ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಮಹಿಳಾ ಘಟಕದ ಸಂಚಾಲಕರಾಗಿ ಗೋದಾವರಿ ಮಂಜಪ್ಪ ಸುವರ್ಣ ಆಯ್ಕೆ



ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ 2023-25ನೇ ಸಾಲಿನ ಮಹಿಳಾ ಘಟಕದ ಸಂಚಾಲಕರಾಗಿ ಉಡುಪಿ-ಶಿರಿಬೀಡು ಶ್ರೀ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಗೋದಾವರಿ ಮಂಜಪ್ಪ ಸುವರ್ಣ ಅಂಬಲಪಾಡಿ ಆಯ್ಕೆಯಾಗಿದ್ದಾರೆ.

ಗೌರವ ಸಂಚಾಲಕರಾಗಿ ಶ್ರೀ ನಾರಾಯಣಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ ಉಪಾಧ್ಯಕ್ಷೆ ವಿಜಯಾ ಗೋಪಾಲ್ ಬಂಗೇರ ಪಂದುಬೆಟ್ಟು ಇವರು ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ದೇವಕಿ ಕೆ. ಕೋಟ್ಯಾನ್ ಮತ್ತು ಜಯಂತಿ ಹರೀಶ್ (ಸಹ ಸಂಚಾಲಕರು), ವಾಣಿ ಅರುಣ್ ಕುಮಾರ್ (ಕಾರ್ಯದರ್ಶಿ), ಅಶ್ವಿನಿ ಪೂಜಾರಿ ಮತ್ತು ಕಾವ್ಯ ಅಂಚನ್ (ಜತೆ ಕಾರ್ಯದರ್ಶಿಗಳು), ಸವಿತಾ ಸಂತೋಷ್ (ಕೋಶಾಧಿಕಾರಿ), ಪ್ರಭಾ ದಯಾನಂದ್ (ಸಂಘಟನಾ ಕಾರ್ಯದರ್ಶಿ), ಸಂಚಲ ಶಶಿಕಾಂತ್ (ಜತೆ ಸಂಘಟನಾ ಕಾರ್ಯದರ್ಶಿ), ಮೋಹಿನಿ ಭಾಸ್ಕರ್, ಅನಿತಾ ಲಕ್ಷ್ಮಣ್, ವಿಜಯಲಕ್ಷ್ಮಿ ಎಸ್. ಕುಮಾರ್, ಸುನಿತಾ ಶಂಕರ್ ಪೂಜಾರಿ, ವಿಜಯ ಕೃಷ್ಣ, ಲೋಲಾಕ್ಷಿ, ಲತಾ ಆನಂದ ಪೂಜಾರಿ, ಲಲಿತಾ ಅಚ್ಯುತ ಪೂಜಾರಿ, ರತಿ ಸುಧಾಕರ್, ಅಶ್ವಿನಿ ಸುನಿಲ್ ಕುಮಾರ್ (ಸಮಿತಿ ಸದಸ್ಯರು) ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

Leave a comment

Design a site like this with WordPress.com
Get started