ಜನರು ಎನ್ -95 ಮಾಸ್ಕ್ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ. ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರುContinue reading “‘ಎನ್ -95 ಮಾಸ್ಕ್ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ”
Category Archives: Uncategorized
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ
ಉಡುಪಿ , ಜು.21: ಕೃಷ್ಣ ನಗರಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಇಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೂ ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ.Continue reading “ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ”
ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಪಾಡ್ಯ ತಿಥಿ,ಮಂಗಳವಾರ, ಪುಷ್ಯ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:41 ರಿಂದ 5:17ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:05ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:54 ಮೇಷ ಉದ್ಯೋಗ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ವಸ್ತುಗಳ ಖರೀದಿಯನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಕೆಲಸದ ನಿಮಿತ್ತ ಅಲೆದಾಟ ಮಾಡಬೇಕಾದೀತು. ವೃಷಭ ಪ್ರಯಾಣದಲ್ಲಿ ಸಂಕಟ ತಲೆದೋರಬಹುದು. ಭೂ ವ್ಯವಹಾರದಿಂದ ಧನ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ.Continue reading “ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ”
ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು …
… ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಹೊರಟಿದೆ ಶ್ರೀಕೃಷ್ಣ ನಗರಿ ರಜತಪೀಠಪುರದ ಪವಿತ್ರ ಮೃತ್ತಿಕೆ! ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು ಸೇರಿಸಲು ವಿಶ್ವಹಿಂದುಪರಿಷತ್ ನಿರ್ಧರಿಸಿದೆ .ಅದರಂತೆ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಕೃಷ್ಣನContinue reading “ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು …”
ಇಂದಿನ ಔಷಧೀಯ ಸಸ್ಯ ಪರಿಚಯ: ಬೋರೆ ,ಬುಗರಿ ಹಣ್ಣಿನ ಮರ
ಬದರೀ ಕೊಲ,ಬೇರ್, ಇಲ್ಲಂದೈ,ಗಂಗರೇಣುಬಾದರಂ,ಬೋರೆ,ಎಲಚಿ,,ಇಲಂಜಿ,ಕುರ್ಕುoದ,ಪರಿಕಕಾಯಿ,ರೇಗಿ ಪೊಂಡಲು,ಕುವರಿ,ಅಜಪ್ರಿಯ,ಗುಡಫಲ,ಸೌಬೀರ,ಬಾಲಿಷ್ಠ ಎಂಬ ಹೆಸರುಗಳಿಂದ ಕರೆಯುತ್ತಾರೆಬೋರೆ ವೃಕ್ಷಗಳು ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ನೈಸರ್ಗಿಕವಾಗಿ ಬೆಳೆಯುತ್ತವೆ.ಇದರ ಹಣ್ಣಿಗಾಗಿ ಅನೇಕ ಕಡೆ ತೋಟ,ಹೊಲಗಳಲ್ಲಿಯೂ ಸಹ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಈ ವೃಕ್ಷ ಸುಮಾರು 25 ರಿಂದ 45 ಅಡಿಗಳ ಎತ್ತರ ಬೆಳೆಯುತ್ತದೆ.ಇದು ಬಹು ಉಪಯೋಗಿ ಹಾಗೂ ಗಟ್ಟಿಯಾದ ವೃಕ್ಷವಾಗಿದ್ದು,ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾಗಿರುವ ನಾನಾ ವಿಧವಾದ ಉಪಕರಣಗಳನ್ನು ಇದರಲ್ಲಿ ತಯಾರಿಸಿಕೊಳ್ಳುತ್ತಾರೆ.ಬೋರೆ ಗಿಡದಲ್ಲಿ ಅನೇಕ ಪ್ರಭೇದಗಳಿದ್ದು,ಕೃಷಿ ಇಲಾಖೆಯವರು,ಇದರಲ್ಲಿ ಹೆಚ್ಚು ಸ್ವಾದಿಷ್ಟ ಹಾಗೂ ದೊಡ್ಡContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಬೋರೆ ,ಬುಗರಿ ಹಣ್ಣಿನ ಮರ”
