ಮುನ್ನೆಚ್ಚರಿಕೆಯೊಂದಿಗೆ ರೆಸ್ಟೋರೆಂಟ್ ತೆರೆಯಿರಿ – ಸಿಎಂ ಯಡಿಯೂರಪ್ಪ ಸೂಚನೆ

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್ ಗಳ ಸಂಘದ ಪ್ರತಿನಿಧಿಗಳು ಮತ್ತು ಸಾರಿಗೆ ಕಂಪೆನಿಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಇಂದು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಕೆಲವು ತೊಡಕುಗಳ ನಿವಾರಣೆ ಕುರಿತು ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ ಮತ್ತು ವಿವಿಧ ಭಾಗೀದಾರರ ಜೊತೆಗೆ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ‌ಭಾಗವಹಿಸಿದ್ದ ಬಸ್ ಮಾಲೀಕರ ಸಂಘ ಹೋಟೆಲ್ ಮಾಲೀಕರ‌ ಸಂಘ ಹಾಗು ಟ್ಯಾಕ್ಸಿ ಮಾಲಿಕರ‌ ಸಂಘಗಳ ನಿಯೋಗವು ಸರ್ಕಾರದ ಮುಂದೆ‌ ಕೆಲ ಬೇಡಿಕೆಗಳನ್ನು‌ ಮುಂದಿಟ್ಟರು. ಅವರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರವಾಸೋದ್ಯಮ ಇಲಾಖೆಯು ಹೋಟೆಲ್ ಗಳು, ಆತಿಥ್ಯ ಘಟಕಗಳು ಮತ್ತು ಪ್ರವಾಸಿ ತಾಣಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರುತಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮುತ್ತಪ್ಪ ರೈ ಬರೆದಿಟ್ಟಿದ್ದ ವಿಲ್ ಬಹಿರಂಗ- ಮಕ್ಕಳು , ಪತ್ನಿ ಸಹಿತ 25 ಕೆಲಸಗಾರರಿಗೂ ಆಸ್ತಿಯಲ್ಲಿ ಪಾಲು

◆41 ಪುಟಗಳ ವಿಲ್ ಬರೆದಿರುವ ಮುತ್ತಪ್ಪ ರೈ

◆ಎರಡನೇ ಪತ್ನಿ ಅನುರಾಧಾರವರಿಗೂ ಆಸ್ತಿಯಲ್ಲಿ ಪಾಲು

◆ ಆಪ್ತರು ಹಾಗೂ ಸಂಬಂಧಿಕರಿಗೂ ಆಸ್ತಿ ಹಂಚಿಕೆ

◆ಮನೆ ಕೆಲಸದವರು, ಕಾರು ಡ್ರೈವರ್, ಗನ್ ಮ್ಯಾನ್ ಗಳಿಗೆ ಸೈಟು, ಹಣ

ಇತ್ತೀಚೆಗಷ್ಟೇ ನಿಧನ ಹೊಂದಿದ್ದ ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಯವರು ತನ್ನ  ಒಟ್ಟು ಸಂಪತ್ತಿನ ಬಗ್ಗೆ ಮಾಡಿದ ಉಯಿಲು ಬಹಿರಂಗವಾಗಿದೆ .ಕನ್ನಡದ ಖ್ಯಾತ ದೃಶ್ಯ ಮಾದ್ಯಮವೊಂದು ರೈ ಯವರ ವಕೀಲರು ಬಹಿರಂಗ ಪಡಿಸಿದ ಮಾಹಿತಿಯನ್ನು ಆಧಾರಿಸಿ ವರದಿ ಪ್ರಕಟಿಸಿದೆ.

ಮುತ್ತಪ್ಪ ರೈ ಯವರು   ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಮೂರೂ ವಾರಗಳ ಹಿಂದೆ ವಿಧಿವಶರಾಗಿದ್ದರು.ಅನುರಾದಗೂ ಮುತ್ತಪ್ಪ ರೈ ಮಕ್ಕಳಿಗೂ‌ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರ್ತಾರೆ. ಆಸ್ತಿ ವಿಚಾರವಾಗಿ ಅನುರಾದ ರೈ ಕೇಸ್ ಹಾಕ್ತಾರೆ ಅನ್ನೋದೆಲ್ಲ ಸುಳ್ಳು ಎಂದು ಕೂಡ ರೈ ಪರ ವಕೀಲರಾದ  ನಾರಾಯಣ ಸ್ವಾಮಿ ಆ ಮಾದ್ಯಮಕ್ಕೆ ತಿಳಿಸಿದ್ದಾರೆ.

ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್‍ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ ಸೇರಬೇಕು? ಸಂಘಟನೆ ಜವಾಬ್ದಾರಿ ಯಾರು ಹೊತ್ತುಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮುತ್ತಪ್ಪ ರೈ ತಮ್ಮ ವಕೀಲ ನಾರಾಯಣ ಸ್ವಾಮಿ ಬಳಿ ವಿಲ್ ಮಾಡಿಸಿದ್ದು ಈಗ ಲಭ್ಯವಾಗಿದೆ.

ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ. ಕಿವಿ ಹಣ್ಣು ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ. ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಇದು ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ. […]

ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!

ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..!

ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ. ಕಿವಿ ಹಣ್ಣು ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ.

ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಇದು ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ. ಕಿವಿ ಹಣ್ಣಿಗೆ ನಿದ್ರಾ ಹೀನತೆ ಸಮಸ್ಯೆ ದೂರ ಮಾಡುವ ಸಾಮರ್ಥ್ಯವಿದೆ. ಏಕೆಂದರೆ ಕಿವಿ ಹಣ್ಣಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶವು ನಿದ್ರೆ ಬರಲು ಸಹಕರಿಸುತ್ತದೆ.

ಕಿವಿ ಹಣ್ಣಿನಲ್ಲಿ ಫೈಬರ್ ಅಂಶವು ಹೆಚ್ಚಾಗಿ ಇರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು ಇದನ್ನು ಸೇವಿಸಬಹುದು ಮತ್ತು ಡಯಾಬಿಟೀಸ್ ರೋಗಿಗಳು ಕೂಡ ಇದನ್ನು ತಿನ್ನಬಹುದು.

ನಿಮ್ಮ ಇಷ್ಠಾರ್ಥ ಸಿದ್ಧಿಗಾಗಿ ಅಂಬಲಪಾಡಿ ದೇವಸ್ಥಾನಕ್ಕೆ ಕೈಮುಗಿದು ಬನ್ನಿ

ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. ವಿಷ್ಣುಮಾಯೆಯಾದ ಶಕ್ತಿ ಮತ್ತು ಶಿವೆಯ ಅಣ್ಣನಾದ ವಿಷ್ಣು ಇಲ್ಲಿ ಒಂದೇ ಕಡೆಯಲ್ಲಿ ಪೂಜೆಗೊಳ್ಳುತ್ತಾರೆ.

ದೇವಾಲಯ ಇರುವ ಈ ಸ್ಥಳವು ಹಿಂದೆ ದೊಡ್ಡ ಮರ -ಗಿಡಗಳಿಂದ ಕೂಡಿದ ಹಾಡಿ ಅಂದರೆ ಕಾಡು (ಪಾಡಿ-ತುಳು) ಆಗಿತ್ತಂತೆ. ಕಾಲಕ್ರಮೇಣ ‘ಅಂಬಲಪಾಡಿ’ ಎಂದು ಕರೆಯಲ್ಪಟ್ಟಿತು ಎಂಬುದು ತಿಳಿದುಬರುತ್ತದೆ. ಇಲ್ಲಿ ಹಿಂದೆ ದೇವಿಯ ಗುಡಿ ಮಾತ್ರ ಇದ್ದು, ಇಲ್ಲಿ ಬಂದು ನೆಲೆಸಿದ ಬಲ್ಲಾಳರ ಕುಟುಂಬದ ಆರಾಧ್ಯ ದೇವರಾದ ಜನಾರ್ಧನನನ್ನು ಇಲ್ಲಿ ಪ್ರತಿಷ್ಠಾಪಿಸಿದರು.

