
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣಪಕ್ಷ.
ವಾರ: ಮಂಗಳವಾರ, ತಿಥಿ: ಚತುರ್ಥಿ
ನಕ್ಷತ್ರ: ಚಿತ್ತ
ರಾಹುಕಾಲ: 03:34 ರಿಂದ 5:03
ಗುಳಿಕಕಾಲ:12 35 ರಿಂದ 2:05
ಯಮಗಂಡಕಾಲ: 9:37 ರಿಂದ 11 :06
ಮೇಷ
ತೊಂದರೆ, ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ವಿಶೇಷ ಕಾರ್ಯಕ್ರಮದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಗೆಳೆಯರೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ.
ವೃಷಭ
ಹಿತ ಮಿತವಾದ ಮಾತುಗಳಿಂದಾಗಿ ಜನಮನ ಗೆಲ್ಲುವಿರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ಅತ್ಯಂತ ಯಶಸ್ಸನ್ನು ಕಾಣುವ ದಿನವಾಗಿ ಕಂಡುಬರುತ್ತಿದೆ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ನೆನಪಿಸಿಕೊಳ್ಳಿ.
ಮಿಥುನ
ನಿಮ್ಮ ಬಹುದಿನದ ಬಯಕೆಯನ್ನು ವಿಶ್ವಾಸಿಕರಲ್ಲಿ ಸಮಾಲೋಚನೆಯ ಮೂಲಕ ಕಾರ್ಯರೂಪಕ್ಕೆ ತರಲಿದ್ದೀರಿ. ಇದರಿಂದ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗ ವ್ಯವಹಾರದ ವಿಷಯದಲ್ಲಿ ಒಂದು ನಿರ್ಣಯಕ್ಕೆ ಬರಲಿದ್ದೀರಿ.
ಕಟಕ
ಕೆಟ್ಟ ಯೋಚನೆಗಳನ್ನು ಬಿಟ್ಟು ಉತ್ತಮ ಚಿಂತನೆಯನ್ನು ರೂಢಿಸಿಕೊಳ್ಳುವುದು ಉತ್ತಮ. ನಿಮ್ಮ ಹಳೆಯ ಯೋಜನೆಗಳನ್ನು ನವೀಕರಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿಪಾಸ್ತಿಗಳ ಸುಧಾರಣೆಗೆ ಮುಂದಾಗುವಿರಿ.
ಸಿಂಹ
ಇಂದು ಅತ್ಯಂತ ಆತ್ಮವಿಶ್ವಾಸದಿಂದ ಕೆಲಸ–ಕಾರ್ಯಗಳನ್ನು ನಿರ್ವಹಿಸುವಿರಿ. ಪ್ರಭಾವಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯನಿರ್ವಹಿಸುವುದು ಒಳಿತು.
ಕನ್ಯಾ
ಸಂತಸದ ದಿನವಾಗಿರುವುದು. ಜಾಣತನ ಮತ್ತು ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರಗಳು ದೊರಕುವವು. ಮಿತಿ ಮೀರಿದ ಉತ್ಸಾಹದಿಂದ ತೊಂದರೆ ಎದುರಾದೀತು. ಯೋಚಿಸಿ ಮುಂದಡಿ ಇಡುವುದು ಉತ್ತಮ.
ತುಲಾ
ಉದ್ಯೋಗ/ ಉದ್ಯಮಗಳಿಗೆ ಸಂಬಂಧಿಸಿದಂತೆ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸುವಿರಿ. ಆರ್ಥಿಕ ಅನುಕೂಲಕ್ಕಾಗಿ ಹೊಸ ಯೋಜನೆ ರೂಪಿಸುವ ಸಾಧ್ಯತೆ. ಹಿರಿಯರ ಆರೋಗ್ಯದ ಕಡೆ ಗಮನ ಅಗತ್ಯ.
ವೃಶ್ಚಿಕ
ಮುಂದಿನ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಹಿಡಿತವನ್ನು ಕಂಡುಕೊಳ್ಳುವಿರಿ. ಅತ್ಯಂತ ಗಮನಾರ್ಹವಾದ ಸಾಧನೆಗಾಗಿ ಶ್ರಮಿಸುವಿರಿ. ದೂರದ ಪ್ರಯಾಣದ ಸಾಧ್ಯತೆ.
ಧನು
ನಿಮ್ಮನ್ನು ಅವಲಂಬಿಸಿರುವವರಿಗೆ ಭರವಸೆಯನ್ನು ಮೂಡಿಸುವಿರಿ. ರಕ್ಷಣಾ ಕಾರ್ಯಗಳಲ್ಲಿರುವವರು ಉತ್ತಮ ಮಾನ್ಯತೆ ಗಳಿಸುವ ಸಾಧ್ಯತೆ. ಆತಂಕಗಳೆಲ್ಲವೂ ದೂರವಾಗಿ ಸ್ಥಿರ ಮನಸ್ಸಿನಿಂದ ಸಂತಸ ಹೊಂದುವಿರಿ.
ಮಕರ
ಕೈಬಿಟ್ಟ ಕಾರ್ಯದಲ್ಲಿ ಅನಿರೀಕ್ಷಿತವಾಗಿ ಅವಕಾಶ ದೊರೆತು ಯಶಸ್ಸು. ವಿವಾಹಾದಿ ಮಂಗಳ ಕಾರ್ಯಗಳ ಪ್ರಸ್ತಾಪ ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಆಡಚಣೆ ತಲೆದೋರುವ ಸಾಧ್ಯತೆ.
ಕುಂಭ
ವಿದ್ಯಾಭ್ಯಾಸದಲ್ಲಿ ತೊಡಗಿರುವವರಿಗೆ ಉತ್ತಮ ಪ್ರಗತಿ. ಯೋಜಿತ ಕಾರ್ಯಗಳಲ್ಲಿನ ಆತಂಕಗಳು ದೂರವಾಗಿ ಯಶಸ್ಸು. ಉದರ ಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.
ಮೀನ
ಒಂದು ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ, ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೀರಿ. ನಿಮ್ಮ ನಿರ್ಧಾರವು ಹುಸಿಯಾಗದೇ ಫಲ ನೀಡುವುದು. ಯೋಜನೆಯ ಕುರಿತು ಹೆಚ್ಚಿನ ಜ್ಞಾನಕ್ಕಾಗಿ ಅನ್ಯರೊಂದಿಗೆ ಚರ್ಚಿಸುವ ಸಾಧ್ಯತೆ.