ಅಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”

ಲೇಖನ : ಶ್ರೀಕಾಂತ್ ಶೆಟ್ಟಿ

ಆ ಚಿಲ್ಲರೆ 35 ಎಕರೆ ಜಾಗಕ್ಕಾಗಿ ಪ್ರಪಂಚದ ಮೂರು ಪ್ರಬಲ ಮತಗಳು ಕಳೆದ ಮೂರು ಸಾವಿರ ವರ್ಷಗಳಿಂದ ಬಡಿದಾಡುತ್ತಿವೆ. ಅಯೋಧ್ಯ ಕಾಶಿ ಮಥುರಾ ಮೊದಲಾದ 500 ವರ್ಷದ ಕೆಳಗೆ ಮುಸಲ್ಮಾನರ ದಾಳಿಗೆ ತುತ್ತಾಗಿ ಹಿಂದುಗಳ ಕೈ ತಪ್ಪಿಹೋದ ತೀರ್ಥಕ್ಷೇತ್ರಗಳನ್ನು ಹಿಂದುಗಳಿಗೆ ಮರಳಿ ಕೊಡಿ ಎಂದುಕೇಳಿಕೊಂಡಾಗ , ಅದಕ್ಕೆ ಯಾಕ್ರೀ ಗಲಾಟೆ ಮಾಡುತ್ತಿದ್ದೀರಾ ಅಲ್ಲೊಂದು ಆಸ್ಪತ್ರೆನೋ . ಶಾಲೆನೋ ಕಟ್ಟಿ. ಸುಮ್ಮನೆ ಯಾಕೆ ಘರ್ಷಣೆ? ಎಂದು ಮಹಾ ಮಾನವತಾವಾದಿಗಳಂತೆ ಸೋಗು ಹಾಕುವ ಬುದ್ದಿಜೀವಿಗಳು ಜೆರುಸಲೆಮ್ಮಿನ ಮಾತೆತ್ತಿದರೆ ಸಾಕು ನಾಲಿಗೆ ಸತ್ತವರಂತೆ ಸುಮ್ಮನಾಗಿಬಿಡುತ್ತಾರೆ . ಜೆರುಸಲೇಮ್ ಎಂಬ ನಗರದೊಳಗಿರುವ ಆ ಪುಟ್ಟ ಪ್ರದೇಶಕ್ಕಾಗಿ ಯಹೂದಿಗಳು ಕ್ರೈಸ್ತರು ಮತ್ತು ಮುಸಲ್ಮಾನರು ಕಳೆದ ಎರಡು ಸಾವಿರ ವರ್ಷಗಳಿಂದ ಬಡಿದಾಡುತ್ತಾ ಬಂದಿದ್ದಾರೆ. ಇದಕ್ಕಾಗಿ 41 ಭಾರಿ ಪ್ರಮಾಣದ ಯುದ್ಧಗಳಾಗಿವೆ. ಲೆಕ್ಕವಿಲ್ಲದಷ್ಟು ಘರ್ಷಣೆ ನಡೆದು ಲಕ್ಷಾಂತರ ಜನ ಸತ್ತಿದ್ದಾರೆ. ಜೆರೂಸಲೇಮಿನ ಮಣ್ಣು ಹೀರಿಕೊಂಡ ರಕ್ತದಲ್ಲಿ ಯಹೂದಿ ಬುಡಕಟ್ಟುಗಳುಬ್ಯಾಬಿಲೋನಿಯನ್ನರು ಬೆಜಂಟೈನರು, ರೋಮನ್ ಕ್ರೈಸ್ತರು ಆಟೋಮನ್ನರು ಹೀಗೆ ಹತ್ತಾರು ಪಂಗಡಗಳ ಪಾಲಿದೆ.
ಆದರೆ ಜೆರುಸಲಂ ಎಂಬ ಪವಿತ್ರ ಭೂಮಿಯ ರಕ್ತದಾಹ ಇನ್ನೂ ತಣಿದಿಲ್ಲ
ಅಷ್ಟಕ್ಕೂ ಈ ಜಗತ್ತಿನ ಅತ್ಯಂತ ವಿವಾದಗ್ರಸ್ತ ಭೂಮಿಯ ಇತಿಹಾಸವೇನು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ.
ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸೆಮಿಟಿಕ್ ಮತಗಳ ( ಯಹೂದಿ ಕ್ರೈಸ್ತ ಮತ್ತು ಇಸ್ಲಾಂ) ಆದ್ಯ ಪ್ರವಾದಿ ಅಬ್ರಹಮ್ ನಿಂದ ಯಹೂದಿ ಮತ ಸ್ಥಾಪನೆಯಾಯಿತು. ಅಬ್ರಾಮನಿಗೆ ದೇವರ ಸಾಕ್ಷಾತ್ಕಾರವಾಗಿದ್ದು ಇದೇ ಜೆರುಸಲೆಮ್ಮಿನ ಗುಡ್ಡದಮೇಲೆ.. ಇದೇ ಗುಡ್ಡದ ಮಣ್ಣಿನಿಂದ ದೇವರು ಪ್ರಪಂಚದ ಮೊತ್ತಮೊದಲ ಮಾನವನಾದ ಆದಮನನ್ನು ಸೃಷ್ಟಿ ಮಾಡಿದ ಎನ್ನುವ ನಂಬಿಕೆ ಯಹೂದಿಗಳಲ್ಲಿ ಇದೆ. ಯಹೂದಿ ಮತಸ್ಥಾಪಕ ಅಬ್ರಹಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಇಸ್ಮಾಯಿಲ್ ಮತ್ತೊಬ್ಬ ಇಸಾಕ್. ಇಸಾಕ್ ಅಬ್ರಹಮನ ಅತ್ಯಂತ ಪ್ರೀತಿಯ ಮಗ. ಒಂದು ದಿನ ಅಬ್ರಹಾಮನಿಗೆ ದೇವರು ಕಾಣಿಸಿಕೊಂಡು ಇಸಾಕನನ್ನು ತನಗೆ ಬಲಿ ಕೊಡಬೇಕು ಎಂದು ಕೇಳಿದ. ದೇವರ ಬಗ್ಗೆ ಅಪಾರ ಭಕ್ತಿ ಪ್ರೀತಿಯಿಂದ ಅಬ್ರಾಹಂ ತನ್ನ ಮಗನನ್ನು ಬಲಿ ಕೊಡಲು ಜೆರೂಸಲೇಮಿನ ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಅಬ್ರಹಮನ ತ್ಯಾಗವನ್ನು ಕಂಡ ದೇವರು ಇಸಾಕನ ಬದಲಿಗೆ ಒಂದು ಮೇಕೆಯನ್ನು ಬಲಿ ಪಡೆದು ಇಸಾಕನಿಗೆ ಜೀವದಾನ ನೀಡಿದ. ಈ ಘಟನೆ ನಡೆದಿದ್ದು ಕೂಡ ಜೆರೂಸಲೇಮಿನ ಪವಿತ್ರ ಭೂಮಿಯಲ್ಲಿ. ಯಹೂದಿಗಳು ಈ ನೆಲಕ್ಕೆ ಹರ್ ಹವಾಯಿಯತ್ ಎಂದು ಕರೆಯುತ್ತಾರೆ.

ಅಬ್ರಹಮ್ ಮೊದಲು ವಾಸವಾಗಿದ್ದು ಮೆಸಪಟೊಮಿಯದಲ್ಲಿ. ಆದರೆ ಆತನಿಗೆ ಭಗವದ್ ಸಾಕ್ಷಾತ್ಕಾರ ವಾಗಿದ್ದು ಮಾತ್ರ ಜೆರುಸಲೆಂ ಎಂಬ ಬರಡು ಬೆಂಗಾಡಿನ ಗುಡ್ಡದಮೇಲೆ. ಹಿಬ್ರೂ ಬೈಬಲ್ಲಿನ ಬುಕ್ ಅಫ್ ಜೆನೆಸಿಸ್ ನಲ್ಲಿ ದೇವರು ಮತ್ತು ಅಬ್ರಹಾಂ ನಡುವಿನ ಸಂಭಾಷಣೆಯ ವಿವರ ಸಿಗುತ್ತದೆ. ದೇವರ ಆದೇಶದಂತೆ ಅಬ್ರಹಮ್ ಜೆರುಸಲೇಮಿಗೆ ಬಂದು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಾರೆ. ಅವರ ಮೊಮ್ಮಗ ಅಂದರೆ ಇಸಾಕನ ಮಗ ಜಾಕೋಬ್ ಮಹಾನ್ ಪರಾಕ್ರಮಿ. ಆತ ದೇವದೂತರೊಡನೆ ಹೋರಾಟ ಮಾಡಿದ ಎಂಬ ದಂತಕಥೆಗಳು ಇವೆ. ಈತನ ಧೈರ್ಯ ಮತ್ತು ಪರಾಕ್ರಮವನ್ನು ಕಂಡು ಆತನಿಗೆ ಇಸ್ರೇಲ್ ಎಂಬ ಬಿರುದನ್ನು ದೇವದೂತರು ನೀಡುತ್ತಾರೆ. ಇವನು ತನ್ನ ಬಾಹುಬಲದಿಂದ ಒಂದು ದೇಶವನ್ನು ಕಟ್ಟಿದ. ಆ ದೇಶದ ಹೆಸರು ಇಸ್ರೇಲ್. ಮುಂದೆ ಜಕೋಬನ 12 ಮಕ್ಕಳು ಮುಂದೆ 12 ಯಹೂದಿ ಬುಡಕಟ್ಟುಗಳಾಗಿ ಬೆಳೆದು. ಇಸ್ರೇಲಿನ ತುಂಬಾ ಹರಡಿಕೊಂಡರು. ಯಹೂದಿಗಳ ಸಮೃದ್ಧವಾದ ಇಸ್ರೇಲ್ ಹುಟ್ಟಿದ್ದು ಹೀಗೆ.

ಯಹೂದಿಗಳ ಪ್ರಸಿದ್ಧ ಅರಸನಾದ ಕಿಂಗ್ ಸೋಲೋಮನ್ ಜೆರೂಸಲೇಮಿನ ಗುಡ್ಡದ ಪವಿತ್ರ ಭೂಮಿಯಲ್ಲಿ ಒಂದು ಭವ್ಯ ದೇವಾಲಯವನ್ನು ನಿರ್ಮಿಸಿದ. ಅಲ್ಲಿಂದ ಮುಂದೆ ಈ ಗುಡ್ಡಕ್ಕೆ ಟೆಂಪಲ್ ಮೌಂಟ್ ಎಂಬ ಇನ್ನೊಂದು ಹೆಸರು ಸೇರ್ಪಡೆಯಾಯಿತು.

ಈ ದೇಗುಲ ಕಟ್ಟಲ್ಪಟ್ಟಿದ್ದು 3000 ವರ್ಷಗಳ ಹಿಂದೆ. ಇದನ್ನು ಜೆರುಸಲೆಮ್ಮಿನ ಇತಿಹಾಸದಲ್ಲಿ ಮೊದಲ ದೇವಾಲಯ ಅಥವಾ ಫಸ್ಟ್ ಟೆಂಪಲ್ ಎಂದು ಕರೆಯುತ್ತಾರೆ. ನಾಗರಿಕತೆಗಳ ನಡುವೆ ಸಂಘರ್ಷ ಉತ್ತುಂಗದಲ್ಲಿದ್ದ ಕಾಲಘಟ್ಟವದು. ಬ್ಯಾಬಿಲೋನಿಯನ್ನರು ಯಹೂದಿಗಳ ಮೇಲೆ ದಾಳಿ ಮಾಡಿ ಜೆರುಸಲೇಮನ್ನು ವಶಪಡಿಸಿಕೊಂಡು ಅಲ್ಲಿದ್ದ ದೇವಾಲಯದ ಅಪಾರ ಸಂಪತ್ತನ್ನು ಲೂಟಿ ಮಾಡಿ ದೇವಾಲಯವನ್ನು ನೆಲಸಮ ಮಾಡಿದರು. ಇದು ಯಹೂದಿಗಳ ಮೇಲೆ ನಡೆದ ಮೊದಲ ಆಕ್ರಮಣ.

ಆದರೆ ಯಹೂದಿಗಳು ವಿರಮಿಸಲಿಲ್ಲ ಸತತವಾದ ಹೋರಾಟದ ಬಳಿಕ ತಮ್ಮ ಪವಿತ್ರ ಭೂಮಿಯನ್ನು ಮತ್ತೆ ವಶಪಡಿಸಿಕೊಂಡು 500 ವರ್ಷಗಳ ತರುವಾಯ ಅಂದರೆ ಇಂದಿನಿಂದ ಸುಮಾರು ಎರಡುವರೆ ಸಾವಿರ ವರ್ಷದ ಹಿಂದೆ ಮತ್ತೆ ತಮ್ಮ ದೇವಾಲಯವನ್ನು ಜೆರೂಸಲೇಮಿನ ಅದೇ ಸ್ಥಳದಲ್ಲಿ ಕಟ್ಟಿದರು. ಇದನ್ನು ಸೆಕೆಂಡ್ ಟೆಂಪಲ್ ಎನ್ನುತ್ತಾರೆ.