ಅಂದಿನಿಂದ ಇಲ್ಲಿ ಶ್ರೀ ಮಹಾಕಾಳಿ ಮತ್ತು ಶ್ರೀ ಮಹಾವಿಷ್ಣು ಜೊತೆಯಾಗಿ ಪೂಜೆಗೊಳ್ಳುತ್ತಾ ಇದ್ದಾರೆ. ಪ್ರತೀ ಶುಕ್ರವಾರದಂದು ಅಮ್ಮನವರ ದರ್ಶನ ಸೇವೆಯು ನಡೆಯುತ್ತದೆ. ಅಮ್ಮನವರ ದೇವಾಲಯದ ಸುತ್ತಲೂ ನವದುರ್ಗೆಯರ ಮೂರ್ತಿಗಳನ್ನು ಬಹಳ ನಾಜೂಕಾಗಿ ಕೆತ್ತಲಾಗಿದೆ. ಇದು ಉಡುಪಿಯಿಂದ 1.5 ಕಿ.ಮೀ. ದೂರದಲ್ಲಿದೆ.

ಜೂನ್‌ 06, 2020 ,ಶನಿವಾರ ದೈನಂದಿನ ರಾಶಿ ಭವಿಷ್ಯ

ಮೇಷ

ಮನೆಯಲ್ಲಿ ಅತ್ಯಂತ ಗಡಿಬಿಡಿಯ ದಿನವಾಗುವ ಸಾಧ್ಯತೆ. ತಾಳ್ಮೆ ಕಳೆದುಕೊಳ್ಳದಿರುವುದು ಒಳಿತು. ಮಕ್ಕಳ ವಿಚಾರದಲ್ಲಿ ಅತ್ಯಂತ ವಿವೇಕಯುತವಾಗಿ ವ್ಯವಹರಿಸಿದಲ್ಲಿ ಹಿರಿತನಕ್ಕೊಂದು ಗೌರವ ಪಡೆಯುವಿರಿ.

ವೃಷಭ

ನಿಮ್ಮ ಬೇಜವಾಬ್ದಾರಿತನದಿಂದಾಗಿ ವ್ಯವಹಾರದಲ್ಲಿ ಕುಂಠಿತವಾಗುವ ಸಾಧ್ಯತೆ. ಆದಾಯದಲ್ಲಿಯೂ ಸ್ವಲ್ಪಮಟ್ಟಿನ ಹಿನ್ನಡೆ. ವಾಹನ ವ್ಯವಹಾರದಲ್ಲಿರುವವರಿಗೆ ಆದಾಯದಲ್ಲಿ ಚೇತರಿಕೆಯಾಗಲಿದೆ.

ಮಿಥುನ

ನಿಮ್ಮ ಕಾರ್ಯದಕ್ಷತೆಯಿಂದಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಒಟ್ಟಾರೆ ಸಂತಸದ ದಿನವಾಗಿಲಿದೆ.

ಕಟಕ

ಬಹುದಿನಗಳ ಕನಸಿನ ಯೋಜನೆಯೊಂದು ಸುಲಭವಾಗಿ ಕೈಗೂಡುವ ಸಾಧ್ಯತೆ ಕಂಡುಬರುತ್ತಿದೆ. ಅನಿರೀಕ್ಷಿತ ದೂರ ಪ್ರಯಾಣದ ಸಂಭವವಿದೆ. ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ.

ಸಿಂಹ

ಸವಾಲಿನ ಕ್ಷಣವನ್ನು ಎದುರಿಸಿ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಬಂಧುಗಳ ನಡುವಿನ ವಿವಾದವನ್ನು ಬಗೆಹರಿಸಲು ಶ್ರಮ ವಹಿಸುವ ಸಾಧ್ಯತೆ ಕಂಡುಬರುತ್ತಿದೆ. ಸಂಗಾತಿಯ ಮಾತಿಗೆ ಮನ್ನಣೆ ಅವಶ್ಯ.

ಕನ್ಯಾ

ಸಣ್ಣ ಪ್ರಮಾಣದ ತೊಡಕುಗಳನ್ನು ಎದುರಿಸುವ ಸಾಧ್ಯತೆ ಇದೆ. ಅಪರಿಚಿತರಿಂದ ದೊರಕುವ ಸಹಾಯ ಸಹಕಾರದಿಂದಾಗಿ ಎಲ್ಲವೂ ಪರಿಹಾರವಾಗುವವು. ಈ ದಿನ ಹೊಸ ಯೋಜನೆಗೆ ಕೈ ಹಾಕದಿರುವುದು ಒಳ್ಳೆಯದು.

