
ಪ್ಲವ ಸಂ|ರದ ಮೇಷ ಮಾಸ ದಿನ 27 ಸಲುವ ಚೈತ್ರ ಬಹುಳ ಚತುರ್ದಶಿ 39|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಅಶ್ವಿನಿ 35||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.46 ಗಂಟೆ ಸೂರ್ಯೋದಯ :6.08 ಗಂಟೆ
ಮೇಷ
ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ನಡೆಸಲಿದ್ದೀರಿ. ನೇರ ಹಾಗೂ ದಿಟ್ಟ ನಡವಳಿಕೆ ಅವಶ್ಯ. ಹೊಸ ಹೊಸ ಮಾರ್ಗಗಳ ಮೂಲಕ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ.
ವೃಷಭ
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಒತ್ತಡ ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು.
ಮಿಥುನ
ವಿದ್ಯಾರ್ಥಿಗಳಿಗೆ, ತಾಂತ್ರಿಕ ತರಬೇತಿ ಪಡೆಯುತ್ತಿರುವವರಿಗೆ ಅತ್ಯಂತ ಮಹತ್ವದ ಕಾಲ. ಕಚೇರಿ ಕೆಲಸಗಳಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸುವ ಅವಕಾಶ. ವಾಸ್ತವವನ್ನು ಅರಿತು ನಡೆಯುವುದು ಉತ್ತಮ.
ಕಟಕ
ಸೃಜನಶೀಲ ಕಾರ್ಯಗಳಲ್ಲಿ ಮಗ್ನರಾಗಿ ಯಶಸ್ಸು ಗಳಿಸುವಿರಿ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅನುಕೂಲ. ನಿಮ್ಮ ಕ್ಷಮತೆಯಿಂದ ಒತ್ತಡಗಳು ದೂರವಾಗಲಿವೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.
ಸಿಂಹ
ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಫಲಿತಾಂಶಗಳ ಬಗ್ಗೆ ಚಿಂತಿಸದೇ ಪ್ರಯತ್ನಶೀಲರಾಗಿ. ಯಶಸ್ಸು ಖಂಡಿತ.
ಕನ್ಯಾ
ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ನಡೆಸುವಿರಿ. ನಿವೃತ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ಮಕ್ಕಳ ನಡೆಯ ಬಗ್ಗೆ ಗಮನ ಅಗತ್ಯ. ದೇವತಾ ಆರಾಧನೆಯಿಂದ ಯಶಸ್ಸು.
ತುಲಾ
ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ. ಸನ್ನಿಹಿತವಾದ ಬದಲಾವಣೆಗಳಿಗೆ ನಿಮ್ಮನ್ನು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವುದು ಅತ್ಯವಶ್ಯ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ.
ವೃಶ್ಚಿಕ
ಬಯಕೆಗಳು ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಕಷ್ಟವಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ದುಡುಕಿನ ನಡೆ ಕೆಡುಕು. ಗುರುವಿನ ಆರಾಧನೆ ಮಾಡಿ.
ಧನು
ಅವಸರದಿಂದ ಅವಘಡಗಳನ್ನು ತಂದುಕೊಳ್ಳುವ ಸಾಧ್ಯತೆ. ವ್ಯವಧಾನವಿರಲಿ. ವಾರಾಂತ್ಯದ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಚಲಾವಣೆಯಲ್ಲಿ ಜಾಗೃತೆ ಇರಲಿ.
ಮಕರ
ಸೋಲು ಗೆಲುವಿನ ಬಗೆಗೆ ಚಿಂತಿಸಬೇಡಿ. ಮುಂದಿನ ದಿನಗಳು ಉತ್ತಮವಿದೆ. ಅವಿವಾಹಿತರಿಗೆ ಉತ್ತಮ ಅವಕಾಶ. ಪ್ರೇಮಿಗಳ ವಿಚಾರದಲ್ಲಿ ಹಿರಿಯರ ಸಮ್ಮತಿ ದೊರಕುವುದು. ಬಂಧುಬಾಂಧವರ ಸಹಕಾರ.
ಕುಂಭ
ಏಕಕಾಲದಲ್ಲಿ ಅನೇಕ ಕಾರ್ಯಗಳಲ್ಲಿ ಮಗ್ನರಾಗಲು ಯೋಚಿಸಬೇಡಿ. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ಧೃತಿಗೆಡದೆ ಬಂದ ಸವಾಲುಗಳನ್ನು ಎದುರಿಸಿ.
ಮೀನ
ಕಾರ್ಯ ವೈಫಲ್ಯಗಳನ್ನು ಕಂಡರೂ ದೃತಿಗೆಡಬೇಕಾಗಿಲ್ಲ. ಕಾರಣಗಳನ್ನು ಹುಡುಕಿ ಮುನ್ನಡೆದಲ್ಲಿ ಯಶಸ್ಸು. ಆತುರದ ನಿರ್ಧಾರದಿಂದ ಅವಘಡ. ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ.