ಕರಾವಳಿಯನ್ನು ಕೊಲೆಗಡುಕರ ಜಿಲ್ಲೆ ಎಂದ ಬಿಕೆ ಹರಿಪ್ರಸಾದ್ ಬೇಷರತ್ ಕ್ಷಮೆಯಾಚಿಸಬೇಕು: ಶ್ರೀಕಾಂತ್ ನಾಯಕ್

News By : ಜನತಾಲೋಕವಾಣಿನ್ಯೂಸ್



ಕಾಪು: ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕರಾವಳಿ ಜಿಲ್ಲೆಗಳನ್ನು ಕೊಲೆಗಡುಕರ ಜಿಲ್ಲೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿ ಕರಾವಳಿ ಜನತೆಗೆ ಅವಮಾನ ಮಾಡಿರುತ್ತಾರೆ. ಕರಾವಳಿ ಜಿಲ್ಲೆಗಳನ್ನು ಎಲ್ಲ ವಿಚಾರಗಳಲ್ಲಿ ದೇಶಕ್ಕೆ ಮಾದರಿ ಎನ್ನುತ್ತಾರೆ. ಸರಕಾರದ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವಾಗ ಬುಧ್ಧಿವಂತರ ಜಿಲ್ಲೆ ಎಂದು ಮೊದಲು ಕರಾವಳಿ ಜಿಲ್ಲೆಯಲ್ಲಿ ಜ್ಯಾರಿಗೆ ತಂದು ಸಾಧಕ ಬಾಧಕ ನೋಡಿ ಆಮೇಲೆ ಇತರ ಕಡೆ ಅನುಷ್ಠಾನಕ್ಕೆ ತರುತ್ತಾರೆ. ಜಾತಿಯ ಅಮಲಿನಲ್ಲಿಲ್ಲದೆ, ಹಣದ ಆಮಿಷಕ್ಕೆ ಒಳಗಾಗದೆ ಸಿಧ್ದಾಂತದ ಮೇಲೆ ಇಲ್ಲಿ ಚುನಾವಣೆ ನಡೆಯುತ್ತದೆ. ಕಳೆದ ಬಾರಿ ಕಾಂಗ್ರೆಸನ್ನು ಕರಾವಳಿಯಿಂದ ಕಿತ್ತು ಬಿಸಾಡಲಾಗಿದ್ದು ಕೇವಲ ಒಂದು ಸೀಟಿಗೆ ತ್ರಪ್ತಿಪಟ್ಟಿದ್ದು ಈ ಬಾರಿ ಅದೂ ಕೈ ತಪ್ಪುವ ಹೆದರಿಕೆಯಿಂದ ಬಾಯಿಗೆ ಬಂದಂತೆ ಮಾತನಾಡಿ ಕರಾವಳಿಗೆ ಅವಮಾನ ಮಾಡಿರುವ ಬಿಕೆ ಹರಿಪ್ರಸಾದ್ ರವರು ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಚುನಾವಣೆಯಲ್ಲಿ ಕೆಲಸ ಮಾಡಲು ನಿಮ್ಮ ಪಕ್ಷದವರೂ ಸಿಗಲಿಕ್ಕಿಲ್ಲ ಎಂದು ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಆಗ್ರಹಿಸಿದ್ದಾರೆ.

Leave a comment

Design a site like this with WordPress.com
Get started