ಇದಾದ ಆರುನೂರು ವರ್ಷಗಳ ಬಳಿಕ ಜೆರುಸಲೆಮ್ ನಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ನಡೆಯಿತು. ಯಹೂದಿ ಚಿಂತನೆಗಳನ್ನು ದಿಕ್ಕರಿಸಿ ನಾನೇ ದೇವರ ಮಗ ಎಂದು ಯೇಸುಕ್ರಿಸ್ತರು ಮತಪ್ರಚಾರ ಆರಂಭಿಸಿದರು. ಇದು ಯಹೂದಿಗಳ ಕಣ್ಣು ಕೆಂಪಾಗಿಸಿತು. ಸಾಮಾನ್ಯವಾಗಿ ಹೊಸಮತ ಒಂದರ ಉಗಮದ ಸಮಯದಲ್ಲಿ ಎದುರಾಗುವ ಪ್ರತಿರೋಧಗಳನ್ನು ಯೇಸುಕ್ರಿಸ್ತರು ಕೂಡ ಎದುರಿಸಬೇಕಾಯಿತು. ಯೇಸು ಕ್ರಿಸ್ತರನ್ನು ಇದೇ ಜರೂಸಲಮ್ ನ ಗುಡ್ಡದಮೇಲೆ ಯಹೂದಿಗಳು ಶಿಲುಬೆಗೇರಿಸಿದರು. ಆ ಮೂಲಕ ಯಹೂದಿಗಳಿಗೆ ಒಬ್ಬ ಪ್ರಬಲ ಶತ್ರು ಪಂಗಡ ಹುಟ್ಟಿಕೊಂಡಿತು. ಅದೇ ಕ್ರಿಶ್ಚಿಯನಿಟಿ

ರಾಜ್ಯಾಧಿಕಾರ ಸಿಗುವವರೆಗೆ ಕಾದುಕುಳಿತಿದ್ದ ಕ್ರೈಸ್ತಮತ ಅವಲಂಬಿಗಳು ರೋಮನ್ ಸಾಮ್ರಾಜ್ಯ ತಮ್ಮ ಕೈವಶ ಆಗುತ್ತಿದ್ದಂತೆ ಯಹೂದಿಗಳ ಮೇಲೆ ಮುರಕೊಂಡು ಬಿದ್ದರು. ಕ್ರಿಸ್ತಶಕ 70ರಲ್ಲಿ ರೋಮನ್ನರು ಯಹೂದಿಗಳ ವಿರುದ್ಧ ಪ್ರತೀಕಾರ ತೀರಿಸಿ ಅವರ ಪವಿತ್ರ ಬೆಟ್ಟದ ಮೇಲಿದ್ದ ಎರಡನೇ ದೇವಾಲಯವನ್ನು ಕೂಡ ಮುರಿದು ಹಾಕಿದರು. ಆದರೆ ಆ ಎರಡನೇ ದೇಗುಲ ಪಶ್ಚಿಮ ಭಾಗದ ಒಂದು ಗೋಡೆ ಮಾತ್ರ ಉಳಿದುಕೊಂಡಿತು. ಅದು ಇವತ್ತಿನವರೆಗೂ ಅಸ್ತಿತ್ವದಲ್ಲಿದೆ. ವೆಸ್ಟರ್ನ್ ವಾಲ್ ಎಂದು ಕರೆಯಲ್ಪಡುವ ಆ ಗೋಡೆ ಇಂದಿಗೂ ಜಗತ್ತಿನ ಮೂಲೆ ಮೂಲೆಯಲ್ಲಿರುವ ಯಹೂದಿಗಳಿಗೆ ಅತ್ಯಂತ ಪರಮಪವಿತ್ರ ಸ್ಥಳ.
ಜೆರೂಸಲೇಮಿನ ಲ್ಲಿದ್ದಾಗ ಎರಡನೇ ದೇವಾಲಯದ ಒಳಗೆ ಕೇವಲ ರಬ್ಬಿ ಗಳು ಮಾತ್ರ ತೆರಳುತ್ತಿದ್ದರಂತೆ. ಸಾಮಾನ್ಯ ಯಹೂದಿಗಳಿಗೂ ಈ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ಹೀಗಾಗಿ ಸಂಪ್ರದಾಯಸ್ಥ ಯಹೂದಿಗಳು ಇವತ್ತಿಗೂ ಕೂಡ ಗೋಡೆಗೆ ದೂರದಿಂದಲೇ ನಮಸ್ಕರಿಸುತ್ತಾರೆ. ತಪ್ಪಿಯೂ ಗೋಡೆ ಆಚೆಗಿರುವ ಭೂಮಿಯ ಮೇಲೆ ಕಾಲಿಡುವುದಿಲ್ಲ. ಅಷ್ಟೊಂದು ಗಾಢವಾದ ಧಾರ್ಮಿಕ ನಂಬಿಕೆ ಯಹೂದ್ಯರಲ್ಲಿ ಇದೆ.
ಚಕ್ರವರ್ತಿ ಹ್ಯಾಡ್ರಿಯನ್ ಕಾಲದಲ್ಲಿ ಯಹೂದಿಗಳು ಜೆರುಸಲೇಮಿಗೆ ಬೇಕಾಗಿ ಮತ್ತೊಂದು ನಿರ್ಣಾಯಕ ಯುದ್ಧ ಮಾಡಿದರು. ಇದರಿಂದ ಕುಪಿತಗೊಂಡ ಹ್ಯಾಡ್ರಿಯನ್ ಆ ದೇಶಕ್ಕೆ ಇದ್ದ ಇಸ್ರೇಲ್ ಎಂಬ ಹೆಸರನ್ನೇ ಅಳಿಸಿಹಾಕಿ ಯಹೂದಿಗಳ ಪರಮ ವೈರಿಗಳಾದ ಸಿರಿಯನ್ನರು ಮತ್ತು ಪೆಲಿಸ್ತಿಯನ್ನರಿಗೆ ಅಲ್ಲಿ ಪರಮಾಧಿಕಾರವನ್ನು ಕೊಟ್ಟು ಆ ದೇಶದ ಹೆಸರನ್ನೇ ಸಿರಿಯ ಮತ್ತು ಪ್ಯಾಲೇಸ್ತೀನ್ ಎಂದು ಮರುನಾಮಕರಣ ಮಾಡಿದ. ಮತ್ತು ಜೆರುಸಲೇಮನ್ನು ಅದರ ರಾಜಧಾನಿಯನ್ನಾಗಿ ಘೋಷಣೆ ಮಾಡಿದ.
ಇಷ್ಟಕ್ಕೆ ಅವನ ಯಹೂದಿಗಳ ಮೇಲಿನ ದ್ವೇಷ ತಣ್ಣಗಾಗಲಿಲ್ಲ. ಅಲ್ಲಿದ್ದ ಒಂದೊಂದು ಯಹೂದಿ ಮಗುವನ್ನು ಕೂಡ ಎತ್ತಿ ಆಚೆಗೆ ಎಸೆಯುವವರೆಗೂ ಅವನ ಸೈನ್ಯ ವಿರಮಿಸಲಿಲ್ಲ. ಯಹೂದಿಗಳು ತಮ್ಮ ಮಾತೃಭೂಮಿಯನ್ನು ಬಿಟ್ಟು ಜಗತ್ತಿನ ಮೂಲೆ ಮೂಲೆಗೆ ಹಂಚಿ ಹರಡಿ ಹೋಗುವಂತಾಯಿತು. ಈ ಸಮಯದಲ್ಲಿ ಇಲ್ಲಿಗೆ ಬಂದವರು ಪ್ರವಾದಿ ಮಹಮ್ಮದ್ ಪೈಗಂಬರ್.

ಕುರಾನಿನ ಪ್ರಕಾರ ಕ್ರಿಸ್ತ ಶಕ 621 ರಲ್ಲಿ ಮೋಹಮ್ಮದ್ ಬುರಾಕ್ ಎಂಬ ಹಾರುವ ಕುದುರೆಯ ಮೇಲೆ ಕುಳಿತು ಮೆಕ್ಕಾದಿಂದ ಜೆರುಸಲೇಮಿಗೆ ಬಂದರಂತೆ. ಅಲ್ಲಿಂದ ಅವರು ಮತ್ತೆ ಅದೇ ಕುದುರೆಯ ಮೇಲೆ ಕುಳಿತು ಒಂದೇ ನೆಗೆತಕ್ಕೆ ನೇರವಾಗಿ ಸ್ವರ್ಗಕ್ಕೆ ಜಿಗಿದು ಅಲ್ಲಿ ದೇವರ ಜೊತೆ ಒಂದಷ್ಟು ಮಾತುಕತೆ ಮಾಡಿ ಮತ್ತೆ ಬಂದು ಜೆರೂಸಲೇಮಿನಲ್ಲಿ ಇಳಿದರು ಎನ್ನುವುದು ಮುಸಲ್ಮಾನರ ನಂಬಿಕೆ. ಗಮನಿಸಿ ಇದೆಲ್ಲಾ ಆಗಿರೋದು ಆರನೇ ಶತಮಾನದಲ್ಲಿ!

ಮೊದಲೇ ಅನೇಕ ಜನರ ರಕ್ತಪಾತ ದಿಂದ ಸಾಮಾಜಿಕ ಶಾಂತಿಯನ್ನು ಕದಡಿ ಹಾಕಿದ್ದ ಜೆರೂಸಲೇಮಿನ ವಿವಾದಗ್ರಸ್ತ ಭೂಮಿಯಲ್ಲಿ ಬಂದು ಮಹಮ್ಮದ್ ಪೈಗಂಬರ್ ಅವರು ಕುದುರೆ ಇಳಿಸಿದ್ದು, ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಅವರ ಹಾರುವ ಕುದುರೆ ಒಂದೆರಡು ಕಿಲೋಮೀಟರ್ ಆಚೆಗೆ ಎಲ್ಲಾದರೂ ಇಳಿದಿದ್ದರೆ ಧರ್ಮ-ಧರ್ಮಗಳ ನಡುವಿನ ಬಡಿದಾಟ ರಕ್ತಪಾತ ಅಮಾಯಕ ಮಕ್ಕಳ ಕಗ್ಗೊಲೆಗಳು ತಪ್ಪುತ್ತಿದ್ದವು .

ಮುಸಲ್ಮಾನರು ಈ ಪ್ರದೇಶವನ್ನು ಹರ್ ಅಲ್ ಆಮ್ ಶರೀಫ್ ಎಂದು ಕರೆಯುತ್ತಾರೆ. ಕ್ರಿಸ್ತಶಕ 632 ರಲ್ಲಿ ಪೈಗಂಬರ್ ತೀರಿಕೊಂಡರು. ಇದಾದ ನಾಲ್ಕೇ ವರ್ಷದಲ್ಲಿ ಉಮೈಯತ್ ಖಲೀಫಾ ನೇತೃತ್ವದಲ್ಲಿ ಜೆರೂಸಲೇಮಿನ ಮೇಲೆ ದಾಳಿ ನಡೆಯಿತು. ಆಗ ಜೆರುಸಲೇಂ ಬೆಜೆಂಟಾಯಿನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ರೋಮನ್ ಕ್ರೈಸ್ತರ ಕೈಯಲ್ಲಿದ್ದ ಜೆರೂಸಲೇಮಿನ ಪವಿತ್ರ ಭೂಮಿ ಮುಸಲ್ಮಾನರ ವಶವಾಯಿತು. ಅಲ್ಲಿ ಅದಾಗಲೇ ಕ್ರೈಸ್ತರು ಒಂದು ಭವ್ಯವಾದ ಚರ್ಚ್ ಕಟ್ಟಿದ್ದರು. ಪುನರುತ್ಥಾನದ ದಿನ ಏಸು ಇಲ್ಲಿಂದಲೇ ಮತ್ತೆ ಎದ್ದು ಬರುತ್ತಾನೆ ಎಂಬ ಗಾಢ ನಂಬಿಕೆ ಕ್ರೈಸ್ತರದಾಗಿತ್ತು. ಜೆರುಸಲೇಮನ್ನು ಕೈವಶ ಮಾಡಿಕೊಂಡ ಖಲಿಫಾ ಅಲ್ಲೊಂದು ಮಸೀದಿ ಕಟ್ಟಿ ಅದಕ್ಕೆ ಅಲ್ ಅಕ್ಸ ಮಸೀದಿ ಎಂದು ಹೆಸರಿಟ್ಟ. ಯಾವ ಕಲ್ಲಿನ ಮೇಲಿಂದ ಪೈಗಂಬರ್ ಅವರ ಕುದುರೆ ಆಕಾಶಕ್ಕೆ ಉಡಾವಣೆ ಮಾಡಿತ್ತೋ ಆ ಕಲ್ಲು ಇದ್ದ ಜಾಗದಲ್ಲಿ ಡೊಮ್ ಆಫ್ ದಿ ರಾಕ್ ಎಂಬ ಮತ್ತೊಂದು ಮಸೀದಿ ಕಟ್ಟಿ ಅದರ ಗೋಪುರಕ್ಕೆ ಚಿನ್ನದ ತಗಡು ಮುಚ್ಚಿಸಿದರು.

ಒಂದು ವಾದದ ಪ್ರಕಾರ ಇಸ್ರೇಲಿಗರ ಮೊದಲ ದೇವಾಲಯ ಇದ್ದ ಜಾಗದಲ್ಲೇ ಉದ್ದೇಶಪೂರ್ವಕವಾಗಿ ಮುಸಲ್ಮಾನರು ಈ ಮಸೀದಿಯನ್ನು ಕಟ್ಟಿದ್ದಾರೆ ಎಂದು ಮಧ್ಯಪ್ರಾಚ್ಯದ ಇತಿಹಾಸಕಾರರು ಹೇಳುತ್ತಾರೆ

ಇತ್ತ ಕ್ರೈಸ್ತರು ಜೆರುಸಲೇಮನ್ನು ಕಳೆದುಕೊಂಡರು. ಕೈಯಲ್ಲಿ ಕತ್ತಿಯನ್ನು ಝಳಪಿಸುತ್ತಾ ಮೆದುಳಿನೊಳಗೆ ಮತಾಂಧತೆಯನ್ನು ತುಂಬಿಕೊಂಡು ದೀನ್ ದೀನ್ ಎಂದು ವಿಕಾರ ಸದ್ದು ಮಾಡುತ್ತಾ ನಾಲ್ಕು ದಿಕ್ಕಿಗೆ ಇಸ್ಲಾಮಿನ ಕತ್ತಿ ಕುದುರೆಗಳನ್ನು ಕೊಂಡು ಹೋದ ಖಲಿಫಾಗಳ ಮುಂದೆ ಕ್ರೈಸ್ತರು ಪತರುಗುಟ್ಟಿದ್ದರು. ಇನ್ನೂ ಶತ್ರುಗಳನ್ನು ಪ್ರೀತಿಸಿ ಎನ್ನುತ್ತಾ ಬ್ರೆಡ್ಡನ್ನು ಹಂಚಿದರೆ ನಮ್ಮ ಮತಕ್ಕೆ ಉಳಿಗಾಲ ಇಲ್ಲ ಎಂದರಿತು, ಹತ್ತಾರು ರಾಜ್ಯಗಳಲ್ಲಿ ಹಂಚಿಹೋಗಿದ್ದ ಕ್ರೈಸ್ತರನ್ನು ಒಂದು ಮಾಡಿ ಇಸ್ಲಾಮಿನ ದಾಳಿಯ ವಿರುದ್ಧ ಸಂಘಟಿತ ಹೋರಾಟಕ್ಕೆ ಕ್ರೈಸ್ತರ ಪರಮೋಚ್ಚ ಗುರುಗಳು ಕರೆ ನೀಡಿದರು. ಆ ಪವಿತ್ರ ಯುದ್ಧಕ್ಕೆ ಅವರು ಇಟ್ಟ ಹೆಸರು ಕ್ರುಸೇಡ್.
ಜುಲೈ 1099ರಲ್ಲಿ ಕ್ರೈಸ್ತರು ಭಾರಿ ಯುದ್ಧಮಾಡಿ ಮುಸಲ್ಮಾನರಿಂದ ಜೆರುಸಲೇಮನ್ನು ಮರು ವಶಪಡಿಸಿಕೊಂಡು ಗೆಲುವಿನ ನಗೆ ಬೀರಿದರು.

