ಇಂದಿನ ಔಷಧೀಯ ವೃಕ್ಷ ಪರಿಚಯ: ಮತ್ತಿ ಮರ(ಅರ್ಜುನ ವೃಕ್ಷ)

ಅರ್ಜುನ ಕಕುಭ ನದೀ ಸರ್ಜ ಶರದ್ರುಮ ಮದ್ದಿ ಮತ್ತಿ ಕರಿಮತ್ತಿ ಬಿಳಿಮತ್ತಿ ತೊರೆಮತ್ತಿ ಅರ್ಜುನ್ ಯರ್ರಮಡ್ಡಿ ತೆಲ್ಲಮಡ್ಡಿ ಮರುದ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ದಟ್ಟ ಅರಣ್ಯಗಳಲ್ಲಿ,ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ರಸ್ತೆ ಪಕ್ಕದಲ್ಲಿ ಸಾಲು ಮರಗಳಾಗಿ,ಹೊಲದ ಬದಿಗಳ ಮೇಲೆ ಸಹಾ ಬೆಳೆಸುತ್ತಾರೆ. 60 ರಿಂದ 100 ಅಡಿಯವರಿಗೂ ಬೃಹದ್ಧಕಾರವಾಗಿ ಬೆಳೆಯುತ್ತವೆ.ಇದರ ತೊಗಟೆ ತುಂಬಾ ದಪ್ಪವಾಗಿರುತ್ತೆ.ಸಣ್ಣಸಣ್ಣ ಪುಷ್ಪ ಮಂಜರಿ ಜೋಡಿಸಲ್ಪಟ್ಟಿರುತ್ತವೆ. ಮತ್ತಿಯ ಅಂಶದಿಂದ ಕೂಡಿದ ಯಜ್ಞದ ಧೂಮವು ಸುತ್ತಲ ವಾತಾವರಣದಲ್ಲಿಯ ಮಲಿನತೆಯನ್ನು ದೂರ ಮಾಡಬಲ್ಲದು….! ಮುಗಿಲಿಗೇರುವ ಈ ಧೂಮವು ಮೋಡಗಳುContinue reading “ಇಂದಿನ ಔಷಧೀಯ ವೃಕ್ಷ ಪರಿಚಯ: ಮತ್ತಿ ಮರ(ಅರ್ಜುನ ವೃಕ್ಷ)”

ಜುಲೈ 18 ,2020; ಶನಿವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ತ್ರಯೋದಶಿ ತಿಥಿ,ಶನಿವಾರ, ಮೃಗಶಿರ ನಕ್ಷತ್ರ ರಾಹುಕಾಲ: ಬೆಳಗ್ಗೆ 9:17 ರಿಂದ 10:53ಗುಳಿಕಕಾಲ: ಬೆಳಗ್ಗೆ 6:06 ರಿಂದ 7:41ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41 ಮೇಷ ರಾಜಕೀಯಕ್ಕೆ ಸೇರುವಂತೆ ಒತ್ತಡ. ವೈಯಕ್ತಿಕ ಬದುಕಿನಲ್ಲಿ ಸ್ವಲ್ಪಮಟ್ಟಿನ ಏರುಪೇರು ಕಂಡಬಂದರೂ ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹದ ನುಡಿಗಳಿಂದಾಗಿ ಉತ್ಸಾಹ ಮೂಡಲಿದೆ. ವೃಷಭ ಸ್ವಯಂ ಉದ್ಯೋಗದಲ್ಲಿ ಹೊಸತನ ಮೂಡಿ ಬರಲಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಹೊಸ ವಸ್ತುಗಳ ಖರೀದಿಗೆ ಸೂಕ್ತ ಕಾಲ. ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸಂಸಾರದಲ್ಲಿContinue reading “ಜುಲೈ 18 ,2020; ಶನಿವಾರ : ಇಂದಿನ ರಾಶಿಭವಿಷ್ಯ”

ಇಂದಿನ ಔಷಧೀಯ ಸಸ್ಯ ಪರಿಚಯ: ಬೂದುಗುಂಬಳ

ಕುಷ್ಮಾಂಡ ಕರಕಾರಕ, ಪುಷ್ಪಫಲ, ಬಿಳಿಕುಂಬಳ, ಬೂದುಗುಂಬಳ, ಬೂದುಕುಂಬಳ, ವೆಳ್ ಪುಸನಿಕಾಯಿ, ಕಲ್ಯಾಣಿ ಪೂಸನಿ, ಬೂದಡಿ ಗುಮ್ಮಡಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ ಬೂದುಕುಂಬಳಕಾಯಿಯನ್ನು ಅನೇಕ ದೇಶಗಳಲ್ಲಿ ಬೆಳೆಯುತ್ತಾರೆ.ಅದರಲ್ಲೂ ನಮ್ಮ ದೇಶದಲ್ಲಿ ವಿಶೇಷವಾಗಿ ಹೊಲ ಗದ್ದೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಇದರ ಮತ್ತೊಂದು ವಿಶೇಷವೆಂದರೆ ಬೀಜ ಬಿದ್ದಕಡೆ ಮೊಳಕೆಯೊಡೆದು ಗಿಡವಾಗಿ ಕಾಯಿ ಬಿಡುತ್ತೆ.ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೂದುಗುಂಬಳಕ್ಕೆ ಬಹಳ ಪೂಜನೀಯಸ್ಥಾನ ನೀಡಲಾಗಿದ್ದು, ಹೋಮ, ನೂತನ ಗೃಹಪ್ರವೇಶ, ಶಂಕುಸ್ಥಾಪನೆ, ಯಂತ್ರೋಪಕರಣ ಕಾರ್ಯಾರಂಭದಲ್ಲಿ ಇದು ಇರಲೇಬೇಕು.ಇದನ್ನು ಆಹಾರದಲ್ಲಿ ತರಕಾರಿಯಾಗಿ ಬಳಸುವುದಲ್ಲದೇ, ಇದರಲ್ಲಿ ಅತ್ಯದ್ಭುತವಾದ ಔಷಧೀಯContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಬೂದುಗುಂಬಳ”

ಜುಲೈ 17, 2020; ಶುಕ್ರವಾರ: ಇಂದಿನ ನಿಮ್ಮ ರಾಶಿ ಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ದ್ವಾದಶಿ ತಿಥಿ,ಶುಕ್ರವಾರ, ರೋಹಿಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 10:53 ರಿಂದ 12:29ಗುಳಿಕಕಾಲ: ಬೆಳಗ್ಗೆ 7:41 ರಿಂದ 9:17ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17 ಮೇಷ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಹಣಕಾಸಿನ ಅನುಕೂಲತೆಯಿಂದಾಗಿ ಉತ್ತಮ ಫಲ ಒದಗಿ ಬರಲಿದೆ. ಸಮಾಜದೊಂದಿಗೆ ಬಾಂಧವ್ಯ ವೃದ್ಧಿ. ಆತ್ಮವಿಶ್ವಾಸದಿಂದ ವ್ಯವಹರಿಸಿ ಜಯ ಸಾಧನೆ ನಿಮ್ಮದಾಗಲಿದೆ. ವೃಷಭ ಸುಸಂಸ್ಕೃತರ ಸಹವಾಸದಿಂದಾಗಿ ಮಾನಸಿಕ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಗೆ ಅನಿರೀಕ್ಷಿತರ ಆಗಮನ ಸಾಧ್ಯತೆ. ವಿವೇಚನೆಯContinue reading “ಜುಲೈ 17, 2020; ಶುಕ್ರವಾರ: ಇಂದಿನ ನಿಮ್ಮ ರಾಶಿ ಭವಿಷ್ಯ”

ಇಂದಿನ ಔಷಧೀಯ ವೃಕ್ಷದ ಪರಿಚಯ: ಬೇಲದ ಹಣ್ಣಿನ ಮರ

ಬೆಳವಳ,ದಧಿಫಲ,ಬಿಳಿನ್,ವಿಳಾಫಲಂ,ವಿಳಾಮರಂ, ಕಪೌಷ್ಟಿಕ ಪಿತ್ಥಮು, ಬೇಲದ ಮರ,ವುಡ್ ಆಪೆಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಈ ವೃಕ್ಷವು ಅರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆದರೆ, ರೈತರು ಹೊಲ,ತೋಟ,ಗದ್ದೆಗಳ ಬದಿಗಳ ಮೇಲೆ ಬೆಳೆಸುತ್ತಾರೆ.ಹಳ್ಳಿಗಳಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಸಿರುತ್ತಾರೆ.ಇದನ್ನು ಅನೇಕ ಕಡೆ ಹಣ್ಣಿಗಾಗಿ ಸಹಾ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 50 ಅಡಿವರಿಗೂ ಬೆಳೆಯುತ್ತೆ.ಬೇಲದ ಹಣ್ಣು ಗಣಪತಿಗೆ ತುಂಬಾ ಪ್ರಿಯವಾದ ಹಣ್ಣು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.ಆನೆಗಳಂತೂ ತುಂಬಾ ಇಷ್ಟ ಪಟ್ಟು ಸೇವಿಸುತ್ತವೆ.ಈ ಹಣ್ಣಿನಲ್ಲಿ ಔಷಧಿಗಳ ಭಂಡಾರವೇ ಇದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.ಬೇಲದ ಹಣ್ಣಿನಲ್ಲಿContinue reading “ಇಂದಿನ ಔಷಧೀಯ ವೃಕ್ಷದ ಪರಿಚಯ: ಬೇಲದ ಹಣ್ಣಿನ ಮರ”

ಉಡುಪಿ ಜಿಲ್ಲಾಸ್ಪತ್ರೆ ಸೀಲ್ ಡೌನ್: ವೈದ್ಯರು ,ನರ್ಸ್ ಸೇರಿ 14 ಮಂದಿಗೆ ವೈರಲ್ ಕೊರೋನಾ ಸೋಂಕು

ಉಡುಪಿ: ಅಜ್ಜರಕಾಡು ಸರಕಾರಿ ಆಸ್ಪತ್ರೆಗೂ ಕೊರೊನಾ ಬಾಧೆ ಪ್ರಾರಂಭವಾಗಿದ್ದು, ವೈದ್ಯರು, ರೋಗಿಗಳು ಸೇರಿದಂತೆ ಒಟ್ಟು 14 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಗ್ಯಾಂಗ್ರಿನ್‌‌ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ಮಾದರಿ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿದ್ದು, ಈತನ ವಾರ್ಡ್‌‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್‌‌‌ ಸೇರಿದಂತೆ ವಾರ್ಡ್‌‌ನಲ್ಲಿ ಸ್ವಚ್ಛತಾ ಕೆಲಸContinue reading “ಉಡುಪಿ ಜಿಲ್ಲಾಸ್ಪತ್ರೆ ಸೀಲ್ ಡೌನ್: ವೈದ್ಯರು ,ನರ್ಸ್ ಸೇರಿ 14 ಮಂದಿಗೆ ವೈರಲ್ ಕೊರೋನಾ ಸೋಂಕು”

ಜುಲೈ 16, 2020; ಗುರುವಾರ: ಇಂದಿನ ರಾಶಿಫಲ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಡ ಮಾಸ,ಕೃಷ್ಣ ಪಕ್ಷ, ಏಕಾದಶಿ ತಿಥಿ,ಗುರುವಾರ, ಕೃತ್ತಿಕಾ ನಕ್ಷತ್ರ ರಾಹುಕಾಲ: ಮಧ್ಯಾಹ್ನ 2:05 ರಿಂದ 3:41ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಮಯ 10:31 ಮೇಷ ನಿಗದಿತ ಸಮಯದಲ್ಲಿ ಕೆಲಸ–ಕಾರ್ಯಗಳು ನೆರವೇರಿ ನೆಮ್ಮದಿ. ತ್ಯಾಗ ಮನೋಭಾವದಿಂದಾಗಿ ಅನೇಕರಿಗೆ ಸಾಂತ್ವನ, ನೆಮ್ಮದಿ ನೀಡುವಿರಿ. ಸಾರ್ವಜನಿಕ ಪುರಸ್ಕಾರಕ್ಕೆ ಪಾತ್ರರಾಗುವ ಸಾಧ್ಯತೆ. ವೃಷಭ ಒದಗಿ ಬಂದ ಭಯದಿಂದ ಮುಕ್ತಿ ಹೊಂದಿ ಮಾನಸಿಕ ನಿರಾಳತೆ. ವೈಯಕ್ತಿಕ ಸಂಬಂಧಗಳಲ್ಲಿContinue reading “ಜುಲೈ 16, 2020; ಗುರುವಾರ: ಇಂದಿನ ರಾಶಿಫಲ”

ಇಂದಿನ ಔಷಧೀಯ ಸಸ್ಯ ಪರಿಚಯ: ಸೊಗದೇಬೇರು

ಅನಂತಮೂಲ್(ಸುಗಂಧಿನಿ) ಅನಂತಮೂಲ ಸುಗಂಧಿಬೇರು(ಬಳ್ಳಿ) ಸೊಗದೇ ಬೇರು ನಾಮದಬೇರು ಸುಗಂಧಿಪಾಲ್ ನರುನೀಡಿ ನರುನಿಂಡಿ ಕೃಷ್ಣವಳ್ಳಿ ನನ್ನಾರಿ ನರ್ಕಲಮೂಲಂ ನೆರುನೆಟ್ಟಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅನಂತಮೂಲ ಎಂಬ ಹೆಸರಿನ ಬೇರು ಹೆಸರಿಗೆ ತಕ್ಕಂತೆ ಅಗಣಿತ ಔಷಧೀಯ ಗುಣಗಳನ್ನು ತನ್ನ ಒಡಲೆಲ್ಲ ತುಂಬಿಕೊಂಡಿದೆ.ಇದರ ಔಷಧೀಯ ಗುಣಗಳಿಂದಲೇ ಇದನ್ನು ತಮಿಳ್ ನಲ್ಲಿ”ಮೂಲಿಕೈ ಅರಸನ್” ಎಂದು ಕರೆಯುತ್ತಾರೆ. ಈ ಬೇರು ಔಷಧೀಯ ಗುಣಗಳಲ್ಲದೆ, ತುಂಬಾ ಸುವಾಸನೆಯಿಂದ ಕೂಡಿದ್ದು ಸುಗಂಧಿನಿ ಎಂತಲೂ ಕರೆಯುತ್ತಾರೆ.ಇದರಲ್ಲಿ ಎರಡು ಪ್ರಭೇದಗಳಿವೆ. ಸೊಗದೇ ಬೇರಿನ ಕಷಾಯ(ಷರಬತ್ತು) ಅನೇಕ ವ್ಯಾಧಿಗಳನ್ನು ಗುಣಪಡಿಸಲು ತುಂಬಾContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಸೊಗದೇಬೇರು”

ಜುಲೈ 15,2020; ಬುಧವಾರ: ಇಂದಿನ ರಾಶಿಫಲ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ದಶಮಿ ತಿಥಿ,ಬುಧವಾರ, ಭರಣಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:28 ರಿಂದ 2:04ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16 ಮೇಷ ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿ ಖರೀದಿ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸ ಕುರಿತು ಚಿಂತನೆ ನಡೆಸಲಿದ್ದೀರಿ. ವಿದೇಶಿ ವ್ಯಾಪಾರದ ಬಗ್ಗೆ ಮರುಚಿಂತನೆ ನಡೆಸುವುದು ಉತ್ತಮ. ವೃಷಭ ಯೋಜನೆಯೊಂದರ ಪೂರ್ಣತೆಗಾಗಿ ನಿಮ್ಮ ಸಂಪೂರ್ಣ ಶಕ್ತಿಯುಕ್ತಿಗಳನ್ನು ವ್ಯಯಿಸಲಿದ್ದೀರಿ. ಯೋಜನೆಯಲ್ಲಿನ ಸುಧಾರಣೆಗೆ ಅನ್ಯರContinue reading “ಜುಲೈ 15,2020; ಬುಧವಾರ: ಇಂದಿನ ರಾಶಿಫಲ”

ಇಂದಿನ ಔಷಧೀಯ ಸಸ್ಯ ಪರಿಚಯ: ಕಾಡುಬದನೆ

ದುಃಸ್ಫರ್ಶ (ಕಂಟಕಾರಿ) ಬಹುಕಂಟಿ,ಹಿರಣ್ಯಪುಷ್ಠಿ, ಲಘು ಪಂಚಮೂಲ,ನಿಧಿಗಧಿಕಾ, ಕ್ಷುದ್ರಕಂಟಿ,ಕಾಟೀರಿಂಗಣಿ, ಮುಳ್ಳುಸುಂಡೆ, ಕಾಡು ಬದನೆ,ಮುಲ್ಲು ವಂಕಾಯಿ, ಕಾಟು ಕತ್ತರಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ. ಹೊಲಗಳ ಬದಿಗಳ ಮೇಲೆ, ಪಾಳು ಭೂಮಿ, ರಸ್ತೆಗಳ ಪಕ್ಕ, ಬಯಲು ಪ್ರದೇಶಗಳಲ್ಲಿ, ಮುಳ್ಳುಕಂಟಿ ಕಾಡುಗಳಲ್ಲಿ, ಬೇಲಿಸಾಲುಗಳಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎತ್ತರ, ಪೊದೆಯಂತೆ ಬೆಳೆಯುವ ಕಂಟಕಾರಿ, ಗಿಡಪೂರ್ತಿ ಮುಳ್ಳುಗಳಿಂದ ಕೂಡಿದ್ದು, ಬದನೆ ಹೂಗಳನ್ನು ಹೋಲುವ ಐದು ದಳಗಳ ತಿಳಿ ನೇರಳೆ ಬಣ್ಣದ ಹೂವುಗಳು, ಹಳದಿ, ಕೇಸರಿ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳಿಂದContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಕಾಡುಬದನೆ”

Design a site like this with WordPress.com
Get started