ತುಲಾ

ನಿಮ್ಮ ಮಾತುಗಳು ಇತರರಿಗೆ ಅಪಾರ್ಥವಾಗಿ ಅನರ್ಥ ಸೃಷ್ಟಿಸುವ ಸಾಧ್ಯತೆ ಇದ್ದು ಮಾತಿನ ಮೇಲೆ ಹಿಡಿತ ವಿಟ್ಟುಕೊಳ್ಳುವುದು ಸೂಕ್ತ. ಅನಗತ್ಯ ಬೇರೆಯವರ ವಿಷಯದಲ್ಲಿ ಮೂಗು ತೂರಿಸದಿರುವುದು ಒಳಿತು.

ವೃಶ್ಚಿಕ

ಒಮ್ಮೆ ಮಾಡಿದ ಕೆಲಸವನ್ನು ಪುನಃ ಮಾಡಬೇಕಾಗಬಹುದು. ಗಮನವಿಟ್ಟು ಮತ್ತೊಮ್ಮೆ ಯೋಚಿಸಿ ಕಾರ್ಯಪ್ರವೃತ್ತರಾಗುವುದು ಸೂಕ್ತ. ನಾಜೂಕಿನ ಕೆಲಸ ಸಾಧನೆಯಿಂದ ನೆಮ್ಮದಿ ನಿಮ್ಮದಾಗಲಿದೆ.

ಧನು

ನಿಮ್ಮ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ಸುಲಭವಾಗಿ ನೆರವೇರುವ ಸಾಧ್ಯತೆ ಇದೆ. ಮನೆಯವರ ಇಚ್ಛೆಯನ್ನು ಈಡೇರಿಸುವ ಮೂಲಕ ಸಂತಸವನ್ನು ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.

ಮಕರ

ನಿಮ್ಮ ಯೋಜನೆಗೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸುವಿರಿ. ಅತ್ಯಂತ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆ. ದೇವತಾರಾಧನೆಯಿಂದ ಮನಸ್ಸಿನಲ್ಲಿನ ದುಗುಡ ನಿವಾರಣೆಯಾಗಲಿದೆ.

ಕುಂಭ

ಬೇರೆಯವರ ಕುಹಕದ ಮಾತುಗಳ ಬಗ್ಗೆ ಗಮನ ಹರಿಸದೇ ನಿಮ್ಮ ಕೆಲಸದಲ್ಲಿ ವಿಶ್ವಾಸದಿಂದ ಮುಂದುವರಿಯಿರಿ. ನಿಮ್ಮ ಶತ್ರುಗಳು ಸಹ ನಿಮ್ಮ ಸ್ನೇಹವನ್ನು ಬಯಸುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಬೇರೆಯವರನ್ನು ಖುಷಿಪಡಿಸುವ ಬಣ್ಣದ ಮಾತುಗಳನ್ನು ಬಿಟ್ಟು ನೇರ, ದಿಟ್ಟ ಪ್ರತಿಕ್ರಿಯೆಯಿಂದ ಮನಸ್ಸಿಗೆ ನೆಮ್ಮದಿ ದೊರಕುವುದು. ನಿಮ್ಮ ಪ್ರಾಮಾಣಿಕತನದಿಂದಾಗಿ ಉತ್ತಮ ಸ್ಥಾನಮಾನ ದೊರಕುವ ಸಾಧ್ಯತೆ.

ಆಡು ಮುಟ್ಟದ ಸೊಪ್ಪಿನಲ್ಲಿ ಎಂಥಾ ಔಷಧಿ ಗುಣಗಳಿವೆ ನಿಮಗೆ ಗೊತ್ತಾ?

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಗಿಡಮೂಲಿಕೆಯಾಗಿದ್ದು ತುಂಬಾ ಶಕ್ತಿಯುತವಾದ ಸಸ್ಯವಾಗಿದೆ.

“ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಂತೆ ಸಾಮಾನ್ಯವಾಗಿ ಆಡುಗಳು ತಿನ್ನದ ಸೊಪ್ಪು, ತರಕಾರಿಗಳಿಲ್ಲ. ಆದರೆ ಈ ವಾಸಕ ಗಿಡದ ಎಲೆ, ಹೂಗಳನ್ನು ಆಡು ತಿನ್ನುವುದಿಲ್ಲ. ಅದಕ್ಕಾಗಿ ಆಡು ಸೋಕದ ಈ ಗಿಡಕ್ಕೆ ಕನ್ನಡದಲ್ಲಿ ಆಡುಸೋಗೆ ಎಂಬ ಹೆಸರು ಬಂದಿದೆ.

ಉಸಿರಾಟದ ತೊಂದರೆ, ಕೆಮ್ಮು ಮತ್ತು ಶೀತ, ಗಂಟಲು ನೋವು, ಆಸ್ತಮಾ, ಬ್ರಾಂಕೈಟಿಸ್, ಶ್ವಾಸೇಂದ್ರಿಯ ಸೋಂಕುಗಳು, ರಕ್ತಸ್ರಾವದ ಕಾಯಿಲೆಗಳು ಮುಂತಾದ ಆರೋಗ್ಯ ವೈಪರೀತ್ಯಗಳಿಗೆ ಈ ಸಸ್ಯೌಷಧವು ಅಂತಿಮ ಪರಿಹಾರ ಕ್ರಮವಾಗಿದೆ.

1. ಆಡುಸೋಗೆ ಸೊಪ್ಪಿನ ರಸಕ್ಕೆ ಬೆಲ್ಲ ಬೆರೆಸಿ ಕುಡಿದರೆ ಜ್ವರ ಕಮ್ಮಿಯಾಗುತ್ತದೆ.

2. ಒಂದು ಹಿಡಿ ಆಡುಸೋಗೆ ಎಲೆ, ಸ್ವಲ್ಪ ಬೆಲ್ಲ ಮತ್ತು ಒಂದು ಚಮಚ ಒಣಶುಂಠಿ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ. ಅದು ಒಂದು ಲೋಟ ಆದಮೇಲೆ ಕಾಲು ಲೋಟದಂತೆ ದಿನಕ್ಕೆ ನಾಲ್ಕು ಬಾರಿ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.

3. ಆಡುಸೋಗೆ, ಅರಸಿನ, ಧನಿಯಾ, ಅಮೃತ ಬಳ್ಳಿ, ಭಾರಂಗಿ, ಹಿಪ್ಪಲಿಗಳಿಂದ ತಯಾರಿಸಿದ ಕಷಾಯವನ್ನು ಸೇವಿಸಿದರೆ ಉಬ್ಬಸದ ತೊಂದರೆ ಕಮ್ಮಿಯಾಗುತ್ತದೆ.

4. ಮೂರು ಹಿಡಿ ಆಡುಸೋಗೆ ಎಲೆ, ಸ್ವಲ್ಪ ಹಿಪ್ಪಲಿ, ಸ್ವಲ್ಪ ಕಾಳುಮೆಣಸು, ಸ್ವಲ್ಪ ಜ್ಯೇಷ್ಠ ಮಧು, ಸ್ವಲ್ಪ ಶುಂಠಿ ಹಾಕಿ ಚೂರ್ಣವನ್ನು ಮಾಡಿ 2 ಲೀಟರ್ ನೀರಿಗೆ ಹಾಕಿ ಕುದಿಸಬೇಕು. ಅದು ಕಾಲು ಭಾಗಕ್ಕೆ ಇಳಿದ ಮೇಲೆ ನಾಲ್ಕು ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಗಟ್ಟಿಯಾದ ಕಫ ನಿವಾರಣೆಯಾಗುತ್ತದೆ.

5. ಬಿಸಿ ಮಾಡಿದ ಐದು ಚಮಚ ಆಡುಸೋಗೆ ಸೊಪ್ಪಿನ ರಸಕ್ಕೆ ನಾಲ್ಕು ಚಿಟಿಕೆ ಹಿಪ್ಪಲಿ ಪುಡಿ, ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಒಣಕೆಮ್ಮು ಗುಣವಾಗುವುದು.

6. ಹಣ್ಣಾದ ಆಡುಸೋಗೆ ಎಲೆಗಳ ರಸ ಐದು ಚಮಚ, ಜೇನು ತುಪ್ಪ ಒಂದು ಚಮಚ, ಸೈಂಧವ ಲವಣ ಮೂರು ಚಿಟಿಕೆ ಇವೆಲ್ಲವನ್ನೂ ಸೇರಿಸಿ 1 ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಶ್ವಾಸಕೋಶದ ತೊಂದರೆ ನಿವಾರಣೆಯಾಗುತ್ತದೆ.