ಆದರೆ ಕರ್ಮಟ ಅರಬ್ಬರು ತಮ್ಮ ಮೂರನೇ ಅತಿ ಪವಿತ್ರ ಕ್ಷೇತ್ರವನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟಾರೆ? ಜೆರುಸಲೆಮ್ ನಲ್ಲಿ ಕ್ರೈಸ್ತರ ಆಡಳಿತ ದುರ್ಬಲವಾಗುವವರೆಗೆ ಕಾದು 88 ವರ್ಷದ ಬಳಿಕ 1187ರಲ್ಲಿ ಮುಸಲ್ಮಾನರು ಜೆರುಸಲೇಮನ್ನು ಭಾರಿ ರಕ್ತಪಾತ ನಡೆಸಿ ಮರಳಿ ಗೆದ್ದರು. ಆವತ್ತೇ ಇಲ್ಲಿನ ಮಸೀದಿಗಳ ಮೇಲ್ವಿಚಾರಣಾ ನೋಡಲು ವಕ್ಫ್ ಸಮಿತಿ ನೇಮಕವಾಯಿತು. ಜೆರೂಸಲೇಮಿನ ಪವಿತ್ರ ಭೂಮಿಗೆ ಮುಸಲ್ಮಾನೇತರರಿಗೆ ಪ್ರವೇಶ ನಿರ್ಬಂಧಿಸಿದ್ದರು.
ಆದರೆ ಏಳು ಕಡಲಿನ ಆಚೆ ಹರಿದು ಹಂಚಿಹೋಗಿದ್ದ ಯಹೂದಿಗಳು ಮಾತ್ರ ನನ್ನ ಮುಂದಿನ ವರ್ಷದ ಸಬ್ಬತ್ ಆಚರಣೆಯನ್ನು ಜೆರೂಸಲೇಮಿನ ಪವಿತ್ರ ಗೋಡೆಯ ಮುಂದೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ತಮ್ಮ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತಲೇ ಬಂದಿದ್ದರು.

ಒಮ್ಮೆ ಗುರೂಜಿ ಅವರಲ್ಲಿ ಯಾರೊ ಒಬ್ಬರು ಪಾಕಿಸ್ತಾನ ಮರಳಿ ಭಾರತಕ್ಕೆ ಸೇರಬಹುದೇ ಎಂದು ಕೇಳಿದಾಗ ಯಾವತ್ತಿನ ವರೆಗೆ ನಮ್ಮ ಸಪ್ತ ಮೋಕ್ಷದಾಯಕ ತೀರ್ಥಗಳ ಸಂಕಲ್ಪದಲ್ಲಿ ಸಿಂಧುವಿನ ಸ್ಮರಣೆ ಇರುತ್ತದೆಯೊ ಆವತ್ತಿನವರೆಗೆ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದರು.

ನಮ್ಮ ಪೂರ್ವಜರ ನೆಲವಾಗಿರುವ ಇಸ್ರೇಲನ್ನು ಮರಳಿ ಪಡೆಯಬೇಕು ಜರೂಸಲಮ್ ಮೇಲೆ ನಮ್ಮ ಪವಿತ್ರ ಕ್ಷೇತ್ರ ಮತ್ತೆ ನಿರ್ಮಾಣವಾಗಬೇಕು ಎಂಬ ಯಹೂದಿಗಳ ಕನಸು ನಿತ್ಯತೆಯ ಗರ್ಭದಲ್ಲಿ ಬ್ರೂಣವಾಗಿ ಬಲಿಯ ತೊಡಗಿತು. ಭಾರತ ಒಂದನ್ನು ಹೊರತುಪಡಿಸಿ ಬೇರೆ ಎಲ್ಲಾ ದೇಶಗಳಲ್ಲಿ ಚಿತ್ರಹಿಂಸೆ,ಅವಮಾನ ಕಗ್ಗೊಲೆ ಅತ್ಯಾಚಾರ ಲೂಟಿ ಜನಾಂಗಿಯ ಅಸ್ಪೃಶ್ಯತೆಯನ್ನು ಅನುಭವಿಸಿ ಕೊನೆಗೊಮ್ಮೆ ಹಿಟ್ಲರನ ವಿಷಾನಿಲದ ಚೇಂಬರಿನೊಳಗೆ ಹೊಕ್ಕು 60ಲಕ್ಷ ತನ್ನವರ ಹೆಣವನ್ನು ದಾಟಿ ಯಹೂದಿ ಜೀವಂತವಾಗಿ ಹೊರಬಂದ. ಹಾಗೆ ಬಂದವನೇ ಗಟ್ಟಿಯಾಗಿ ಬೇರು ಬಿಟ್ಟಿದ್ದು ತನ್ನ ತನ್ನ ಪೂರ್ವಜರ ತ್ಯಾಗ ಬಲಿದಾನಗಳಿಗೆ ಸಾಕ್ಷಿಯಾದ ಇಸ್ರೇಲಿನ ನೆಲದಲ್ಲಿ.

19ನೇ ಶತಮಾನದ ಆರಂಭದಲ್ಲಿ ಜಗತ್ತಿನ ವಿವಿಧ ಮೂಲೆಗಳಲ್ಲಿದ್ದ ಯಹೂದಿಗಳು ತಮ್ಮದೇ ಆದ ದೇಶ ನಿರ್ಮಿಸುವ ಉದ್ದೇಶದಿಂದ ತಮ್ಮ ಮಾತೃಭೂಮಿಗೆ ಮರಳ ತೊಡಗಿದರು. ಪ್ಯಾಲಿಸ್ತಿನ್ ಎಂದು ಕರೆಯಲ್ಪಡುತ್ತಾ ಅರಬ್ಬರ ಕಪಿಮುಷ್ಟಿಯಲ್ಲಿದ್ದ ತಮ್ಮ ಪೂರ್ವಜರ ನೆಲಕ್ಕೆ ಬಂದು ಅಲ್ಲಿ ಸ್ಥಳವನ್ನು ಖರೀದಿ ಮಾಡಿ ಕಾನೂನುಬದ್ಧವಾಗಿ ವಾಸ ಮಾಡತೊಡಗಿದರು. ಎರಡನೇ ವಿಶ್ವ ಯುದ್ಧದಲ್ಲಿ ಟರ್ಕಿಯನ್ನು ಬಗ್ಗುಬಡಿದ ಬ್ರಿಟಿಷರು ಅದರ ವಶದಲ್ಲಿದ್ದ ಪ್ಯಾಲೇಸ್ತೀನಿ ಭೂಮಿಯನ್ನು ಎರಡು ವಿಭಾಗಗಳಾಗಿ ಹಂಚಿದರು. ಅರಬರಿಗೆ ಫೆಲೆಸ್ತೀನ್ ಮತ್ತು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಹುಟ್ಟೂರಿಗೆ ಮರಳಿದ ಯಹೂದಿಗಳಿಗೆ ಇಸ್ರೇಲ್. ಇದು ಆಗಿದ್ದು 1948ರಲ್ಲಿ.

ಮುಸಲ್ಮಾನರ ಪ್ರಬಲ ವಿರೋಧದ ನಡುವೆಯೂ ಇಸ್ರೇಲ್ ಅವರ ಎದೆಯ ಮೇಲೆ ತಲೆಯೆತ್ತಿ ನಿಂತಿತು. 4 ಸುತ್ತಲಿನಿಂದ ಮುಸಲ್ಮಾನ ದೇಶಗಳು ಮಧ್ಯದಲ್ಲಿ ಒಂದು ಇಸ್ರೇಲ್ ಎಂಬ ಯಹೂದಿ ದೇಶ. ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಕ್ಕೆಟ್ಟ ಶೇಕುಗಳು ಮೇಕೆ ಗಡ್ಡ ನೇವರಿಸುತ್ತಾ ಕೈಕೈ ಹಿಸುಕಿಕೊಂಡರು

ಸಂಯುಕ್ತ ರಾಷ್ಟ್ರ ಮಂಡಳಿಯ ಮುಂದೆ ಇಸ್ರೇಲಿಗರು ತಮಗೆ ರಾಜಧಾನಿಯಾಗಿ ಜೆರುಸಲೇಮನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಯಹೂದಿಗಳಿಗೆ ನೆಲೆ ಒದಗಿಸಿಕೊಟ್ಟ ಬಗ್ಗೆ ಅಪಾರ ಸಿಟ್ಟು ಹೊಂದಿದ್ದ ಅರಬ್ಬರು ಜೆರುಸಲೇಮನ್ನು ಕೂಡ ಕಳೆದುಕೊಂಡರೆ ಇನ್ನಷ್ಟು ಕುಪಿತರಾಗುತ್ತಾರೆ ಎಂದರಿತ ಬ್ರಿಟಿಷರು ಅದನ್ನು ಇಸ್ರೇಲಿಗೂ ನೀಡಲಿಲ್ಲ ಅರಬ್ಬರ ಪ್ಯಾಲೆಸ್ತೇನಿಗೂ ನೀಡಲಿಲ್ಲ. ಅದನ್ನು ಸಂಯುಕ್ತ ರಾಷ್ಟ್ರ ಮಂಡಳಿಯ ವಶಕ್ಕೆ ಒಪ್ಪಿಸಿದರು.

ಇದಾದ ಸ್ವಲ್ಪ ಸಮಯಗಳ ಕಾಲ ಜೆರೂಸಲೇಮಿನಲ್ಲಿ ಶಾಂತಿ ಇತ್ತು. ಆದರೆ ಪ್ಯಾಲೇಸ್ತೀನಿ ತುರ್ಕರ ತುರಿಕೆ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ
67ರಲ್ಲಿ ಜೆರುಸಲೇಮನ್ನು ವಶಪಡಿಸಲು ಪ್ಯಾಲೆಸ್ಟೈನ್ ಅರಬ್ ದೇಶಗಳ ಬೆಂಬಲದೊಂದಿಗೆ ಮುನ್ನುಗ್ಗಿತು. ಇದರ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಹೊಂದಿದ್ದ ಇಸ್ರೇಲ್. ಜಾಗತಿಕ ಯುದ್ಧ ಇತಿಹಾಸದಲ್ಲೇ ಅತ್ಯಂತ ವ್ಯೂಹಾತ್ಮಕ ಯುದ್ಧ ಎಂದು ಕರೆಯಲ್ಪಡುವ ಆರು ದಿನದ ಸಮರಕ್ಕೆ ಮುನ್ನುಡಿ ಬರೆಯಿತು. ಒಂಟಿ ದೇಶ ಎಂದು ಬಗೆದು ಹಿಂಡುಹಿಂಡಾಗಿ ಮುತ್ತಿದ ಅರಬ್ಬರು ಇಸ್ರೇಲಿಗಳ ಮಾರಣಾಂತಿಕ ಹೊಡೆತಕ್ಕೆ ಅಂಡು ಸುಟ್ಟ ನಾಯಿಯಂತೆ ಮೂಲೆ ಸೇರಿದರು . ಅಲ್ಲಿಯವರೆಗೂ ಮಾನವೀಯತೆ ಕಾನೂನು ಎಂದು ಜೆರುಸಲೇಮನ್ನು ವಶಪಡಿಸದೇ ಬಿಟ್ಟಿದ್ದ ಯಹೂದಿಗಳು ಜೆರುಸಲೇಮನ್ನು ತಮ್ಮ ವಶಕ್ಕೆ ಪಡೆದುಕೊಂಡು ಬಿಟ್ಟರು. ಕಾಲು ಕೆರೆದು ಜಗಳಕ್ಕೆ ಹೋಗಿ ಮುಖಮೂತಿ ನೋಡದೆ ಏಟು ತಿಂದ ಅರಬ್ಬರು ಇಸ್ರೇಲಿಗೆ ಶರಣಾಗಿ ಮಾತುಕತೆಯ ಮೇಜಿನ ಮೇಲೆ ಕೂತರು. ಅಲ್ಲಿಯವರೆಗೂ ಟೆಂಪಲ್ ಆಫ್ ಮೌಂಟ್ ಮೇಲೆ ವಕ್ಫ್ ಹಿಡಿತವಿತ್ತು. ಇಸ್ರೇಲ್ ಉದಾರತೆಯನ್ನು ತೋರಿ ಇದರಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಇಸ್ರೇಲ್ ಮುಸಲ್ಮಾನರ ಜೊತೆ ಒಂದು ಸೌಹಾರ್ದಯುತವಾದ ಒಪ್ಪಂದವನ್ನು ಮಾಡಿಕೊಂಡಿತು. ಟೆಂಪಲ್ ಮೌಂಟ್ ಜವಾಬ್ದಾರಿಯನ್ನು ಜಾರ್ಡನ್ ದೇಶಕ್ಕೆ ನೀಡುವುದು. ಮತ್ತು ಯಹೂದಿಗಳಿಗೆ ಅಲ್ಲಿ ಪ್ರಾರ್ಥನೆಗೆ ಅವಕಾಶ ಒದಗಿಸುವುದು ಈ ಒಪ್ಪಂದದ ಮುಖ್ಯ ಅಂಶವಾಗಿತ್ತು.

ಆದರೆ ಈ ಒಪ್ಪಂದದ ಬಗ್ಗೆ ಕಟ್ಟರ್ ಮುಸಲ್ಮಾನರು ಮತ್ತು ಕಟ್ಟರ್ ಯಹೂದಿಗಳಿಗೆ ಸಮಾಧಾನವಿರಲಿಲ್ಲ ಕಟ್ಟರ್ ಮುಸಲ್ಮಾನರು ಅಲ್ ಅಕ್ಸಾ ಮಸೀದಿ ಆವರಣಕ್ಕೆ ಮುಸಲ್ಮಾನೇತರರು ಕಾಲು ಇಡುವುದನ್ನು ಯಾವ ಕಾರಣಕ್ಕೂ ಸಹಿಸುತ್ತಿರಲಿಲ್ಲ. ಇತ್ತ ಒಪ್ಪಂದದಲ್ಲಿ ಯಹೂದಿಗಳಿಗೆ ಕೇವಲ ಪ್ರವಾಸಿಗರಾಗಿ ಬಂದು ಹೋಗಲು ಮಾತ್ರ ಅನುಮತಿ ಇತ್ತು ಪೂಜೆ ಮಾಡುವ ಹಕ್ಕು ಇರಲಿಲ್ಲ. ಇದು ಯಹೂದಿ ಕಟ್ಟರ್ ವಾದಿಗಳನ್ನು ಕೆರಳಿಸಿತು. ಜೆರುಸಲೇಮನ್ನು ತಮ್ಮ ಬಾಹುಬಲದಿಂದ ಗೆದ್ದ ಮೇಲೆ ಅದನ್ನು ಪೂರ್ಣವಾಗಿಇಸ್ರೇಲ್ ವಶಕ್ಕೆ ಪಡೆದುಕೊಳ್ಳದೆ ಮುಸಲ್ಮಾನರ ಜೊತೆ ಒಪ್ಪಂದ ಮಾಡಿದ್ದಾದರೂ ಯಾಕೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.

