ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ತಂದೆ-ತಾಯಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಎಸ್ ಟಿ. ಮೋರ್ಚ ಉಡುಪಿ ನಗರ  ಇದರ ಸೇವಾ ಪಾಕ್ಷಿಕ  ಕಾರ್ಯಕ್ರಮದ ಅಂಗವಾಗಿ ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ಮಾತಾಪಿತ್ರರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು.

ರಾಜಸ್ಥಾನದ ಕೋಟಾದಲ್ಲಿ  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ  ಮಣಿಪಾಲದ ಈಶ್ವರ ನಗರ ನಿವಾಸಿ ಕಾರ್ತಿಕ್ ಕೆ ಪೂಜಾರಿಯವರ ಹೆತ್ತವರಾದ  ಜಯಂತಿ ಮತ್ತು ಕರುಣಾಕರ್ ಪೂಜಾರಿ ದಂಪತಿಗಳು, ಹಿರಿಯಡ್ಕ ನಿವಾಸಿ  ಯೋಧ ಕುಜಂಬೈಲ್ ಹರಿಕೃಷ್ಣರವರ ಹೆತ್ತವರಾದ ಸುಂದರಿ ಮತ್ತು ಉಪೇಂದ್ರ ನಾಯಕ ದಂಪತಿಗಳು, ಉಡುಪಿ ಬೈಲೂರು ಕೊಳಂಬೆಯ ಯೋಧ ಸಹೋದರರಾದ ರೋಷನ್ ಮತ್ತು ರಂಜನ್ ರವರ ಹೆತ್ತವರಾದ ಬೇಬಿ ಮತ್ತು ಕೃಷ್ಣ ಪೂಜಾರಿ ದಂಪತಿಗಳು,  ಹಿರಿಯಡ್ಕ ಒಂತಿಬೆಟ್ಟುವಿನ ಯೋಧ  ಸುರೇಶ್ ಶೆಟ್ಟಿ ಯವರ ಹೆತ್ತವರಾದ ಸುಜಾತ ಮತ್ತು ಭೋಜ ಶೆಟ್ಟಿ ದಂಪತಿಗಳನ್ನು ಅವರ ನಿವಾಸದಲ್ಲಿ  ಗೌರವಿಸಲಾಯಿತು.
ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ್ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಅಶೋಕ್ ನಾಯ್ಕ, ಎಸ್ ಟಿ ಮೋರ್ಚಾದ ಪದಾಧಿಕಾರಿಗಳಾದ ಸುಗುಣ ನಾಯ್ಕ, ಸುಮ ನಾಯ್ಕ,  ರಾಹುಲ್ ನಾಯ್ಕ, ಗಿರೀಶ್ ನಾಯ್ಕ, ಉಡುಪಿ ಸೈನಿಕರ ವೇದಿಕೆ ಮಾಜಿ ಅಧ್ಯಕ್ಷರಾದ ಗಣಪಯ್ಯ ಸೇರಿಗಾರ್  ಮತ್ತಿತರರು ಹಾಜರಿದ್ದರು.
ಮೋರ್ಚಾ ಅಧ್ಯಕ್ಷೆ ಸುಮಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a comment

Design a site like this with WordPress.com
Get started