ಡಿ.24 – 25 ಅಂಬಲಪಾಡಿಯಲ್ಲಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರದ ದೈವಗಳ ನೇಮೋತ್ಸವ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಅಂಬಲಪಾಡಿ ಪಠೇಲರ ಮನೆ ಶ್ರೀಮತಿ ಮತ್ತು ಶ್ರೀ ಭರತ್ ಶೆಟ್ಟಿಯವರ ಹರಕೆ ಸೇವೆಯಾಗಿ ಡಿ.24 ಮತ್ತು 25ರಂದು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ಪರಿಸರದಲ್ಲಿ ನಡೆಯಲಿದೆ.

ಡಿ.24 ಶನಿವಾರ ಬೆಳಿಗ್ಗೆ 7.30ಕ್ಕೆ ಮಹಾಚಪ್ಪರದ ಗಜಕಂಬ ಪ್ರತಿಷ್ಠೆ, ಮಧ್ಯಾಹ್ನ 12.00ಕ್ಕೆ ಮಹಾಚಪ್ಪರದ ಆರೋಹಣ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ, ಸಂಜೆ 5.00ಕ್ಕೆ ಭಂಡಾರ ಮೆರವಣಿಗೆ ಹಾಗೂ ರಾತ್ರಿ 9.00ಕ್ಕೆ ಶ್ರೀ ಬಬ್ಬುಸ್ವಾಮಿ ನೇಮ ಮತ್ತು ರಾತ್ರಿ 12.00ಕ್ಕೆ ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.

ಡಿ.25 ರವಿವಾರ ಬೆಳಿಗ್ಗೆ 9.00ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮ, ಮಧ್ಯಾಹ್ನ 12.00ರಿಂದ ಶ್ರೀ ಮಹಾ ಗುಳಿಗಧ್ವಯ ದೈವಗಳ ನೇಮ, ಸಂಜೆ 4.00ರಿಂದ ಶ್ರೀ ಕೊರಗಜ್ಜ ದೈವದ ನೇಮ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ನೇಮೋತ್ಸವದ ಸೇವಾದಾರ ಅಂಬಲಪಾಡಿ ಪಠೇಲರ ಮನೆ ಭರತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started