ಸಮ್ಮೇಳ!! ಪೂರ್ಣಕಾಲಿಕ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ.

ಉಡುಪಿಯ ಸಮ್ಮೇಳ ಪೂರ್ಣಕಾಲಿಕ ಯಕ್ಷಗಾನ ಕಲಾವಿದರಿಗೆ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅಕ್ಕಿ ಹಾಗೂ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ “ಸಮ್ಮೇಳದ” ಪದಾಧಿಕಾರಿಗಳಾದ ಸತೀಶ್ ಉಪಾಧ್ಯ ಅಂಬಲಪಾಡಿ, ಗಣೇಶ್ ಶೆಣೈ ಇವರಿಗೆ ಕಿಟ್ ಗಳನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ಹಸ್ತಾಂತರಿಸಿದರು.

ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಕೆ. ಉದಯಕುಮಾರ್ ಶೆಟ್ಟಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಸಹ ವಕ್ತಾರ ಗುರುಪ್ರಸಾದ್ ಶೆಟ್ಟಿ, ರಮಾಕಾಂತ ದೇವಾಡಿಗ ಮುಂತಾದವರಿದ್ದರು.

ಲಾಕ್ ಡೌನ್ ಆರಂಭವಾಗಿ ಕಳೆದ 65 ದಿನಗಳಿಂದ ಟ್ರಸ್ಟ್ ನಿರಂತರವಾಗಿ ಆಹಾರ ಧಾನ್ಯಗಳನ್ನು ನೀಡುತ್ತಾ ಬರುತ್ತಿದ್ದು ಜೂನ್ 8 ರ ವರೆಗೂ ಈ ಕಾರ್ಯ ಮುಂದುವರಿಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಅಲ್ಲದೆ ಅಶಕ್ತರಿಗೆ ಉಚಿತ ಔಷಧಿ ನೀಡುವ ಕೆಲಸ ನಿರಂತರವಾಗಿ ಮುಂದುವರಿಯಲಿದೆ ಎಂದರು.ಸಂಸದೆ ಶೋಭಾ ಕರಂದ್ಲಾಜೆ ಟ್ರಸ್ಟ್ ನ ಸಮಾಜಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ಗೆ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳವಾದ ಪ್ರಕ್ರಿಯೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MORTH) ಪ್ರತಿ ರಾಜ್ಯಕ್ಕೂ ಚಾಲನಾ ಪರವಾನಗಿ ನೀಡುವ ಮತ್ತು ನವೀಕರಿಸುವ ಜವಾಬ್ದಾರಿಯನ್ನು ನೀಡಿದೆ. ಆದಾಗ್ಯೂ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳನ್ನು ನಿಯಂತ್ರಿಸುವ ಪ್ರತ್ಯೇಕ ಸಚಿವಾಲಯವನ್ನು ಹೊಂದಿರುವುದರಿಂದ, ಆಧಾರ್ ಸಂಪರ್ಕದ ಪ್ರಕ್ರಿಯೆಯು ಒಂದು ರಾಜ್ಯದಿಂದ ಮತ್ತು ಯುಟಿಯಿಂದ ಇನ್ನೊಂದಕ್ಕೆ ಬದಲಾಗಬಹುದಾಗಿದೆ. ಈ ನಡುವೆ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಚಾಲನಾ ಪರವಾನಗಿ ಇರಬಾರದು ಎಂದು ರಸ್ತೆ ಸಾರಿಗೆ ಕಾಯ್ದೆ ಹೇಳುತ್ತದೆ. ಆದಾಗ್ಯೂ, ಜನರು ಅನೇಕ ಚಾಲನಾ ಪರವಾನಗಿಗಳನ್ನು ಹೊಂದಿರುವುದು ಕಂಡುಬಂದಿದೆ. ಚಾಲನಾ ಪರವಾನಗಿ ದೇಶಾದ್ಯಂತ ಮಾನ್ಯವಾಗಿರುವುದರಿಂದ, ಬೇರೆ ರಾಜ್ಯಕ್ಕೆ ಬೇರೆ ಪರವಾನಗಿ ಅಗತ್ಯವಿಲ್ಲ. ಹೀಗಾಗಿ, ಬಹು ಪರವಾನಗಿಗಳ ಅಗತ್ಯವಾಗಿ ಇರಬೇಕಾಗಿಲ್ಲ.