ಅಂದಿನಿಂದ ಇಂದಿನವರೆಗೂ ಜೆರುಸಲೆಂ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಜ್ವಾಲಾಮುಖಿಯ ಪರ್ವತವಾಗಿ ಉಳಿದಿದೆ. ಆಗೊಮ್ಮೆ-ಈಗೊಮ್ಮೆ ಮತಾಂಧತೆಯ ಲಾವಾ ರಸವನ್ನು ಕಾರಿ ಇದು ಒಂದಷ್ಟು ಜನರ ಬಲಿ ಪಡೆದುಕೊಳ್ಳುತ್ತಲೇ ಇದೆ

1982ರಲ್ಲಿ ಅಲೆನ್ ಗುಡ್ಮನ್ ಎಂಬ ಯಹೂದಿ ಸೈನಿಕ ಡೋಮ್ ಆಫ್ ರಾಕ್ ಮಸೀದಿಯ ಒಳಗೆ ನುಗ್ಗಿ ಗುಂಡು ಹಾರಿಸಿ ಕೆಲವರನ್ನು ಕೊಂದುಹಾಕಿದ. ಇದಕ್ಕೆ ಮಸೀದಿ ಒಳಗಿಂದ ಯಹೂದಿಗಳು ಪ್ರಾರ್ಥನೆ ಮಾಡುವ ಸ್ಥಳಕ್ಕೆ ಕಲ್ಲು ಹೊಡೆದಿದ್ದು ಕಾರಣವಾಗಿತ್ತು. ಇಸ್ಲಾಮಿಕ್ ಮತಾಂಧರಿಗೆ ಕಲ್ಲು ಹೊಡೆಯುವ ಚಟ ಕಾಶ್ಮೀರದಲ್ಲಿ ಮಾತ್ರ ಇರುವುದು ಎಂದು ಭಾವಿಸಬೇಡಿ. ಜೆರೂಸಲೇಮಿನ ಆವರಣದಲ್ಲಿಯೂ ಇವರ ಕಲ್ಲುಗಳು ಆಗೊಮ್ಮೆ-ಈಗೊಮ್ಮೆ ತಟಪಟನೆ ಬಂದು ಬೀಳುತ್ತವೆ.

ಆದರೆ ಯಹೂದಿಗಳು ಮಾತ್ರ ಕಲ್ಲು ಹೊಡೆಸಿಕೊಂಡು ಸುಮ್ಮನೆ ಕೂರುವುದಿಲ್ಲ. ಕಲ್ಲಿಗೆ ಗುಂಡಿನ ಮೂಲಕ ಉತ್ತರ ನೀಡುವುದು ಇಸ್ರೇಲಿಗರ ಜಾಯಮಾನ.

2000ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅರಬ್ಬರು ಜೆರುಸಲೆಮ್ ಗಾಗಿ ಲಾಬಿ ಮಾಡಲು ಮುಂದಾದಾಗ ಇಸ್ರೇಲ್ ತನ್ನ ಮಾಜಿ ಪ್ರಧಾನಿ ಯನ್ನು ಅಲ್ಲಿಗೆ ಕಳುಹಿಸಿ ತನ್ನ ಹಕ್ಕನ್ನು ಪ್ರತಿಪಾದಿಸಿತ್ತು.

2014 ರಲ್ಲಿ ಜೆರುಸೆಲೆಂ ಯಹೂದಿಗಳ ಪುಣ್ಯಭೂಮಿ ಎಂದು ಹೇಳಿಕೆ ಕೊಟ್ಟ ಯಹೂದಿ ಮುಖಂಡನೊಬ್ಬ ನನ್ನು ಪ್ಯಾಲೇಸ್ತೀನಿ ಉಗ್ರರು ಕೊಲ್ಲಲು ವಿಫಲ ಯತ್ನ ನಡೆಸಿದರು. ಇದು ಸಾಕಷ್ಟು ದೊಂಬಿ ಗಲಾಟೆಗೆ ಕಾರಣವಾಯಿತು . ಈ ಘಟನೆಯ ಬಳಿಕ ಮುಸಲ್ಮಾನರನ್ನು ಟೆಂಪಲ್ ಮೌಂಟಿ ನಿಂದ ದೂರ ಇಡಲಾಯಿತು.

ಇದಿಷ್ಟು ಹಳೆಯ ಕಥೆ ಸದ್ಯ ಜೆರುಸಲೆಮ್ ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಸ್ವಲ್ಪ ತಿಳಿಯೋಣ

ಜೆರೂಸಲೇಮಿನ ಪೂರ್ವಭಾಗದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಶೇಕ್ ಜರ್ರಾ ಎಂಬ ಪ್ರದೇಶವಿದೆ. ಇಲ್ಲಿ ಯಹೂದಿಗಳ ಟ್ರಸ್ಟ್ ಒಂದರ ಮಾಲೀಕತ್ವದಲ್ಲಿರುವ ಆರು ಮನೆಗಳಲ್ಲಿ ಪ್ಯಾಲೇಸ್ತೀನಿ ಮುಸಲ್ಮಾನ ಕುಟುಂಬಗಳು ವಾಸವಿದ್ದವು. ಇವರನ್ನು ಮನೆ ಬಿಟ್ಟು ಕೊಡುವಂತೆ ಯಹೂದಿ ಟ್ರಸ್ಟ್ ಕೇಳಿಕೊಂಡಾಗ ಇವರು ಬಿಟ್ಟುಕೊಡಲಿಲ್ಲ. ಬದಲಾಗಿ ಮುಸಲ್ಮಾನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮನ್ನು ಇಲ್ಲಿಂದ ಜನಾಂಗೀಯವಾಗಿ ನಿರ್ಣಾಮ ಮಾಡಲು ಸಂಚು ರೂಪಿಸಿದ್ದಾರೆ ಎಂದು ಮಾನವ ಹಕ್ಕು ದಮನದ ಕಥೆಕಟ್ಟಿ ಅಂತರಾಷ್ಟ್ರೀಯ ಇಸ್ಲಾಮಿಕ್ ವಲಯವನ್ನು ಸೆಳೆಯುವ ಕೆಲಸ ಮಾಡಿದರು.ಈ ಆರು ಕುಟುಂಬಗಳಿಗೆ ಪ್ಯಾಲೇಸ್ತೀನ್ ಬೆಂಬಲವನ್ನು ಕೊಟ್ಟು ಮನೆ ಖಾಲಿ ಮಾಡಬೇಡಿ ಏನಾಗುತ್ತದೆ ನೋಡೋಣ ಎಂದಿತು. ಯಹೂದಿಗಳ ಟ್ರಸ್ಟ್ ನ್ಯಾಯಾಲಯದ ಮೊರೆ ಹೋಯಿತು. ಅಲ್ಲಿ ಯಹೂದಿಗಳಿಗೆ ಜಯ ಸಿಕ್ಕಿತ್ತು. ಆದರೆ ಈ ಮೊಂಡು ಮತಾಂಧ ಪ್ಯಾಲೇಸ್ತೀನಿಯರು ಮನೆ ಖಾಲಿ ಮಾಡುವ ಬದಲು ದೊಂಬಿ ಗಲಾಟೆಗಳನ್ನು ಎಬ್ಬಿಸಿದರು. ಶೇಕ್ ಜರಾ ಬೀದಿಯಲ್ಲಿ ಅಕ್ರಮ ಕೂಟ ಸೇರಿಕೊಂಡು ನಮಾಜ್ ಮಾಡುವುದು, ರಸ್ತೆಯಲ್ಲಿ ಇಫ್ತಾರ್ ಆಚರಿಸಿ ಇಸ್ರೇಲ್ ವಿರುದ್ಧ ಘೋಷಣೆ ಕೂಗುವುದು ಇಸ್ರೇಲಿ ಫೋರ್ಸ್ ಗಳ ಮೇಲೆ ಕಲ್ಲು ತೂರಾಟ ಮಾಡುವುದು ಮೊದಲಾದ ಹುಚ್ಚಾಟಕ್ಕೆ ಇಳಿದರು. ಈ ರೀತಿಯ ಹುಚ್ಚಾಟಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಕೊಟ್ಟು ಅನುಭವ ಇದ್ದ ಇಸ್ರೇಲ್ ಫೋರ್ಸ್ ಇವರ ವರ್ತನೆಗಳು ಇನ್ನೂ ಸ್ವಲ್ಪ ಅತಿರೇಕಕ್ಕೆ ಹೋಗಲಿ ಎಂದು ಕಾಯುತ್ತಿದ್ದರು.

ಮೊನ್ನೆ ಮೇ 10ರಂದು ಇಸ್ರೇಲಿಗರು ಜೆರುಸಲೆಮ್ ಡೇ ಆಚರಿಸಲು ಜೆರುಸಲೇಮಿಗೆ ಬಂದಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ಮಸೀದಿಯ ಒಳಭಾಗದಿಂದ ಬಾರಿ ಕಲ್ಲುತೂರಾಟ ನಡೆಯಿತು. ಕೂಡಲೇ ಕಾರ್ಯಾಚರಣೆಗೆ ಇಳಿದ ಇಸ್ರೇಲಿ ಫೋರ್ಸ್ ಮಸೀದಿಯ ಒಳನುಗ್ಗಿ ಕಿಡಿಗೇಡಿಗಳ ನಡು ಮುರಿಯುವಂತೆ ಬಾರಿಸಿ, ದರದರನೆ ಹೊರಗೆಳೆದು ಮತ್ತೆ ಯಾವತ್ತೂ ಕಲ್ಲು ಮುಟ್ಟದಂತೆ ಗಂಟು ಗಂಟನ್ನು ಗುದ್ದಿದ್ದಾರೆ.
ಮುಸ್ಲಿಂ ಗೂಂಡಾಗಳ ಕಲ್ಲೇಟಿಗೆ 9 ಜನ ಯಹೂದಿಗಳಿಗೆ ಪೆಟ್ಟಾಗಿದ್ದರೆ, ಸುಮಾರು 300 ರಷ್ಟು ಪ್ಯಾಲಿಸ್ತೀನಿ ಗೂಂಡಾಗಳನ್ನು ಇಸ್ರೇಲಿ ಪೊಲೀಸ್ ಫೋರ್ಸ್ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿಸಿ ಬಂದಿದೆ.

ಈ ಹಿಂಸಾಚಾರದ ಬೆನ್ನಿಗೆ ಪ್ಯಾಲೆಸ್ತೀನ್ ಇಸ್ರೇಲ್ ವಿರುದ್ಧ ಹೋರಾಟಕ್ಕೆ ಕರೆ ನೀಡಿತು. ಮೇ ಹತ್ತರ ರಾತ್ರಿ ಇಸ್ರೇಲಿಗೆ ಮಗ್ಗುಲ ಮುಳ್ಳಾಗಿರುವ ಗಾಜಾಪಟ್ಟಿಯ ಹಮಾಸ್ ಉಗ್ರರು ಸುಮಾರು 150 ರಾಕೆಟುಗಳನ್ನು ಇಸ್ರೇಲ್ ಮೇಲೆ ಸಿಡಿಸಿದರು. ಅಲ್ಲಿಗೆ ಅಧಿಕೃತ ಯುದ್ಧ ಘೋಷಣೆಯಾಯಿತು.
ಹಮಾಸ್ ಉಗ್ರರ ಎದೆ ಸೀಳಲು ಹೊರಟುನಿಂತ ಇಸ್ರೇಲಿ ಪಡೆ ತನ್ನ ಈ ಕಾರ್ಯಾಚರಣೆಗೆ ಕೊಟ್ಟ ಹೆಸರು “ಆಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”
ಮೇ 11ರ ಬೆಳಿಗ್ಗೆ ಇಸ್ರೇಲಿನ ಯುದ್ಧ ವಿಮಾನಗಳು ಗಾಜಾಪಟ್ಟಿಯ ಮೇಲೆ ದಾಳಿ ಸಾರಿದವು. ಒಟ್ಟು 130 ಏರ್ ಸ್ಟ್ರೈಕ್ ನಡೆದಿದೆ. ಇನ್ನೂ ಒಂದೆರಡು ದಿನ ಯುದ್ಧ ಮುಂದುವರೆದರೆ ಇಡಿಯ ಗಾಜಾ ಪಟ್ಟಿ ಹರಿದುಹೋದ ಹಜಾಮನ ಪೈಜಾಮದ ಹಾಗೆ ಜರಡಿಯೆದ್ದು ಹೋಗಲಿದೆ. ನಮ್ಮ ದೇಶವೂ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರಾಣಿಯಂತೆ ಬಳಸಿ ಎದುರಾಳಿಯ ಮೇಲೆ ದಾಳಿಮಾಡುವ ಉಗ್ರರ ನಪಂಸಕ ಪ್ರವೃತ್ತಿ, ಹಮಾಸ್ ಜಿಹಾದಿಗಳಿಗೂ ಇದೆ. ಆದರೆ ಇಸ್ರೇಲ್ ಇದನ್ನೆಲ್ಲ ಕೇರ್ ಮಾಡಲ್ಲ. ಉಗ್ರ ಯಾರ ಹಿಂದೆ ಅವಿತಿದ್ದಾನೆ ಎನ್ನುವುದು ನಂತರದ ವಿಚಾರ. ಉಗ್ರಗಾಮಿಯ ಬುಡ ಬೀಜವೂ ಉಳಿಯದಂತೆ ಹೊಸಕಿ ಹಾಕಬೇಕೆನ್ನುವುದೇ ಅವರ ಮೊದಲ ಆದ್ಯತೆ. ಅದರಲ್ಲಿ ಅಮಾಯಕರು ಸತ್ತರೆ, ಉಗ್ರರ ಜೊತೆ ನಿಲ್ಲುವ ಮೊದಲು ಅಮಾಯಕರು ಯೋಚಿಸಬೇಕಿತ್ತು ಎನ್ನುತ್ತದೆ ಇಸ್ರೇಲ್.
ಹಮಾಸ್ ಉಗ್ರರಿಗೆ ಈ ಬಾರಿ ಹಬ್ಬ ಆಚರಿಸಲು ಸುಡುಮದ್ದಿನ ಕೊಡುಗೆಯನ್ನು ಇಸ್ರೇಲ್ ದಯಪಾಲಿಸಿದೆ. ಈ ಸಿಡಿಯುವ ಕ್ಷಿಪಣಿಯ ಕಣ್ಣು ಕೋರೈಸುವ ಬೆಳಕಿನಲ್ಲಾದರೂ ಉಗ್ರವಾದಿಗಳಿಗೆ ಜ್ಞಾನೋದಯವಾಗುತ್ತದೆಯೋ ಕಾದುನೋಡಬೇಕು.

ಮಹಿಳೆಯರನ್ನು ಮಕ್ಕಳನ್ನು ಸೇನೆಯ ಮುಂದೆ ಬಿಟ್ಟು ಅವರ ಮುಕುಳಿ ಹಿಂದೆ ಅವಿತುಕೊಳ್ಳುವ ಪ್ಯಾಲೇಸ್ತೀನಿ ಉಗ್ರರಿಗೆ ನೈತಿಕ ಬೆಂಬಲ ನೀಡುವ ಅನೇಕ ಅಂತರಾಷ್ಟ್ರೀಯ ಸಂಘಟನೆಗಳಿವೆ. ಪ್ಯಾಲೇಸ್ತೀನಿ ಮಕ್ಕಳ ಕೈಗೆ ಬಾವುಟ ಕೊಟ್ಟು ಇಸ್ರೇಲಿ ಸೈನಿಕರ ಮುಂದೆ ಬೀಸಲು ಹೇಳಿ ಅದರ ಫೋಟೋ ತೆಗೆಯುವುದು, ಬುರ್ಖಾಧಾರಿ ಮಹಿಳೆಯೊಬ್ಬಳು ಮುಖ ಕಿವುಚಿಕೊಂಡು ಘೋಷಣೆ ಕೂಗುವ ಚಿತ್ರವನ್ನು ವೈರಲ್ ಮಾಡುವುದು, ಶೆಲ್ಲುಗಳು ಸಿಡಿಯುವ ಯುದ್ಧಭೂಮಿಯಲ್ಲಿ ಮಗುವನ್ನು ನಿಲ್ಲಿಸಿ ಅದು ಅಳುವ ಚಿತ್ರವನ್ನು ಪತ್ರಿಕೆಗಳಲ್ಲಿ ಮುದ್ರಿಸುವುದು, ಮುರುಕಲು ಮನೆಯೊಳಗಡೆ ಮುಸ್ಲಿಮ ವೃದ್ಧರನ್ನು ಕೂರಿಸಿ ಫೋಟೋ ಹೊಡೆಯುವುದು,ಹೀಗೆ ನಾನಾ ರೀತಿಯಲ್ಲಿ ಇಸ್ರೇಲ್ ವಿರುದ್ಧ narrative ಹುಟ್ಟಿಸಿ ಬಿಡುವ ಕೆಲಸ ನಡೆಯುತ್ತಿದೆ.ಪ್ಯಾಲೆಸ್ತೇನಿನಲ್ಲಿರುವ ಕೆಲ ಕ್ರೈಸ್ತ ಸಂಘಟನೆಗಳು ಕೂಡ ಇಸ್ರೇಲ್ ವಿರುದ್ಧ ಕಾರ್ಯಾಚರಿಸುತ್ತಿವೆ. ಇಸ್ರೇಲಿಗರ ಅಸ್ತಿತ್ವದ ಹೋರಾಟವನ್ನು ಮರೆಮಾಚಿ ಅವರನ್ನು ರಾಕ್ಷಸರಂತೆ ಬಿಂಬಿಸಿ ಪ್ಯಾಲೇಸ್ತೀನಿ ಭಯೋತ್ಪಾದಕರನ್ನು ತಲೆಯ ಮೇಲೆ ಹೊತ್ತು ಮೆರೆಯುವವರ ಸಂಖ್ಯೆ ಭಾರತದಲ್ಲಿಯೂ ಕಡಿಮೆ ಇಲ್ಲ. ಇವತ್ತು ಇಸ್ರೇಲಿಗೆ ಆದ ಸ್ಥಿತಿಯೇ ಮುಂದೊಂದು ದಿನ ಭಾರತಕ್ಕೂ ಕಾದಿದೆ.

ಕೊನೆಯ ಮಾತು ಭಾರತಕ್ಕೆ ಮುಂದೆ ಎದುರಾಗಲಿರುವ ಈ ಸಾಮ್ರಾಜ್ಯಶಾಹಿ ಮತಾಂಧರ ಸಮಸ್ಯೆಗೆ ಹೋರಾಟ ಹೇಗೆ ರೂಪಿಸಬೇಕು ಮತ್ತು ಹಿಂದೂ ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಗಂಭೀರ ಪ್ರಶ್ನೆಗೆ ಇಸ್ರೇಲ್ ಟೂಲ್ ಕಿಟ್ ನಲ್ಲಿ ಉತ್ತರ ಅಡಗಿದೆ.

ಜೈ ಮಹಾಕಾಲ್

ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ . ಇಸ್ರೇಲ್ ಅಂದರೆ ಶಕ್ತಿ. ಜಗತ್ತು ಪೂಜಿಸುವುದು ಶಕ್ತಿಯನ್ನ !!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು. ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು . ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ . ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ . ಇಸ್ರೇಲ್ ಸುತ್ತಾ ಲೆಬನಾನ್ , ಸಿರಿಯಾ , ಸೌದಿ ಅರೇಬಿಯಾ , ಪ್ಯಾಲೇಸ್ತೀನ್, ಜೋರ್ಡನ್ , ಈಜಿಪ್ಟ್ ದೇಶಗಳನ್ನ ಹೊಂದಿದೆ . ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ . ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ . ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ . ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ . ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು . ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು . ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ . ಜೋರಾಗಿ ಸೈರನ್ ಕೂಗುತ್ತದೆ . ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ . ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ . ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ .ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ . ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ . ಮುಂದಿನ ಕತೆ , ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ . ಇಷ್ಟೆ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ . ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ .

ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು .

ಮೊದಲನೆ ಮಹಾಯುದ್ಧಕ್ಕೆ ಮುಂಚೆ :

ಯಹೂದಿಗಳು ಅತ್ಯಂತ ಸಣ್ಣ ಜನಾಂಗ . ಇವರ ಉಳಿವಿಗಾಗಿ ವಿದೇಶಗಳಿಂದ ಕಳಿಸುತ್ತಿದ್ದ ದೇಣಿಗೆ ಹಣದಿಂದ ಇಸ್ರೇಲಿ ಯಹೂದಿಗಳು ಜೀವನ ಸಾಗುತಿತ್ತು . ಇಸ್ರೇಲ್ ಇನ್ನೂ ಹುಟ್ಟಿರಲಿಲ್ಲ , ಹೇಳಿಕೊಳ್ಳುವಂತ ಯಾವುದೇ ರೀತಿಯ ಹೂಡಿಕೆ ಇವರಿಂದ ಬಂದಿರಲಿಲ್ಲ . ೧೯ ನೇ ಶತಮಾನದಲ್ಲಿ ರೋತ್ಸ್ ಚೈಲ್ಡ್ ವೈನ್ ತಯಾರಿಕೆಯಲ್ಲಿ ಮತ್ತು ರೈಲು ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಹಣ ಹೂಡಿಕೆ ಮಾಡುತ್ತದೆ . ಆದರೆ ಅದರಿಂದ ಹೆಚ್ಚಿನ ಯಶಸ್ಸು ಹಣವನ್ನ ಗಳಿಸುವುದಿಲ್ಲ . ಹೀಗಾಗಿ ಪ್ರಥಮ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳು ಎನ್ನುವ ಪದಗಳು ಇನ್ನೂ ಶೈಶವಾಸ್ಥೆಯಲ್ಲಿದ್ದವು .

ಎರಡನೆ ಮಹಾಯುದ್ಧದ ನಂತರ :

ಎರಡನೆ ಮಹಾಯುದ್ಧ ಮುಗಿದು ನಂತರ ೧೪ ಮೇ ೧೯೪೮ ರಲ್ಲಿ ಇಸ್ರೇಲ್ ಉದಯಿಸುತ್ತದೆ . ಇದೊಂದು ಸಂಕ್ರಮಣ ಕಾಲಘಟ್ಟ . ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ಹಿಂತಿರುಗಲು ಪ್ರಾರಂಭಿಸುತ್ತಾರೆ . ಹೀಗಿದ್ದೂ ಇವರ ಸಂಖ್ಯೆ ಲಕ್ಷ ಮೀರುವುದಿಲ್ಲ . ನಿಧಾನವಾಗಿ ಕಾರ್ಖಾನೆಗಳು , ಯೂನಿವರ್ಸಿಟಿ ಕಟ್ಟಲು ಶುರು ಮಾಡುತ್ತಾರೆ . ಮುಂದುವರಿದ ದೇಶಗಳ ಮುಂದೆ ಸಪ್ಪೆ ಎನಿಸುವಷ್ಟು ಆರ್ಥಿಕ ಸ್ಥಿತಿ ಇವರದಾಗಿತ್ತು .

ಎಪ್ಪತ್ತರ ದಶಕದಿಂದ ತೊಂಬತ್ತರ ದಶಕ ದಲ್ಲಿ ಇಸ್ರೇಲ್ :

ಆರು ಲಕ್ಷವಿದ್ದ ತನ್ನ ಜನಸಂಖ್ಯೆಯನ್ನ ೪೦ ಲಕ್ಷಕ್ಕೆ ಏರಿಸಿಕೊಂಡಿದ್ದು ಇಸ್ರೇಲ್ ನ ಮಹಾಸಾಧನೆ . ಇವರ ಆರ್ಥಿಕತೆ ಬೆಳೆದು ಈಸ್ಟ್ರೇನ್ ಯೂರೋಪಿಯನ್ ದೇಶಗಳ ಆರ್ಥಿಕತೆಯ ಮಟ್ಟಕ್ಕೆ ಬಂದು ಮುಟ್ಟುತ್ತದೆ . ಆದರೂ ಟೆಲಿಫೋನ್ , ಕಾರು ಜನ ಸಾಮಾನ್ಯನಿಗೆ ಎಟುಕುತ್ತಿರಲಿಲ್ಲ . ಜನರ ತಲಾದಾಯ ಯೂರೋಪಿನ ಅಥವಾ ಅಮೇರಿಕಾ ಜನರ ತಲಾಯಾದ ಅರ್ಧದಷ್ಟಿತ್ತು . ಅಂದಿನ ದಿನಗಲ್ಲಿ ಇಸ್ರೇಲ್ ವಜ್ರದ ವ್ಯಾಪಾರದಿಂದ ತನ್ನ ಹಣವನ್ನ ಗಳಿಸುತಿತ್ತು .

ತೊಂಬತ್ತರಿಂದ ಎರಡು ಸಾವಿರದ ಹದಿನೈದು :

ಈ ವೇಳೆಯಲ್ಲಿ ಇಸ್ರೇಲ್ ನಾಟಕೀಯ ಬೆಳವಣಿಗೆ ಕಾಣುತ್ತದೆ . ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇವರಿಂದ ಸೃಷ್ಟಿಯಾಗುತ್ತೆ . ತನ್ನ ಸುತ್ತಲೂ ವೈರಿಗಳೇ ತುಂಬಿದ್ದಾರೆ ಆಕಸ್ಮಾತ್ ಅವರು ತಮ್ಮ ಸರಹದ್ದು ಮುಚ್ಚಿ ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯವನ್ನ ಮೆಟ್ಟಿ ನಿಂತು ಬೇರೆ ದೇಶಗಳಿಗೆ ಆಹಾರ ಎಕ್ಸ್ಪೋರ್ಟ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ . ನಲವತ್ತು ಲಕ್ಷವಿದ್ದ ತಮ್ಮ ಜನ ಸಂಖ್ಯೆಯನ್ನ ಎಪ್ಪತೈದು ಲಕ್ಷದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ . ಇಂದಿಗೆ (೨೦೧೭)ಇಸ್ರೇಲ್ ಜನಸಂಖ್ಯೆ ೮೩ ಲಕ್ಷ . ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ . ತಂತ್ರಜ್ಞಾನ ಪ್ರತಿಯೊಬ್ಬ ಪ್ರಜೆಯನ್ನ ತಲುಪಿದೆ . ಕಾರು , ಫೋನ್ ಅಷ್ಟೆಯೇಕೆ ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿದ್ದಾನೆ . ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ . ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯ ಇಲ್ಲಿ ತಲೆ ಎತ್ತಿ ನಿಂತಿದೆ . ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ . ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದದ್ದು ಪಡೆಯುವ ಲಾಬಿ ಮಾಡುವ ಹಂತಕ್ಕೆ ಇಸ್ರೇಲಿ ಯಹೂದಿಗಳು ಬೆಳೆದಿದ್ದಾರೆ . ಜಗತ್ತಿನ ಯಾವುದೇ ಮೂಲೆಯಲ್ಲಿ ಯಹೂದಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಬೇಕು ಅಷ್ಟರಮಟ್ಟಿಗೆ ತನ್ನ ಶತ್ರುವಿನಲ್ಲಿ ಭಯ ಬಿತ್ತುವಲ್ಲಿ ಇಸ್ರೇಲಿಗಳು ಯಶಸ್ವಿಯಾಗಿದ್ದಾರೆ .

ಇಸ್ರೇಲಿಗಳ ಹೊಸ ಪರ್ವಾರಂಭ :

ಜಗತ್ತಿನಲ್ಲಿ ೧೯೬ ದೇಶಗಳಿವೆ ಅದರಲ್ಲಿ ೫೦ ಮುಸ್ಲಿಂ ದೇಶಗಳು ೭ ಮುಸ್ಲಿಂ ಬಾಹುಳ್ಯವಿರುವ ದೇಶಗಳು ಹೀಗಾಗಿ ೫೭ ದೇಶಗಳನ್ನ ಮುಸ್ಲಿಂ ದೇಶಗಳು ಎಂದು ವಿಂಗಡಿಸಬಹುದು . ಜಗತ್ತಿನ ಜನಸಂಖ್ಯೆ ೭ (೭೦೦ಕೋಟಿ )ಬಿಲಿಯನ್ ಅದರಲ್ಲಿ ೧. ೮ (೧೮೦ಕೋಟಿ ) ಬಿಲಿಯನ್ ಜನಸಂಖ್ಯೆ ಮುಸ್ಲಿಮರು . ಅಂದರೆ ಜಗತ್ತಿನ ಜನಸಂಖ್ಯೆಯ ೨೫ ಪ್ರತಿಶತ ಈ ಜನಾಂಗದ ಜನರಿದ್ದಾರೆ . ಒಟ್ಟು ಮುಸ್ಲಿಂ ದೇಶಗಳ ಜಿಡಿಪಿ ಎರಡು ಟ್ರಿಲಿಯನ್ ಡಾಲರ್ . ಜಗತ್ತಿನ ಒಟ್ಟು ಜಿಡಿಪಿ ೭೨ ಟ್ರಿಲಿಯನ್ . ಇಸ್ರೇಲ್ ಜನಸಂಖ್ಯೆ ಕೇವಲ ೮೩ ಲಕ್ಷ ಇವರ ಜಿಡಿಪಿ ೩೦೦ ಬಿಲಿಯನ್ ಡಾಲರ್. ಇಸ್ರೇಲ್ ಬೆಳವಣಿಗೆಯ ವೇಗ ಗಮನಿಸಿದರೆ ಇದು ಐನೂರು ಬಿಲಿಯನ್ ಡಾಲರ್ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ . ಅಂದರೆ ೫೭ ದೇಶಗಳ ಒಟ್ಟು ಮೌಲ್ಯದ ಕಾಲು ಭಾಗ ಕೇವಲ ೮೩ ಲಕ್ಷ ಜನಸಂಖ್ಯೆಯ ಇಸ್ರೇಲ್ ಒಂದು ದೇಶ ಹೊಂದಲಿದೆ ಎಂದರೆ ಇಸ್ರೇಲ್ ಅದೆಷ್ಟು ಪವರ್ ಫುಲ್ ಜಗತ್ತಿನ ಬೇರೆಲ್ಲಾ ದೇಶಗಳು ಇಸ್ರೇಲ್ ಎಂದಾಕ್ಷಣ ಅದೇಕೆ ಆ ಮಟ್ಟಿನ ಗೌರವ ಕೊಡುತ್ತವೆ ಎನ್ನುವ ಅರಿವಾದಿತು . ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ . ಅಮೇರಿಕಾ ದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್ , ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ . ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ ೯೦ ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ . ಹೀಗಾಗಿ ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ .

ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು , ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ . ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು ? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ .

ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ತನ್ನ ಜನಾಂಗದ ಮೇಲೆ ,ತನ್ನ ಬದ್ಧತೆಯ ಮೇಲೆ ಅತೀವ ಕಾಳಜಿ ನಂಬಿಕೆ ಮತ್ತು ವಿಶ್ವಾಸ . ಕೋಟಿ ಮೀರಿದ ಈ ಜನಾಂಗ ಮುಂಬರುವ ದಿನಗಳಲ್ಲಿ ಇಡಿ ವಿಶ್ವದ ಮೇಲೆ ಹಿಡಿತ ಹೊಂದಿದರೆ ಅದು ಆಶ್ಚರ್ಯ ಪಡುವ ವಿಷಯವಂತೂ ಅಲ್ಲ . ಇಸ್ರೇಲಿಗಳ ಯಹೂದಿಗಳ ಬದ್ಧತೆ , ಕಟ್ಟು ನಿಟ್ಟಿಗೆ ಉದಾಹರಣೆ ನೀಡಲೇಬೇಕು . ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆ ಸಲ್ಲಿಸಲೇಬೇಕು . ಇಲ್ಲಿ ಹೆಣ್ಣು ಗಂಡು ಎನ್ನವ ಬೇಧವಿಲ್ಲ . ಇಸ್ರೇಲಿಗಳ ಮಗು ಜಗತ್ತಿನ ಯಾವುದೇ ಭಾಗದಲ್ಲಿ ಜನಿಸಲಿ ಆ ಮಗುವನ್ನ ಇಸ್ರೇಲಿ ಎಂದೇ ಪರಿಗಣಿಸಲಾಗುತ್ತದೆ . ಮತ್ತು ಆ ಮಗು ಕೂಡ ಮಿಲಿಟರಿ ಸೇವೆ ಮಾಡಲೇಬೇಕು . ವಿದೇಶದಲ್ಲಿ ನೆಲೆಸಿರುವ ಇಂತಹ ಮಕ್ಕಳು ೧೭ ನೇ ವಯಸ್ಸಿಗೆ ತಲುಪಿದಾಗ ತಾವಿರುವ ದೇಶದ ಇಸ್ರೇಲ್ ಎಂಬೆಸಿಗೆ ಹೋಗಿ ನೊಂದಾಯಿಸಿಕೊಳ್ಳಬೇಕು . ಆಗ ಮಾತ್ರ ಇದರಿಂದ ವಿನಾಯತಿ ಸಿಗುತ್ತದೆ . ಯುದ್ಧ ಅಥವಾ ಸಾಮಾನ್ಯವಲ್ಲದ ಸನ್ನಿವೇಶದಲ್ಲಿ ಪ್ರತಿ ಪ್ರಜೆಯೂ ಸೈನಿಕನಾಗಿ ಬದಲಾವಣೆ ಹೊಂದುವ ವ್ಯವಸ್ಥೆ ಅದನ್ನ ಕಟ್ಟುನಿಟ್ಟಿನಿಂದ ಪಾಲಿಸುವ ಜನ ನಾಳೆ ಜಗತ್ತನ್ನ ಆಳಲು ಏಕೆ ಸಾಧ್ಯವಿಲ್ಲ . ?

ಇಸ್ರೇಲ್ ಯುವ ಜನತೆ ತನ್ನ ಹಿಂದಿನ ತಲೆಮಾರಿಗಿಂತ ಹೆಚ್ಚು ಧಾರ್ಮಿಕತೆ ಕಡೆ ಒಲವು ತೋರುತ್ತಿದೆ . ತಂತ್ರಜ್ಞಾನ ನಭದೆತ್ತರಕ್ಕೆ ಚಿಮ್ಮುತ್ತಿರುವ ಅದರ ಹರಿಕಾರರು ಆಗಿರುವ ಯಹೂದಿಗಳು ಮಾತ್ರ ತಮ್ಮ ಮೂಲ ನಂಬಿಕೆಗಳಿಗೆ ಹೆಚ್ಚು ಹೆಚ್ಚು ನಿಷ್ಠರಾಗುತ್ತಿದ್ದಾರೆ . ಯಹೂದಿಯಲ್ಲದ ಇತರರೊಡನೆ ಮದುವೆಯಂತಹ ಸಂಬಂಧಗಳನ್ನ ಅರವತ್ತೈದು ಪ್ರತಿಶತ ಇಸ್ರೇಲಿಗಳು ಒಪ್ಪುವುದಿಲ್ಲ ಎನ್ನುವುದು ಇಂತಹ ಮಾತಿಗೆ ಪುಷ್ಟಿ ನೀಡುತ್ತದೆ . ಜಗತ್ತು ಬೇರೆ ನಾವೇ ಬೇರೆ ಎನ್ನುವ ಭಾವನೆ ಬಂದರೆ ಅಲ್ಲಿಗೆ ಎಂತಹ ಸಾಧನೆಯೂ ಶೂನ್ಯ . ಇಸ್ರೇಲ್ ಕೇವಲ ಧಾರ್ಮಿಕತೆಗೆ ಕಟ್ಟು ಬೀಳದೆ ಇರಲಿ .ಮುಂಬರುವ ದಿನಗಲ್ಲಿ ಇವರಿಂದ ವಿಶ್ವ ಶಾಂತಿ ಸ್ಥಾಪನೆಯಾಗಲಿ ಎನ್ನುವುದಷ್ಟೆ ಆಶಯ . ಇದೇನೆ ಇರಲಿ ಯಹೂದಿಗಳ ಯಶೋಗಾಥೆ ಸದ್ಯಕ್ಕೆ ನಮಗಂತೂ ಸ್ಪೂರ್ತಿದಾಯಕ. ಸ್ವಾವಲಂಬನೆ , ಸ್ವಾಭಿಮಾನ , ಪರಿಶ್ರಮ ಅವರಿಂದ ಒಂಚೂರು ನಾವು ಎರವಲು ಪಡೆದರೆ ಯಶೋಗಾಥೆಯಲ್ಲಿ ಯಹೂದಿಗಳಿಗೂ ನಾವು ಸೆಡ್ಡು ಹೊಡೆಯಬಹದು . ನಾವು ಅದಕ್ಕೆ ಸಿದ್ಧರಿದ್ದೇವೆಯೇ ??

ಲೇಖನ – #ರಂಗಸ್ವಾಮಿ_ಮೂಕನಹಳ್ಳಿ

ಮೇ 13, ಗುರುವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ,
ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ 1.55 ರಿಂದ 3:30
ಗುಳಿಕಕಾಲ 9: 10 ರಿಂದ 10:45
ಯಮಗಂಡಕಾಲ 06:00ರಿಂದ 7.35

ಮೇಷ

ಕುಲಕಸುಬುದಾರರಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ. ಪಾರಂಪರಿಕವಾಗಿ ನಡೆದು ಬಂದ ವ್ಯವಹಾರವನ್ನು ಕೈ ಬಿಡುವುದು ಬೇಡ. ಚಲನಚಿತ್ರರಂಗದವರಿಗೆ ಉತ್ತಮ ಅವಕಾಶ.

ವೃಷಭ

ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ. ಹೊಸ ಉದ್ಯಮದಲ್ಲಿ ಯಶಸ್ಸು. ಮನೆಯಲ್ಲಿ ಬಹಳ ದಿನಗಳ ನಂತರ ನಗುವನ್ನು ಕಾಣಲಿದ್ದೀರಿ. ಬಂಧುಗಳ ಆಗಮನದ ಜೊತೆಗೆ ವ್ಯವಹಾರ ಸಂಬಂಧಗಳ ಬಗ್ಗೆ ಚರ್ಚೆ.

ಮಿಥುನ

ಶೀಘ್ರದಲ್ಲಿ ಉದ್ಯೋಗದಲ್ಲಿ ಉನ್ನತಿ ಸಾಧಿಸುವಿರಿ. ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರಲಿದೆ. ಆರ್ಥಿಕ ಅಭಿವೃದ್ಧಿ. ವೃಥಾ ಆರೋಪಗಳ ಬಗ್ಗೆ ಗಮನ ಬೇಡ.

ಕಟಕ

ಉದ್ಯೋಗ ಕ್ಷೇತ್ರದಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳ. ಮಕ್ಕಳ ಯೋಗಕ್ಷೇಮದ ಬಗ್ಗೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಎದುರಾಗುವ ಸಂಕಷ್ಟಗಳು ಗೆಲುವಿನ ಸೋಪಾನವಾಗಲಿದೆ.

ಸಿಂಹ

ಬಹುದಿನಗಳ ದುಡಿಮೆಯ ನಡುವೆ ವಿಶ್ರಾಂತಿಯ ಅಗತ್ಯತೆ. ಒತ್ತಡದಿಂದ ಹೊರಬರುವ ಸಾಧ್ಯತೆ. ನೌಕಾಯಾನಿಗಳಿಗೆ ಒಳ್ಳೆಯ ಸಮಯ. ದೇವತಾ ದರ್ಶನ ಭಾಗ್ಯ.

ಕನ್ಯಾ

ಕಠಿಣ ಪರಿಶ್ರಮದ ಫಲದಿಂದ ಉತ್ತಮ ಸಫಲತೆಯನ್ನು ಪಡೆಯಲಿದ್ದೀರಿ. ಯೋಜನೆಯನ್ನು ರೂಪಿಸುವ ಮುನ್ನ ಪುನಃ ಅವಲೋಕನ ಅಗತ್ಯ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ.

ತುಲಾ

ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಮಾಡುವುದು ಉತ್ತಮ. ಆರ್ಥಿಕ ಪ್ರಗತಿಯತ್ತ ದಾಪುಗಾಲು. ಬೇರೆಯವರ ಮಾತುಗಳ ವಿಚಾರದಲ್ಲಿ ತಲೆ ಕಡಿಸಿಕೊಳ್ಳದಿರಿ. ಉನ್ನತ ವಿಚಾರಗಳತ್ತ ಒಲವು ತೋರಲಿದ್ದೀರಿ.

ವೃಶ್ಚಿಕ

ಆದಾಯದ ಹೊಸ ದಾರಿ ಗೋಚರಿಸಲಿದೆ. ಹಾಗಂತ ಅತಿಯಾದ ಖರ್ಚನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು. ಯಂತ್ರಾಗಾರದಲ್ಲಿ ಅಗ್ನಿ ಭಯ ಸಾಧ್ಯತೆ. ದೇವತಾ ಆರಾಧನೆಯಿಂದ ನೆಮ್ಮದಿ.

ಧನು

ಸಾಂಸಾರಿಕ ನೆಮ್ಮದಿಯೊಂದಿಗೆ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಮಾನಸಿಕ ನೋವನ್ನು ಇತರರಲ್ಲಿ ಹಂಚಿಕೊಳ್ಳಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅನ್ಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಗ.

ಮಕರ

ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ದೊರೆತು ಉತ್ತಮ ಅವಕಾಶ ನಿಮ್ಮದಾಗಲಿದೆ. ರಾಜಕೀಯ ಮುಖಂಡರುಗಳಿಗೆ ಮುಖಭಂಗ ಸಾಧ್ಯತೆ. ಪತ್ರಿಕೋದ್ಯಮದವರಿಗೆ ವಿಫಲತೆ ಕಂಡುಬರುತ್ತಿದೆ.

ಕುಂಭ

ಯಾವುದೋ ಧನಾಗಮನದ ನಿರೀಕ್ಷೆಯಲ್ಲಿದ್ದ ಮೂಲದಿಂದ ಹಣಕಾಸಿನ ಅನುಕೂಲ ದೊರೆಯುವ ಸಾಧ್ಯತೆ. ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಗೋಚರವಾಗುತ್ತಿದೆ. ಬಂಧುಗಳ ಸಹಾಯ ನಿಮಗಿದೆ.

ಮೀನ

ಹಣಕಾಸಿನ ಅನುಕೂಲದ ನಿರೀಕ್ಷೆಯಲ್ಲಿರುವ ನಿಮಗೆ ಶೀಘ್ರಗತಿಯಲ್ಲಿ ಕೈಗೂಡಲಿದೆ. ಬಂಧುಗಳಿಂದ ಸಹಕಾರ. ಮಕ್ಕಳ ಪ್ರಗತಿಯಿಂದ ನೆಮ್ಮದಿ. ಹೆಂಡತಿಗೆ ಅನಾರೋಗ್ಯದ ಸಾಧ್ಯತೆ. ದೂರಪ್ರಯಾಣ ತರವಲ್ಲ.

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಸಂಬಂಧ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನಲ್ಲಿ ಗ್ರಾಮಸ್ಥರು, ಭೂ ಮಾಲಕರು ಮತ್ತು ಸ್ಥಳೀಯ ಪ್ರಮುಖರೊಂದಿಗೆ ಶಾಸಕ ಕೆ.ರಘುಪತಿ ಭಟ್ ಭೂಮಿ ಪೂಜೆ ನೆರವೇರಿಸಿ ಹಡಿಲು ಕೃಷಿ ಭೂಮಿಯ ಉಳುಮೆಗೆ ಚಾಲನೆ ನೀಡಿದರು.

