಕಾರ್ಯ ಕಲಾಪಗಳು ಸರಾಗವಾಗಿ ಸಾಗಲಿವೆ. ವ್ಯಾಪಾರದಲ್ಲಿ ತೊಡಗಿರುವವರ ಲಾಭದಲ್ಲಿ ವೃದ್ಧಿ. ಆತ್ಮೀಯರೊಂದಿಗೆ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದೀರಿ.

ಧನು

ಹೊಸ ಹೊಸ ವಿಚಾರಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ ಮುಂದುವರೆಯುವುದರಿಂದ ಯಶಸ್ಸು. ಸಂತೋಷದ ಸುದ್ದಿಯೊಂದನ್ನು ಕೇಳಲಿದ್ದೀರಿ. ಸಾಮಾಜಿಕ ಗೌರವಾದರಗಳು ಪ್ರಾಪ್ತಿ.

ಮಕರ

ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಸಲ್ಯ ಮನೋಭಾವ ಸಲ್ಲದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಅಡಚಣೆ ಸಾಧ್ಯತೆ. ನಿಮ್ಮ ತಪ್ಪುಗಳು ಅರಿವಾಗುವುದರಿಂದ ಹಳೆಯ ವೈಷಮ್ಯಗಳು ದೂರ.

ಕುಂಭ

ಉದ್ಯೋಗದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಯ. ಪ್ರೀತಿಪಾತ್ರರೊಬ್ಬ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ. ಲೇವಾದೇವಿ ವ್ಯವಹಾರಸ್ಥರಿಗೆ ಉತ್ತಮ ಲಾಭ ತರುವ ದಿನವಾಗಿದೆ.

ಮೀನ

ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಉನ್ನತಿಯನ್ನು ನಿರೀಕ್ಷಿಸಬಹುದು. ವ್ಯಾಪಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಹಿತೈಷಿಗಳೊಬ್ಬರ ಆಗಮನ ಸಾಧ್ಯತೆ.

Leave a comment

Design a site like this with WordPress.com
Get started