ಆಧಾರ್ ಕಾರ್ಡ್ ವಿಶಿಷ್ಟ ಸಂಖ್ಯೆಯನ್ನು ಹೊಂದಿದೆ ಮತ್ತು ಅದನ್ನು ಚಾಲನಾ ಪರವಾನಗಿಯೊಂದಿಗೆ ಲಿಂಕ್ ಮಾಡಿದಾಗ, ಇದು ಬಹು ಚಾಲನಾ ಪರವಾನಗಿಗಳ ಸಮಸ್ಯೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಆಧಾರ್ ಕಾರ್ಡ್ ವೈಯಕ್ತಿಕ ಗುರುತಿನ ಮಾಹಿತಿಯನ್ನು ಹೊಂದಿರುವುದರಿಂದ, ಚಾಲನಾ ಪರವಾನಗಿಯನ್ನು ನೀಡುವಾಗ ವ್ಯಕ್ತಿಯನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ.

ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡುವುದರ ಪ್ರಯೋಜನಗಳು
ಈ ಎರಡೂ ದಾಖಲೆಗಳು ಗುರುತಿನ-ಸಂಬಂಧಿತವಾದ್ದರಿಂದ, ಈ ಲಿಂಕ್ ಮಾಡುವಿಕೆಯು ವೈಯಕ್ತಿಕ ಗುರುತಿನ ಪರಿಶೀಲನಾ ಪ್ರಕ್ರಿಯೆಯನ್ನು ಬಲಪಡಿಸುತ್ತದೆ. ಇದು ಪಾರದರ್ಶಕತೆಯನ್ನು ಸುಧಾರಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಧಾರ್‌ ಲಿಂಕ್‌ ಮಾಡುವುದರಿಂದ ಆಗುವ ಕೆಲವು ನೇರ ಅನುಕೂಲಗಳು ಇಲ್ಲಿವೆ:

  • ಕಾರ್ಯಾಚರಣೆಗಳು ಹೆಚ್ಚು ಸುವ್ಯವಸ್ಥಿತವಾಗುತ್ತವೆ
  • ಡೇಟಾ ಪರಿಶೀಲನೆಯನ್ನು ಸಕ್ರಿಯಗೊಳಿಸಲಾಗುತ್ತದೆ
  • ನಕಲಿ ಆನ್‌ಲೈನ್ ಚಾಲನಾ ಪರವಾನಗಿ ನೀಡುವುದನ್ನು ನಿಲ್ಲಿಸಲಾಗುತ್ತದೆ
  • ಬಹು ಆನ್‌ಲೈನ್ ಚಾಲನಾ ಪರವಾನಗಿ ನೀಡುವುದನ್ನು ನಿಲ್ಲಿಸಲಾಗುತ್ತದೆ
  • ಪಾರದರ್ಶಕತೆಗಾಗಿ ಕೇಂದ್ರ ದತ್ತಸಂಚಯವನ್ನು ರಚಿಸುವುದು
  • ಚಾಲನಾ ಪರವಾನಗಿಯನ್ನು ಅರ್ಜಿ ಸಲ್ಲಿಸುವ ಮತ್ತು ಸ್ವೀಕರಿಸುವ ಸಮಯವನ್ನು ಕಡಿಮೆ ಮಾಡುತ್ತದೆ