ಬಳಿಕ ಹಡಿಲು ಭೂಮಿಯ ಸುತ್ತಮುತ್ತಲಿನ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಗದ್ದೆಗಳ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ತೋಡುಗಳನ್ನು ಪುನಶ್ಚೇತನಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಕಪ್ಪೆಟ್ಟು, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಕೇದಾರೋತ್ಥಾನ ಟ್ರಸ್ಟ್(ರಿ.) ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಸುನಿಲ್ ಕುಮಾರ್, ಹರೀಶ್ ಆಚಾರ್ಯ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ಸುರೇಶ್ ಶೆಟ್ಟಿ, ಶರತ್ ಶೆಟ್ಟಿ, ಭುವನೇಂದ್ರ, ಗ್ರಾ.ಪಂ. ಸದಸ್ಯ ಹರೀಶ್ ಪಾಲನ್ ಕಪ್ಪೆಟ್ಟು, ಮಾಜಿ ಗ್ರಾ.ಪಂ. ಸದಸ್ಯೆ ದಯಾಶಿನಿ ಪಂದುಬೆಟ್ಟು, ಸ್ಥಳೀಯರಾದ ಶಿವಾಜಿ ಸನಿಲ್, ರಾಧಾಕೃಷ್ಣ, ಗಣೇಶ್ ಪೂಜಾರಿ ಕಪ್ಪೆಟ್ಟು, ಡೇನಿಸ್ ಕ್ವಾರ್ಡ್ರಸ್ ಕಿದಿಯೂರು, ಗಿರೀಶ್ ಅಮೀನ್, ರಾಜೇಶ್ ಪೂಜಾರಿ, ಕೀರ್ತನ, ವಿಠಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಕೃಷಿಕರು, ಊರಿನ ಹಿರಿಯರು, ಭೂ ಮಾಲಕರು ಹಾಗೂ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಕೈಜೋಡಿಸಿರುವ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಶಾಸಕ ಕೆ.ರಘುಪತಿ ಭಟ್ ಅವರು ಕೃತಜ್ಞತೆಗಳನ್ನು ಸಲ್ಲಿಸಿ, ಹಡಿಲು ಭೂಮಿ ಕೃಷಿಯ ಸಂಪೂರ್ಣ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು.

ಮೇ 12, ಬುಧವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,
ಬುಧವಾರ, ಪಾಡ್ಯ ತಿಥಿ , ಕೃತಿಕಾ ನಕ್ಷತ್ರ
ರಾಹುಕಾಲ:12.19 ರಿಂದ 1.54
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09

ಮೇಷ

ಈ ದಿನದ ಪ್ರಗತಿ ಅಷ್ಟೊಂದು ಉತ್ತಮವಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.

ವೃಷಭ

ಗುರುಹಿರಿಯರಿಂದ ಪ್ರಶಂಸೆ ಗಳಿಸುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ ಅನುಭವಿಸುವಿರಿ. ಶಿವನ ಅನುಗ್ರಹದಿಂದ ಅನುಕೂಲ.

ಮಿಥುನ

ವಾಹನ ಖರೀದಿ ಯೋಗ. ಆರೋಗ್ಯದಲ್ಲಿ ಸುಧಾರಣೆ. ಕೃಷಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದೆ.

ಕಟಕ

ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಲಾಭ. ಭೂ ವ್ಯವಹಾರಕ್ಕೆ ಅಷ್ಟೊಂದು ಒಳ್ಳೆಯ ದಿನವಲ್ಲ. ಅದರಿಂದ ದೂರವಿರುವುದೇ ಒಳ್ಳೆಯದು. ದಿನಾಂತ್ಯದಲ್ಲಿ ಮನೆಯಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.

ಸಿಂಹ

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನ. ವಿವಾಹಾಕಾಂಕ್ಷಿಗಳಿಗೆ ಆಶಾಕಿರಣವೊಂದು ಗೋಚರಿಸಲಿದೆ. ನಿರುದ್ಯೋಗಿಗಳು ಜೀವನದಲ್ಲಿ ತಿರುವು ಪಡೆಯುವ ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸು.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಬಿಡುವಿನ ದಿನದಲ್ಲಿಯೂ ಹೆಚ್ಚಿನ ಕಾರ್ಯಭಾರ ನಡೆಸಬೇಕಾದೀತು. ಮೇಲಧಿಕಾರಿಗಳಿಂದ ಪ್ರಶಂಸೆ. ಮಹಿಳಾ ಕಾರ್ಮಿಕರಿಗೆ ಬಿಡುವಿನ ದಿನವಾಗಲಿದೆ.

ತುಲಾ

ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಆರೋಗ್ಯದಲ್ಲಿ ವ್ಯತ್ಯಯ ಕಂಡಬರಲಿದೆ. ಪ್ರತಿಸ್ಪರ್ಧಿಗಳ ಸವಾಲು ಎದರುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರಕಿ ಸಂಭ್ರಮ. ತೈಲೋದ್ಯಮದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ವಸ್ತ್ರ ವಿನ್ಯಾಸಕಾರರಿಗೆ ಅಧಿಕ ಮನ್ನಣೆ. ನೇಕಾರರಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯದ ಮೇಲೆ ನಿಗಾ ಇರಲಿ.

ಧನು

ಖರ್ಚಿನ ಮೇಲೆ ಹಿಡಿತವಿರಲಿ. ಆದಾಯದಲ್ಲಿ ಕುಂಠಿತ ಸಾಧ್ಯತೆ. ಅನಾವಶ್ಯಕ ವಿಷಯಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸುವಿರಿ. ಪತ್ನಿಯ ಸಕಾಲ ನೆರವಿನಿಂದ ಹಿತಾನುಭವ.

ಮಕರ

ಸರ್ಕಾರಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಕುಲದೇವತಾರಾಧನೆಯಿಂದ ಮಾನಸಿಕ ನೆಮ್ಮದಿ. ಸಾಮಾಜಿಕ ಸ್ಥಾನಮಾನಗಳು ದೊರಕುವ ಸಾಧ್ಯತೆ. ಕಲಾವಿದರಿಗೆ ಅನುಕೂಲಕರ ದಿನ. ಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ಕುಂಭ

ವ್ಯವಹಾರದಲ್ಲಿ ನಿಗಾ ವಹಿಸಲಿದ್ದೀರಿ. ಹಿರಿಯರೊಂದಿಗೆ ಮನಸ್ತಾಪ. ಇಷ್ಟ ಮಿತ್ರರ ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ. ದಿನದಾಂತ್ಯದಲ್ಲಿ ಯಶಸ್ಸು. ದೇವತಾರಾಧನೆಯಿಂದ ಮನಸ್ಸಿಗೆ ಉಲ್ಲಾಸ.

ಮೀನ

ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ. ತೈಲ ವಸ್ತುಗಳ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಗುರು ಆರಾಧನೆಯಿಂದ ಹೆಚ್ಚಿನ ಯಶಸ್ಸು. ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ.

ಮೇ 11, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣ ಪಕ್ಷ.
ವಾರ: ಮಂಗಳವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಭರಣಿ, ಯೋಗ: ಸೌಭಾಗ್ಯ
ಕರಣ: ಚತುಷ್ಪದ
ರಾಹುಕಾಲ:3.29 ರಿಂದ 5.04
ಗುಳಿಕಕಾಲ :12.19 ರಿಂದ 1.54
ಯಮಗಂಡಕಾಲ :9.09 ರಿಂದ 10.44

ಮೇಷ

ಮನೆಯಲ್ಲಿನ ರಂಪಾಟಗಳು ಜಾಸ್ತಿಯಾಗುವ ಸಾಧ್ಯತೆ. ಅನಿರೀಕ್ಷಿತ ಬೆಳವಣಿಗೆಯಿಂದ ಮಾನಸಿಕ ನೆಮ್ಮದಿ. ಸರ್ಕಾರಿ ನೌಕರರಿಗೆ ಪ್ರಶಂಸೆಯ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದ ದಿನ.

ವೃಷಭ

ಯಂತ್ರಾಗಾರಗಳಲ್ಲಿ ಅಗ್ನಿಯಿಂದ ಎಚ್ಚರ ಅಗತ್ಯ. ಅನಿರೀಕ್ಷಿತವಾದ ತಲೆನೋವಿಗೆ ಧೃತಿಗೆಡಬೇಕಾಗಿಲ್ಲ. ವೈದ್ಯರಿಗೆ ಕಾಲುನೋವಿನ ಸಾಧ್ಯತೆ. ಮಹಿಳಾ ಉದ್ಯಮಿಗಳಿಗೆ ಸಂತೃಪ್ತಿ.

ಮಿಥುನ

ಅದೃಷ್ಟದ ದಿನಕ್ಕಾಗಿ ಕಾಯುತ್ತಿರುವ ನಿಮಗೆ ಭಗವಂತನ ದಯೆ ಇದೆ. ನಿರೀಕ್ಷಿತ ಮಟ್ಟಕ್ಕೆ ನಿಮಗೆ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸಿನ ವ್ಯವಹಾರದಲ್ಲಿ ತೃಪ್ತಿದಾಯಕ ಬದುಕು. ಬಂಗಾರ ಖರೀದಿ ಮಾಡಲಿದ್ದೀರಿ.

ಕಟಕ

ದೂರದ ಬಂಧುಗಳ ಆಗಮನದಿಂದ ತೀರ್ಥಯಾತ್ರೆ ಬಗ್ಗೆ ನಿಷ್ಕರ್ಷೆ. ರತ್ನ ವ್ಯಾಪಾರಿಗಳಿಗೆ ಅನುಕೂಲ. ಗುಡಿ ಕೈಗಾರಿಕೆ ನಡೆಸುವವರಿಗೆ ಪ್ರಗತಿ. ಮನಸ್ಸಿಗೆ ಸಂತೋಷದಾಯಕ ದಿನ.

ಸಿಂಹ

ಅಧಿಕಾರಿಗಳ ಸಹಕಾರದಿಂದ ಕಾರ್ಯದಲ್ಲಿ ಪ್ರಗತಿ. ಮನಸ್ಸಿಗೆ ಸಂಬಂಧಪಟ್ಟ ವ್ಯವಹಾರ ನಡೆಸುವುದು ಉಚಿತವಲ್ಲ. ಹಿರಿಯರ ಆಶೀರ್ವಾದ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಪ್ರಗತಿ.

ಕನ್ಯಾ

ಮನಸ್ಸಿಗೆ ಸಂಬಂಧಪಟ್ಟರೂ ದೇಹಾರೋಗ್ಯದ ಬಗ್ಗೆ ಆಲಸ್ಯ ಬೇಡ. ವಾಹನ ವ್ಯಾಪಾರದಲ್ಲಿ ಪ್ರಗತಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ. ವನ್ಯ ಸಂಪತ್ತಿಗೆ ಅಧಿಕವಾದ ಪರಿಶ್ರಮ ಅಗತ್ಯ.

ತುಲಾ

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಹಣಕಾಸಿನ ಬಗ್ಗೆ ಚಿಂತಿಸುವುದು ಬೇಡ. ಸ್ತ್ರೀಯರಿಗೆ ಮನಸ್ಸಿನ ಮೇಲೆ ನಿಯಂತ್ರಣವಿರಲಿ. ಗೊಂದಲಮಯ ಬದುಕಿನಿಂದ ಮುಕ್ತಿ.

ವೃಶ್ಚಿಕ

ಹಣ ಹೊಂದಿಸಲು ಬೇರೆಯವರ ಸಹಾಯವನ್ನು ಯಾಚಿಸಲಿದ್ದೀರಿ. ಔಷಧ ಸೇವನೆಯಲ್ಲಿ ಮುಂಜಾಗೃತೆ ಅಗತ್ಯ. ಮನಸ್ಸಿಗೆ ಸಂಬಂಧಿಸಿದ ವಿಷಯವನ್ನು ಬೇರೆಯವರಲ್ಲಿ ನಿವೇದಿಸಿಕೊಳ್ಳಿ.

ಧನು

ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತಿರುವ ಕಾರ್ಯಗಳು ಶೀಘ್ರದಲ್ಲಿ ನೆರವೇರಲಿವೆ. ಕುಶಲಕರ್ಮಿಗಳಿಗೆ ಅನುಕೂಲ. ಬಂಧುಗಳ ಆರ್ಥಿಕ ಸಹಾಯದಿಂದ ದೃಢತೆ.

ಮಕರ

ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ. ಹಳೆಯ ವೈಷಮ್ಯ ಗರಿಗೆದರುವ ಸಾಧ್ಯತೆ. ವಿದ್ಯಾರ್ಥಿಗಳು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಉತ್ತಮ. ವಿಪರೀತವಾದ ಖರ್ಚು. ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆಯ ಕಾಲ.

ಕುಂಭ

ಮಾನಸಿಕ ಸ್ಥೈರ್ಯ ಸದೃಢವಾಗಿ ಲಾಭದಾಯಕವಾದ ಬದುಕು. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಚರ್ಚೆ, ಸಂಗಾತಿಯಿಂದ ಸಮಾಧಾನದ ಜೊತೆಗೆ ನೆರವು ದೊರೆಯಲಿದೆ.

ಮೀನ

ಮನಸ್ಸಿಗೆ ಅನುಕೂಲವಾದ ಅನೇಕ ವಿಷಯಗಳಲ್ಲಿ ಸಾಫಲ್ಯತೆ ಪಡೆಯಲಿದ್ದೀರಿ. ವ್ಯತಿರಿಕ್ತವಾದ ವ್ಯವಹಾರದಲ್ಲಿ ತೊಡಗುವುದು ಬೇಡ. ಸಹೋದರರಿಂದ ಕಾರ್ಯಕ್ಕೆ ಅನುವು

ಮೇ 10, ಸೋಮವಾರ ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 27 ಸಲುವ ಚೈತ್ರ ಬಹುಳ ಚತುರ್ದಶಿ 39|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಅಶ್ವಿ‌ನಿ 35||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.46 ಗಂಟೆ ಸೂರ್ಯೋದಯ :6.08 ಗಂಟೆ

ಮೇಷ

ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ನಡೆಸಲಿದ್ದೀರಿ. ನೇರ ಹಾಗೂ ದಿಟ್ಟ ನಡವಳಿಕೆ ಅವಶ್ಯ. ಹೊಸ ಹೊಸ ಮಾರ್ಗಗಳ ಮೂಲಕ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ.

ವೃಷಭ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಒತ್ತಡ ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು.

ಮಿಥುನ

ವಿದ್ಯಾರ್ಥಿಗಳಿಗೆ, ತಾಂತ್ರಿಕ ತರಬೇತಿ ಪಡೆಯುತ್ತಿರುವವರಿಗೆ ಅತ್ಯಂತ ಮಹತ್ವದ ಕಾಲ. ಕಚೇರಿ ಕೆಲಸಗಳಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸುವ ಅವಕಾಶ. ವಾಸ್ತವವನ್ನು ಅರಿತು ನಡೆಯುವುದು ಉತ್ತಮ.

ಕಟಕ

ಸೃಜನಶೀಲ ಕಾರ್ಯಗಳಲ್ಲಿ ಮಗ್ನರಾಗಿ ಯಶಸ್ಸು ಗಳಿಸುವಿರಿ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅನುಕೂಲ. ನಿಮ್ಮ ಕ್ಷಮತೆಯಿಂದ ಒತ್ತಡಗಳು ದೂರವಾಗಲಿವೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಸಿಂಹ

ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಫಲಿತಾಂಶಗಳ ಬಗ್ಗೆ ಚಿಂತಿಸದೇ ಪ್ರಯತ್ನಶೀಲರಾಗಿ. ಯಶಸ್ಸು ಖಂಡಿತ.

