ಉಡುಪಿ ಹನುಮಾನ್ ಸಂಸ್ಥೆಯ ಹರಿಕಾರ ಪಿ. ರಬೀಂದ್ರ ನಾಯಕ್ ಇನ್ನಿಲ್ಲ.. ಜಿಲ್ಲಾ ಬಿಜೆಪಿ ಸಂತಾಪ

ಉಡುಪಿ ಹನುಮಾನ್ ಸಂಸ್ಥೆಯ ಹರಿಕಾರ ಪಿ. ರಬೀಂದ್ರ ನಾಯಕ್ ಇನ್ನಿಲ್ಲ.. ಜಿಲ್ಲಾ ಬಿಜೆಪಿ ಸಂತಾಪ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶನಿವಾರ(ಅ.2) ರಂದು ಇಹಲೋಕ ತ್ಯಜಿಸಿದ್ದಾರೆ.

ಸಾರಿಗೆ ಉದ್ಯಮಿಯಾಗಿ ಮೊದಲು ಗುರುತಿಸಿಕೊಂಡಿದ್ದ ಅವರು, ಕರಾವಳಿ ಭಾಗದಲ್ಲಿ ಗಜಾನನ ಹಾಗೂ ಹುನುಮಾನ್ ಟ್ರಾನ್ಸ್ ಪೋರ್ಟ್ ಸಂಸ್ಥೆಯನ್ನು ಪ್ರಾರಂಭಿಸಿ ಸಾರಿಗೆ ಉದ್ಯಮಕ್ಕೆ ಕಾಲಿಟ್ಟವರು. ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು, ಉಡುಪಿ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದರು. ಉಡುಪಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Leave a comment

Design a site like this with WordPress.com
Get started