
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ : ಅಷ್ಠಮಿ,
ನಕ್ಷತ್ರ: ಆರಿದ್ರ,
ರಾಹುಕಾಲ: 7.57 ರಿಂದ 9.28
ಗುಳಿಕಕಾಲ: 2.01 ರಿಂದ 3.32
ಯಮಗಂಡಕಾಲ: 10.59 ರಿಂದ 12.30
ಮೇಷ
ಉದ್ಯೋಗಸ್ಥ ಮಹಿಳೆಯರಿಗೆ ಆದಾಯದಲ್ಲಿ ವೃದ್ಧಿ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ಪಡೆಯುವಿರಿ. ಧಾನ್ಯ ಮಾರಾಟಗಾರರಿಗೆ ಆದಾಯದಲ್ಲಿ ಹೆಚ್ಚಳ.
ವೃಷಭ
ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರಕುವ ಸಾಧ್ಯತೆ ಇದ್ದು ಸ್ವಯಂ ತರಬೇತಿ ತರಗತಿಗಳನ್ನು ನಡೆಸುವ ಯೋಜನೆಯು ಕೈಗೂಡಲಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿನಿಯೋಗ ಮಾಡಲಿದ್ದೀರಿ.
ಮಿಥುನ
ರಾಜಕೀಯ ಉನ್ನತಿಗಾಗಿ ಚಿಂತನ ಮಂತನ ನಡೆಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಸಹೋದರಿಯರಿಗೆ ಹೆಚ್ಚಿನ ಉಡುಗೊರೆ ನೀಡಿ ಸಂತಸ ಪಡಲಿದ್ದೀರಿ.
ಕಟಕ
ಕೇಂದ್ರ ಸರ್ಕಾರದ ಹುದ್ದೆಯೊಂದು ದೊರಕುವ ಸಾಧ್ಯತೆ ಇದ್ದು ತನ್ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಆದಾಯದಲ್ಲಿ ಹೆಚ್ಚಳದಿಂದಾಗಿ ನೆಮ್ಮದಿ. ಹಿರಿಯರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ.
ಸಿಂಹ
ಅರೆಕಾಲಿಕ ನೌಕರರಿಗೆ ಸುದಿನ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಮಗಳ ಸಲುವಾಗಿ ಉಳಿತಾಯ ಮಾಡುವುದು ಉತ್ತಮ. ಸಂಗಾತಿಯ ಆಲೋಚನೆಗಳಿಗೆ ಪುರಸ್ಕಾರ ನೀಡಿ.
ಕನ್ಯಾ
ಆರ್ಥಿಕ ಸದೃಢತೆಯಿಂದಾಗಿ ಆಸ್ತಿ ಖರೀದಿ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳು ಮುಂದಿನ ಅಭ್ಯಾಸದ ವಿಚಾರದಲ್ಲಿ ಅತ್ಯಂತ ಕುತೂಹಲ ಮತ್ತು ಮುತುವರ್ಜಿ ವಹಿಸಲಿದ್ದೀರಿ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆಯ ನಿರೀಕ್ಷೆ.
ತುಲಾ
ವಿದೇಶಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುವ ವಿಚಾರದಲ್ಲಿ ಸ್ನೇಹಿತರು ಬಂಧು ಬಾಂಧವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಾಪಾಡುವಿರಿ. ಬರಹಗಾರರೊಬ್ಬರ ಅನಿರೀಕ್ಷಿತ ಭೇಟಿ.
ವೃಶ್ಚಿಕ
ಸಗಟು ವ್ಯಾಪಾರಗಳಲ್ಲಿ ಗಣನೀಯ ಪ್ರಗತಿ ಕಂಡುಬರಲಿದ್ದು ಆದಾಯದಲ್ಲಿ ಹೆಚ್ಚಳ. ನೌಕರಿಯಲ್ಲಿರುವವರಿಗೆ ಬಿಡುವು ದೊರಕುವ ಸಾಧ್ಯತೆ. ಮಕ್ಕಳಿಗಾಗಿ ಖರ್ಚು. ಸಂಗಾತಿಯ ಸಹಕಾರದಿಂದಾಗಿ ಸಂತಸ.
ಧನು
ಚಿನ್ನ, ಬೆಳ್ಳಿ ಮುಂತಾದ ಆಭರಣ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ. ಕೃಷಿ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಬೇಕಾದೀತು. ಸಿಹಿ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರದಿಂದಾಗಿ ಲಾಭ.
ಮಕರ
ವಾಹನ ಮಾರಾಟದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ಕಳೆದುಕೊಂಡ ವಸ್ತುವೊಂದು ಪುನಃ ಕೈ ಸೇರುವ ಸಾಧ್ಯತೆ. ಕ್ರೀಡಾಪಟುಗಳಿಗೆ ಉತ್ತಮ ಆಸಕ್ತಿ ಮೂಡುವುದರ ಜೊತೆಗೆ ಅವಕಾಶಗಳು ತೆರೆದುಕೊಳ್ಳಲಿವೆ.
ಕುಂಭ
ಕುಟುಂಬದಲ್ಲಿ ಸುಖ, ಸಂತೋಷ ನೆಮ್ಮದಿ ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.
ಮೀನ
ಸರ್ಕಾರದಿಂದ ಆಗಬೇಕಾದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಬಾಧೆ ನಿವಾರಣೆ. ಸಹೋದರರಿಂದ ಉತ್ತಮ ಸಹಾಯ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಚಿಂತೆ ಎದುರಾಗಲಿದೆ.