ಕಳತ್ತೂರಿನಲ್ಲಿ ಬೂತ್ ನಂಬರ್ 157 ರಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ


ಕಾಪು ಕ್ಷೇತ್ರದ ಕಳತ್ತೂರಿನಲ್ಲಿ ಬೂತ್ ಸಂಖ್ಯೆ 157 ರಲ್ಲಿ‌ಬೂತ್ ಅಧ್ಯಕ್ಷರಾ‌ದ ಪ್ರದೀಪ್ ರಾವ್ ಇವರ ಮನೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು.‌ ಪ್ರಾಸ್ತಾವಿಕ ಮಾತುಗಳನ್ನು ಆಡಿದ ಜಿಲ್ಲಾ ಪ್ರಧಾನ‌‌ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಬೂತ್ ಅಧ್ಯಕ್ಷರಿಗೆ ನಾಮಫಲಕ ಕೊಡುತ್ತಿರುವ ಉದ್ದೇಶದ ಬಗ್ಗೆ ವಿವರಿಸಿದರು. ರಾಜ್ಯ ಬಿಜೆಪಿ‌ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಬೂತ್ ಅಧ್ಯಕ್ಷರುಗಳು ಉತ್ತಮ ಕಾರ್ಯ ನೀರ್ವಹಿಸಿದರೆ ಯಾವುದೇ ಚುನಟವಣೆ ಗೆಲ್ಲುವುದು ಕಷ್ಟವಾಗುವುದಿಲ್ಲ ಎಂದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮಾತನಾಡಿ ಬಿಜೆಪಿ ಹುಟ್ಟು ಬೆಳವಣಿಗೆ ಹಾಗೂ ಬೂತ್ ಅಧ್ಯಕ್ಷರ ಕಾರ್ಯಪಧ್ಧತಿ ಯಾವ ರೀತಿ ಇರಬೇಕೆಂದು ವಿವರಿಸಿದರು. ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಬೂತ್ ಅಧ್ಯಕ್ಷರಿಗೆ ಶುಭಹಾರೈಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೂತ್ ಅಧ್ಯಕ್ಷರುಗಳು ಮುತುವರ್ಜಿ ವಹಿಸಿ ಬಲಿಷ್ಠಗೊಳಿಸಬೇಕೆಂದರು.

ವೇದಿಕೆಯಲ್ಲಿ ರಾಜ್ಯ ಮಹಿಳಾಮೋರ್ಚ ಪ್ರಧಾನ‌ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಶಿರ್ವ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಮಜೂರು, ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖ್ ಆದ ಶಶಿಪ್ರಭಾ ಶೆಟ್ಟಿ, ಶಿರ್ವ ಸೊಸೈಟಿ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿ ಕತ್ಯಾರು ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ ಉಪಸ್ಥಿತರಿದ್ದರು.

ಸ್ಥಳೀಯ ಪಕ್ಷದ ಹಿರಿಯರಾದ ನವೀನ್ ಶೆಟ್ಟಿ, ಹಾಗೂ ಚಂದು ಶೆಟ್ಟಿಗಾರ್ ಇವರನ್ನು ಪಕ್ಷಕ್ಕೆ ನೀಡಿದ ಸೇವೆಗಾಗಿ ಗೌರವಿಸಲಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಧವಾ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲಾಯಿತು. ಸ್ಥಳಿಯ ಪಂಚಾಯತ್ ಉಪಾಧ್ಯಕ್ಷರಾದ ರಾಜ ಶೆಟ್ಟಿ, ಹಿರಿಯರಾದ ಜನಾರ್ದನ ಆಚಾರ್ಯ, ಪಂಚಾಯತ್ ಸದಸ್ಯರುಗಳು,ಬೂತ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೇವೆ ಮತ್ತು‌ ಸಮರ್ಪಣಾ ಕಾರ್ಯಕ್ರಮದಡಿ ಪ್ರತಿಜ್ಞಾ ಬೋಧನೆ ಹಾಗೂ‌ ಪೋಸ್ಟ್ ಕಾರ್ಡ್ ಅಭಿಯಾನ ನಡೆಸಲಾಯಿತು.

Leave a comment

Design a site like this with WordPress.com
Get started