ಕನ್ಯಾ

ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ನಡೆಸುವಿರಿ. ನಿವೃತ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ಮಕ್ಕಳ ನಡೆಯ ಬಗ್ಗೆ ಗಮನ ಅಗತ್ಯ. ದೇವತಾ ಆರಾಧನೆಯಿಂದ ಯಶಸ್ಸು.

ತುಲಾ

ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ. ಸನ್ನಿಹಿತವಾದ ಬದಲಾವಣೆಗಳಿಗೆ ನಿಮ್ಮನ್ನು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವುದು ಅತ್ಯವಶ್ಯ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ.

ವೃಶ್ಚಿಕ

ಬಯಕೆಗಳು ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಕಷ್ಟವಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ದುಡುಕಿನ ನಡೆ ಕೆಡುಕು. ಗುರುವಿನ ಆರಾಧನೆ ಮಾಡಿ.

ಧನು

ಅವಸರದಿಂದ ಅವಘಡಗಳನ್ನು ತಂದುಕೊಳ್ಳುವ ಸಾಧ್ಯತೆ. ವ್ಯವಧಾನವಿರಲಿ. ವಾರಾಂತ್ಯದ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಚಲಾವಣೆಯಲ್ಲಿ ಜಾಗೃತೆ ಇರಲಿ.

ಮಕರ

ಸೋಲು ಗೆಲುವಿನ ಬಗೆಗೆ ಚಿಂತಿಸಬೇಡಿ. ಮುಂದಿನ ದಿನಗಳು ಉತ್ತಮವಿದೆ. ಅವಿವಾಹಿತರಿಗೆ ಉತ್ತಮ ಅವಕಾಶ. ಪ್ರೇಮಿಗಳ ವಿಚಾರದಲ್ಲಿ ಹಿರಿಯರ ಸಮ್ಮತಿ ದೊರಕುವುದು. ಬಂಧುಬಾಂಧವರ ಸಹಕಾರ.

ಕುಂಭ

ಏಕಕಾಲದಲ್ಲಿ ಅನೇಕ ಕಾರ್ಯಗಳಲ್ಲಿ ಮಗ್ನರಾಗಲು ಯೋಚಿಸಬೇಡಿ. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ಧೃತಿಗೆಡದೆ ಬಂದ ಸವಾಲುಗಳನ್ನು ಎದುರಿಸಿ.

ಮೀನ

ಕಾರ್ಯ ವೈಫಲ್ಯಗಳನ್ನು ಕಂಡರೂ ದೃತಿಗೆಡಬೇಕಾಗಿಲ್ಲ. ಕಾರಣಗಳನ್ನು ಹುಡುಕಿ ಮುನ್ನಡೆದಲ್ಲಿ ಯಶಸ್ಸು. ಆತುರದ ನಿರ್ಧಾರದಿಂದ ಅವಘಡ. ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ.

ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ

ಉಡುಪಿ ಕ್ಷೇತ್ರದ ಸದ್ಭಕ್ತರೆಲ್ಲಾ ಸೇರಿ ಕೊರೋನಾ ಮುಕ್ತ ಭಾರತ, ಸುಖೀ ಸಮೃದ್ಧ ಸುಭಿಕ್ಷ ಶಾಂತಿಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕ ಕ್ಷೇಮಕ್ಕಾಗಿ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಯವರಿಗೆ ಕೊರೋನಾ ಸಂಕಷ್ಟದ ಹೋರಾಟದಲ್ಲಿ ಅದ್ಭುತ ಯಶಸ್ಸು ಸಿಗಲೆಂದು ಪ್ರಾರ್ಥಿಸಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆಯನ್ನು ಸಲ್ಲಿಸಿದರು.

ಪೂಜ್ಯ ಪಲಿಮಾರು ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ನೆರವೇರಿತು. ಶಾಸಕ ಶ್ರೀ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.

ವೇದಮೂರ್ತಿ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಮತ್ತು ದೇವಳದ ಅರ್ಚಕರು, ಸಿಬ್ಬಂದಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಇವರ ಸಂಯೋಜನೆ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.

ಕೊರೋನಾ ಸೋಂಕು ಲಕ್ಷಣ ಇದ್ದವರಿಗೆ ಟೆಸ್ಟ್ ವೇಳೆಯೇ ಔಷಧ ನೀಡುವಂತೆ ಆದೇಶ ಜಾರಿಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕೊರೋನಾ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿ-ಪಿಸಿಆರ್‌ ಸೋಂಕು ಪರೀಕ್ಷೆಗೆ ಒಳಪಟ್ಟ ಸಮಯದಿಂದಲೇ ಕೆಲವು ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೊರೊನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.30ಕ್ಕೂ ಅಧಿಕವಿದೆ. ಪರೀಕ್ಷೆಗೊಳಪಡುವ ಪ್ರತಿ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ಹೀಗಾಗಿ, ಕೊರೊನಾ ಸೋಂಕು ನಿಯಂತ್ರಣ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಕೆಲ ಮಾತ್ರೆ ನೀಡಬೇಕು.

ನಂತರ ಸೋಂಕು ದೃಢಪಟ್ಟರೆ ರಾಜ್ಯ ಸರ್ಕಾರದ ಚಿಕಿತ್ಸಾ ಮಾರ್ಗಸೂಚಿಯನ್ನು ಪಾಲಿಸಿ ಪೂರ್ಣ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ತಮ್ಮ ವೈದ್ಯರ ಸಲಹೆಯೊಂದಿಗೆ ಮಾತ್ರೆ ಚೀಟಿಯನ್ನು ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಮಾತ್ರೆಗಳ ವಿವರ: (ಮೂರು ದಿನ)

ಇವೆರ್ಮೆಕ್ಟಿನ್‌ 12 ಎಂಜಿ – ದಿನಕ್ಕೆ ಒಂದು (ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ)
ವಿಟಿಮಿನ್‌ ಸಿ 500 ಎಂಜಿ – ದಿನಕ್ಕೆ 3 (ಬೆಳಗ್ಗೆ, ಮಧ್ಯಾಹ್ನ, ರಾತ್ರಿ)
ಜಿಂಕ್‌ 50 ಎಂಜಿ – ದಿನಕ್ಕೆ ಒಂದು (ಮಧ್ಯಾಹ್ನ)

ಖಾಸಗಿ ಆಸ್ಪತ್ರೆಗಳು ರೂಪಾಯಿ 100 ಕ್ಕಿಂತ ಅಧಿಕ ಲಸಿಕಾ ಸೇವಾ ಶುಲ್ಕ ಪಡೆವಂತಿಲ್ಲ

ಕೋವಿಡ್‌ ಲಸಿಕೆ ನೀಡುವ ಖಾಸಗಿ ಆರೋಗ್ಯ ಸಂಸ್ಥೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ 100 ರು. ಮಾತ್ರ ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚು ವಿಧಿಸುವ ಸಂಸ್ಥೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆ ಹೊರಡಿಸಿದ್ದಾರೆ

ಮೇ 07, ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತಋತು,
ಚೈತ್ರ-ಮಾಸ, ಕೃಷ್ಣಪಕ್ಷ,
ಏಕಾದಶಿ, ಶುಕ್ರವಾರ,
ಪೂರ್ವ ಭಾದ್ರಪದ ನಕ್ಷತ್ರ (ಹಗಲು 12:26) ನಂತರ “ಉತ್ತರ ಭಾದ್ರಪದ ನಕ್ಷತ್ರ”.
ರಾಹುಕಾಲ 10:45ರಿಂದ 12:19
ಗುಳಿಕಕಾಲ 7:30 ರಿಂದ 9 :10
ಯಮಗಂಡಕಾಲ 3: 29ರಿಂದ 05:04

ಮೇಷ

ವೈವಾಹಿಕ ಜೀವನದಲ್ಲಿ ಭಾಗ್ಯೋದಯವನ್ನು ಕಾಣಲಿದ್ದೀರಿ. ರಾಜಕೀಯದಲ್ಲಿರುವವರಿಗೆ ಬರಸಿಡಿಲಿನ ಸುದ್ದಿಯೊಂದು ಬಂದೆರಗಲಿದೆ. ಬಂಧುಗಳಿಂದ ಸಹಾಯ. ಸ್ಥಿರಾಸ್ತಿ ಖರೀದಿಗೆ ಮನಸ್ಸು ಮಾಡಲಿದ್ದೀರಿ.

ವೃಷಭ

ಅನಿವಾರ್ಯ ಬದಲಾವಣೆಗಳಿಗೆ ಒಳಗಾಗಿ ಇದ್ದುದನ್ನು ಕಳೆದುಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನ ಅಲಕ್ಷಿಸದೆ ಇರುವುದು ಒಳ್ಳೆಯದು. ಹೊಸ ಕಾರ್ಯಯೋಜನೆಯಿಂದ ದೂರವಿರಿ.

ಮಿಥುನ

ನಿಮ್ಮ ಪಾಲಿನ ಶ್ರದ್ಧೆಯು ಅನುಕೂಲಕರವಾಗಿ ಪರಿಣಮಿಸಲಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಕಾರ್ಯಪ್ರವೃತ್ತರಾಗುವಿರಿ. ‌ರಾಜಕೀಯದಲ್ಲಿ ತೊಡಗಿಕೊಂಡ ಯುವತಿಯರಿಗೆ ಯಶಸ್ಸು.

ಕಟಕ

ಸ್ಫೂರ್ತಿ ತುಂಬಿದ ಜೀವನದೊಂದಿಗೆ ಉತ್ತಮ ನೆಲೆ ಕಾಣಲಿದ್ದೀರಿ. ಧಾರಾಳವಾಗಿ ಹಣದ ಹರಿವು ನಿಮ್ಮೆಡೆಗೆ ಹರಿದು ಬರಲಿದೆ. ಉತ್ತಮವಾದ ಕುಟುಂಬ ಬಾಂಧವ್ಯದಲ್ಲಿ ವೃದ್ಧಿಯನ್ನು ಕಾಣುವಿರಿ.

ಸಿಂಹ

ಸಾಂಸಾರಿಕ ಸೌಖ್ಯಕ್ಕಾಗಿ ಹೊಸ ಪ್ರಯತ್ನ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಬಂದೆರಗುವ ಸಾಧ್ಯತೆ. ಹೊಸ ಆದಾಯ ಮೂಲದ ಅನ್ವೇಷಣೆ ಮಾಡಲಿದ್ದೀರಿ. ಬಂಧುಗಳಿಂದ ಸಹಾಯ. ಮನಸ್ಸಿನ ದುಗಡ ನಿವಾರಣೆಯಾಗಲಿದೆ.

ಕನ್ಯಾ

ಕರಕುಶಲ ಕಾರ್ಮಿಕರಿಗೆ ಮನ್ನಣೆ ಸಿಗಲಿದ್ದು, ಸರ್ಕಾರದಿಂದ ಹೆಚ್ಚಿನ ಸಹಾಯ ಸಹಕಾರ ನಿರೀಕ್ಷಿಸಬಹುದು. ಎಲ್ಲ ಕಾರ್ಯಗಳಲ್ಲಿಯೂ ತಲ್ಲೀನತೆಯಿಂದ ಸರಿ ಹೊಂದುವ ಸಾಧ್ಯತೆಗಳು ಕಂಡುಬರುತ್ತಿವೆ.

ತುಲಾ

ಆರ್ಥಿಕ ಅನುಕೂಲತೆಯೊಂದಿಗೆ ಸಾಮಾಜಿಕ ಗೌರವ ದೊರಕಲಿದೆ. ಮಾಡಿದ ಕೆಲಸ–ಕಾರ್ಯಗಳಲ್ಲಿ ಮನ್ನಣೆ ದೊರೆಯುತ್ತದೆ. ಹೊಸ ಕಾರ್ಯ ರೂಪಿಸುವಲ್ಲಿ ಮುಂಚಿತ ಯೋಚನೆ ಸಫಲವಾಗಲಿದ್ದು ಯಶಸ್ಸಿನತ್ತ ಪಯಣ.

ವೃಶ್ಚಿಕ

ಆರ್ಥಿಕ ಕ್ರೋಢಿಕರಣದ ಜೊತೆಗೆ ಮಂಗಳಕಾರ್ಯಗಳು ನಿಶ್ಚಯವಾಗುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಜನೆ ನಿರೂಪಿಸಲಿದ್ದೀರಿ. ದೂರ ದೂರಿನ ಪ್ರಯಾಣ ಬೇಡ. ವಾಹನ ಚಲಾವಣೆಯಲ್ಲಿ ಜಾಗೃತೆ.

ಧನು

ಮಿತ್ರರ ಸಹಕಾರದಿಂದಾಗಿ ರಾಜಕೀಯ ವ್ಯವಹಾರದಲ್ಲಿ ಸುಗಮತೆ. ಆರ್ಥಿಕ ದೃಢೀಕರಣದಿಂದಾಗಿ ಕಾರ್ಯಾನುಕೂಲ. ಮನೆಯಲ್ಲಿ ಹಬ್ಬದ ವಾತಾವರಣ. ಮನೆಯವರ ಅಹವಾಲನ್ನು ಗಮನಿಸುವುದು ಒಳಿತು.

ಮಕರ

ಹೊಸ ಉದ್ಯಮವೊಂದರಿಂದ ಆದಾಯದ ಸಾಧ್ಯತೆ ಇರಲಿದ್ದು ಉತ್ತಮ ಆಶಾಭಾವನೆ ಮುಂದುವರಿಯಲಿದೆ. ವೈದ್ಯರ ನೆರವಿನಿಂದಾಗಿ ಆರೋಗ್ಯದಲ್ಲಿ ಸ್ಥಿರತೆ. ಆರ್ಥಿಕ ಅಭಿವೃದ್ಧಿ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ.

ಕುಂಭ

ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತನೆಯಿಂದ ಉತ್ತಮ ಯಶಸ್ಸು. ವೈದ್ಯರಿಗೆ ಪ್ರಶಂಸೆ. ಬಂಧುಗಳ ಕಿರಿಕಿರಿಯಿಂದ ಬೇಸರವಾದರೂ ದೇವರ ಕೃಪೆ ನಿಮ್ಮ ಪಾಲಿಗೆ ಒದಗಿ ಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಮಾನಸಿಕ ತುಮುಲ.

ಮೀನ

ಆಲಸ್ಯ ಉದಾಸೀನತೆ ತೊಡೆದುಹಾಕಿ ಕಾರ್ಯದಲ್ಲಿ ಮಗ್ನರಾಗಿರಿ. ಅನಗತ್ಯ ಕೋಪದಿಂದ ನಷ್ಟದ ಸಾಧ್ಯತೆ. ದೈಹಿಕವಾಗಿ ಸಣ್ಣಪುಟ್ಟ ನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ಈಶ್ವರನ ಆರಾಧನೆಯಿಂದ ಶ್ರೇಯಸ್ಸು.

Design a site like this with WordPress.com
Get started