ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 20 ಸಲುವ ಮಾಘ ಬಹುಳ ಷಷ್ಠಿ 38 ಗಳಿಗೆ. ದಿನ ವಿಶೇಷ :ಮಹಾನಕ್ಷತ್ರ ಪೂರ್ವಾಭಾದ್ರ ಆರಂಭನಿತ್ಯ ನಕ್ಷತ್ರ :ವಿಶಾಖಾ 43 ಗಳಿಗೆ ಮಹಾ ನಕ್ಷತ್ರ :ಪೂರ್ವಾಭಾದ್ರಾ ಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.38 ಗಂಟೆ ಸೂರ್ಯೋದಯ :6.47 ಗಂಟೆ

ಮೇಷ

ಉದ್ಯೋಗದ ವಿಷಯದಲ್ಲಿ ಭಾಗ್ಯೋದಯವಾಗಲಿದೆ. ಮಿತ್ರರಿಂದ ಔದಾರ್ಯ. ಆರ್ಥಿಕ ಅಭಿವೃದ್ಧಿ. ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಕಂಡುಬರುತ್ತಿದೆ. ಸಂಯಮದಿಂದ ಎಲ್ಲವೂ ನಿರಾಳವಾಗಲಿದೆ.

ವೃಷಭ

ವ್ಯವಹಾರದಲ್ಲಿ ಹೊಸ ಯೋಜನೆಯೊಂದನ್ನು ಪ್ರಾರಂಭಿಸುವ ಸಾಧ್ಯತೆ. ಹೊಸ ವ್ಯಕ್ತಿಯೊಬ್ಬರ ಪರಿಚಯವಾಗಲಿದೆ. ಹತ್ತಿ, ನಾರು ವಸ್ತುಗಳ ವ್ಯಾಪಾರಸ್ಥರಿಗೆ ವಿಶೇಷ ಲಾಭ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು.

ಮಿಥುನ

ಗುತ್ತಿಗೆದಾರರಿಗೆ ಕಲ್ಲು, ಗಣಿ ಕೆಲಸಗಾರರಿಗೆ ಶ್ರೇಯಸ್ಸು. ವಾಹನಾದಿಗಳ ವ್ಯಾಪಾರದಲ್ಲಿ ಅಧಿಕ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಸಂಭ್ರಮಿಸಲಿದ್ದೀರಿ. ವ್ಯಾಜ್ಯಗಳು ಇತ್ಯರ್ಥವಾಗುವ ಸಾಧ್ಯತೆ.

ಕಟಕ

ಉದ್ಯೋಗದಲ್ಲಿ ವಿಶೇಷ ಅನುಕೂಲವಾಗಲಿದೆ. ಬಟ್ಟೆ, ಶೃಂಗಾರ ಸಾಮಗ್ರಿಗಳ ವ್ಯವಹಾರದಲ್ಲಿ ಉತ್ತಮ ಲಾಭ. ಚಿತ್ರನಟರು, ನಿರ್ಮಾಪಕರುಗಳಿಗೆ ಗೌರವಾದರಗಳು ದೊರಕಲಿವೆ. ಮಹಿಳಾ ರಾಜಕಾರಣಿಗಳಿಗೆ ಧನಾಗಮನ.

ಸಿಂಹ

ನಿವೇಶನ ಅಥವಾ ಜಮೀನು ಖರೀದಿ ಸಾಧ್ಯತೆ. ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ನಾನಾ ಮೂಲಗಳಿಂದ ಸಂಪತ್ತನ್ನು ಕ್ರೋಢೀಕರಿಸಲಿದ್ದೀರಿ. ಲೋಹದ ವ್ಯಾಪಾರಿಗಳಿಗೆ ಅನುಕೂಲ.

ಕನ್ಯಾ

ಹಣಕಾಸು ಸಂಸ್ಥೆ ನಡೆಸುವವರಿಗೆ ಮತ್ತು ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾದೀತು. ಕಲಾವಿದರುಗಳಿಗೆ ವಿಶೇಷ ಮನ್ನಣೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ.

ತುಲಾ

ನಿಮ್ಮ ಬುದ್ಧಿಮತ್ತೆ ಬೆಳಕಿಗೆ ಬರಲಿದೆ. ಸಾಮಾಜಿಕ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವ್ಯವಹಾರದಲ್ಲಿ ಯಶಸ್ಸು. ದೇಹಾರೋಗ್ಯ ಉತ್ತಮಗೊಳ್ಳಲಿದೆ. ಆಹಾರಧಾನ್ಯಗಳ ವ್ಯಾಪಾರಸ್ಥರಿಗಳಿಗೆ ವಿಶೇಷ ಅನುಕೂಲ.

ವೃಶ್ಚಿಕ

ಲೆಕ್ಕ ಪರಿಶೋಧಕರಿಗೆ ಉತ್ತಮ ಆದಾಯದೊಂದಿಗೆ ಸಾಮಾಜಿಕ ಮನ್ನಣೆ ದೊರಕುವ ಸಾಧ್ಯತೆ. ಯುವಜನರು ಕಠಿಣ ಸ್ಫರ್ಧೆಗಳನ್ನು ಎದುರಿಸಬೇಕಾದೀತು. ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗ ಎದುರಾಗುವ ಸಾಧ್ಯತೆ.

ಧನು

ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಬಿಡುವಿಲ್ಲದ ಕೆಲಸದೊಂದಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಆರೋಗ್ಯದಲ್ಲಿ ಹೆಚ್ಚಿನ ವೈಪರಿತ್ಯ ಕಂಡುಬರಲಿದೆ. ಮಿತ್ರರಿಂದ ಸ್ವಲ್ಪಮಟ್ಟಿನ ಕಿರಿಕಿರಿ.

ಮಕರ

ನೌಕರಿಯಲ್ಲಿ ಪರಿಶ್ರಮದಿಂದಾಗಿ ಹೆಚ್ಚಿನ ಪ್ರಶಂಸೆ ಅಥವಾ ಪದೋನ್ನತಿಯ ಸಾಧ್ಯತೆ. ನಡವಳಿಕೆಯ ವಿಚಾರದಲ್ಲಿ ಹಿರಿಯರಿಂದ ವಿರೋಧ. ವಿಪರೀತ ಧನವ್ಯಯ. ಸಾಲದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ನೌಕರಿಯಲ್ಲಿರುವವರಿಗೆ ಅನಿರೀಕ್ಷಿತ ವರ್ಗಾವಣೆ ಅಥವಾ ಸ್ಥಾನ ಪಲ್ಲಟ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭ ಏರ್ಪಡಿಸಲಿದ್ದೀರಿ. ಅಲಂಕಾರಿಕ ವಸ್ತುಗಳ ಖರೀದಿ ಮಾಡಲಿದ್ದೀರಿ. ಸಂಗಾತಿಯಿಂದ ಉತ್ತಮ ಸಹಕಾರ.

ಮೀನ

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸ್ಥಾನ ಬದಲಾವಣೆ ಸಾಧ್ಯತೆ. ರೈತಾಪಿವರ್ಗದವರಿಗೆ ಆತಂಕದ ಕ್ಷಣಗಳು ಎದುರಾದೀತು. ಉದ್ಯೋಗ ಮತ್ತು ವ್ಯವಹಾರಸ್ಥರಿಗೆ ಉನ್ನತಿ . ದೊಡ್ಡ ದೊಡ್ಡ ಸಾಹಸೀ ಕೆಲಸಕ್ಕೆ ಕೈಹಾಕಲಿದ್ದೀರಿ.

Leave a comment

Design a site like this with WordPress.com
Get started