ಚಾಲನಾ ಪರವಾನಗಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು?
ಭಾರತೀಯ ಚಾಲನಾ ಪರವಾನಗಿಯನ್ನು ಆಯಾ ರಾಜ್ಯ ಚಾಲಿತ ರಸ್ತೆ ಸಾರಿಗೆ ಇಲಾಖೆಗಳು ನೀಡುತ್ತವೆ. ಹೆಚ್ಚಿನ ರಾಜ್ಯಗಳಲ್ಲಿ, ನೀವು ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಈ ಹಲವಾರು ಇಲಾಖೆಗಳು ಆನ್‌ಲೈನ್ ಉಪಸ್ಥಿತಿಯನ್ನು ಹೊಂದಿರುವುದರಿಂದ, ನಿಮ್ಮ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಭಾರತೀಯ ಚಾಲನಾ ಪರವಾನಗಿಗೆ ಲಿಂಕ್ ಮಾಡಬಹುದು. ರಾಜ್ಯದ ವೆಬ್‌ಸೈಟ್ ಪ್ರಕಾರ ಪ್ರಕ್ರಿಯೆಯು ಬದಲಾಗಬಹುದು.ಅನುಸರಿಸಬೇಕಾದ ಹಂತಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ನಿಮ್ಮ ಚಾಲನಾ ಪರವಾನಗಿ ನೀಡಿದ ರಾಜ್ಯದ ನಿಮ್ಮ ರಸ್ತೆ ಸಾರಿಗೆ ವೆಬ್‌ಸೈಟ್‌ಗೆ ಭೇಟಿ ನೀಡಿ ವೆಬ್‌ಸೈಟ್‌ನಲ್ಲಿ ಕ್ರಿಯಾತ್ಮಕತೆಯನ್ನು ಸೇರಿಸಿದರೆ ‘ಲಿಂಕ್ ಆಧಾರ್’ ಬಟನ್ ಇರುತ್ತದೆ ‘ಆಧಾರ್ ಸಂಖ್ಯೆ ನಮೂದು’ ಗೆ ಹೋಗಿ ಡ್ರಾಪ್-ಡೌನ್ ಆಯ್ಕೆಯಿಂದ ‘ಡ್ರೈವಿಂಗ್ ಲೈಸೆನ್ಸ್’ ಆಯ್ಕೆಮಾಡಿ ನಿಮ್ಮ ಚಾಲನಾ ಪರವಾನಗಿ ಸಂಖ್ಯೆಯನ್ನು ನಮೂದಿಸಿ ‘ವಿವರಗಳನ್ನು ಪಡೆಯಿರಿ’ ಕ್ಲಿಕ್ ಮಾಡಿ ನಿಮ್ಮ ಪ್ರದರ್ಶಿತ ಚಾಲನಾ ಪರವಾನಗಿ ವಿವರಗಳನ್ನು ಪರಿಶೀಲಿಸಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಸ್ವೀಕರಿಸುತ್ತೀರಿ ಒಟಿಪಿ ನಮೂದಿಸಿ ಲಿಂಕ್ ಪೂರ್ಣಗೊಂಡಿದೆ

ರಾಜ್ಯದಲ್ಲಿ ಇಂದು ಹೊಸ ದಾಖಲೆ ಬರೆದ ಕೊರೋನಾ : ಬರೋಬ್ಬರಿ 515 ಜನರಿಗೆ ಕೊರೋನಾ ಪಾಸಿಟಿವ್

ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ದಾಖಲೆಯ 515 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಇವರಲ್ಲಿ 1688 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3088 ಆಗಿದೆ. 

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಉಡುಪಿ – 204, ಕಲಬುರ್ಗಿ – 42, ಬೆಂಗಳೂರು ನಗರ – 10, ಯಾದಗಿರಿ – 74, ಮಂಡ್ಯ -13, ಬೆಳಗಾವಿ -36, ಬೀದರ್ – 39, ಹಾಸನ – 03, ವಿಜಯಪುರ – 53, ದಾವರಣಗೆರೆ – 01, ಚಿಕ್ಕಬಳ್ಳಾಪುರ -03, ದಕ್ಷಿಣ ಕನ್ನಡ -08, ಉತ್ತರ ಕನ್ನಡ – 07, ಬಾಗಲಕೋಟೆ -01, ಧಾರವಾಡ -03, ಬಳ್ಳಾರಿ -01, ಬೆಂಗಳೂರು ಗ್ರಾಮಾಂತರ -12, ಕೋಲಾರ -01, ಹಾವೇರಿ -02, ರಾಮನಗರ -02 ಕೊರೋನಾ ಸೋಂಕು ತಗಲುವ ಮೂಲಕ ಇಂದು 515 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾದ್ರೇ, 1688 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3081 ಆಗಿದೆ. ರಾಜ್ಯದಲ್ಲಿ ಇದುವರೆಗೆ ಕೊರೋನಾಗೆ 57 ಜನರು ಸಾವನ್ನಪ್ಪಿದ್ದಾರೆ

Design a site like this with WordPress.com
Get started