ಸಿ.ಸಿ.ಎ.ಆರ್.ಐ. ಗೋವಾ ಐಎಂಸಿ ಮೆಂಬರ್ ಶಿವಕುಮಾರ್ ಅಂಬಲಪಾಡಿ ಇವರಿಗೆ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಲಿ. ಗೌರವ ಸನ್ಮಾನ

News by: ಜನತಾಲೋಕವಾಣಿನ್ಯೂಸ್



ಉಡುಪಿ: ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಲಿ., ಉಡುಪಿ ಇದರ ನಿರ್ದೇಶಕ ಮಂಡಳಿಯ ಸ್ಥಾಪಕ ಸದಸ್ಯ ಶಿವಕುಮಾರ್ ಅಂಬಲಪಾಡಿ ಇವರನ್ನು ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೋವಾ ಇದರ ಆಡಳಿತ ಮಂಡಳಿ ಸದಸ್ಯರಾಗಿ‌ ನಾಮ ನಿರ್ದೇಶನಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲ್ ಸೆಂಟರ್ ನಲ್ಲಿ ನಡೆದ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಲಿ. ಇದರ 12ನೇ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿಯ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಣಿಪಾಲ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಲಿ. ಇದರ ಉಪಾಧ್ಯಕ್ಷ ಶಶೀಂದ್ರ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಕೆ.ದಿನಕರ ಶೆಟ್ಟಿ, ಎಮ್.ಸುಧಾಕರ ಶೆಟ್ಟಿ, ಜಗದೀಶ್ ಕುಡ್ವ, ಅಜಿತ್ ಕುಮಾರ್ ಶೆಟ್ಟಿ, ಕೆ.ರಮೇಶ್ ಶೇರಿಗಾರ್, ಬಿ.ರಾಜಗೋಪಾಲ್ ಆಚಾರ್ಯ, ಸುಶೀಲ ಚಂದ್ರಕುಮಾರ್, ಶಕುಂತಳಾ ಶೆಟ್ಟಿ, ಸಹಕಾರಿಯ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಾ, ಸಿಬ್ಬಂದಿಗಳಾದ ಸರೋಜಿನಿ, ಅಕ್ಷತಾ ಶೆಟ್ಟಿ, ಮೋನಿಷಾ ಹಾಗೂ ಸಹಕಾರಿಯ ಪಾಲು ಬಂಡವಾಳದಾರರು ಮತ್ತು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started