ಜುಲೈ 20, 2020; ಸೋಮವಾರ : ಇಂದಿನ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,ಸೋಮವಾರ, ಪುನರ್ವಸು ನಕ್ಷತ್ರ ರಾಹುಕಾಲ: ಬೆಳಗ್ಗೆ 7:42 ರಿಂದ 9:18ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:30 ದಿನ ವಿಶೇಷ: ಆಷಾಡ ಅಮವಾಸ್ಯೆ/ ಭೀಮನ ಅಮಾವಾಸ್ಯೆ ಮೇಷ ವ್ಯವಹಾರದಲ್ಲಿ ಉತ್ತಮ ಧನಪ್ರಾಪ್ತಿ. ಕೌಟುಂಬಿಕ ನೆಮ್ಮದಿ. ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರದ ಪ್ರಯಾಣ ಅಷ್ಟೊಂದು ಶ್ರೇಯಸಲ್ಲ. ದೈನಂದಿನ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ವೃಷಭ ವೈಯಕ್ತಿಕ ಜೀವನದಲ್ಲಿ ಸಾಧನೆಯೊಂದನ್ನು ಮಾಡಿದ ತೃಪ್ತಿContinue reading “ಜುಲೈ 20, 2020; ಸೋಮವಾರ : ಇಂದಿನ ರಾಶಿಭವಿಷ್ಯ”
ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ
ಮಂಜಿಷ್ಠಾ ಮಂಜಿಸ್ಟ್,ಇಷ್ಟ ಮಧುಕ,ಮಂಜಿಷ್ಠಾ ಬಳ್ಳಿ,ಶಿರಗತ್ತಿ,ರಕ್ತಾoಗಿ, ರಕ್ತಯಷ್ಟಿ,ವಸ್ತ್ರರಂಜನಿ,ವಸ್ತ್ರ ಭೂಷಣ,ಜ್ವರಹಂತ್ರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಮಾತ್ರ ಕಾಣುವ,ಬಳ್ಳಿಯಂತೆ ಹಬ್ಬುವ ಅಪರೂಪದ ಔಷಧೀಯ ಸಸ್ಯವಿದು.ಇದರ ಬೇರನ್ನು ಮಾತ್ರ ಔಷಧಿಗಾಗಿ ಹೆಚ್ಚಿಗೆ ಉಪಯೋಗಿಸುತ್ತಾರೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ, ಅಲ್ಲಲ್ಲಿ ಅಪರೂಪವಾಗಿ ಕಾಣಿಸುತ್ತೆ. ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ.ಇದರಿಂದ ರಕ್ಷಿಸಿಕೊಳ್ಳಲು, 1.ಚಮಚ ಮಂಜಿಷ್ಠಾ ಬೇರಿನ ಚೂರ್ಣ 1 ಚಮಚ ಜೇನುತುಪ್ಪ ಕಲಸಿ ಪೇಸ್ಟ್ ಮಾಡಿಕೊಂಡು ಮಚ್ಚೆ,ಮೊಡವೆ,ಕಲೆಗಳ ಮೇಲೆ ಲೇಪನContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ”
“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ
“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ. ವಿ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಎಂಬ ಪರಿಕಲ್ಪನೆ ಯಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಹಾಗೂ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಆಡಿಯೋ ನಾಟಕ “ದೀವಿಗೆ ಬಾಳದಾರಿಗೆ” ವಿಕ್ಷೀಸಿ
ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!
ರಾಶಿ, ಜನ್ಮ ದಿನಾಂಕ ಮಾತ್ರವಲ್ಲ ನಿಮ್ಮ ರಕ್ತದ ಗುಂಪು ಕೂಡ ನಿಮ್ಮ ಗುಣ, ಸ್ವಭಾವವನ್ನು ತಿಳಿಸುತ್ತೆ! ಎ, ಬಿ, ಎಬಿ, ಒ ರಕ್ತದ ಗುಂಪುಗಳ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತೆ. ನೀವೇ ಓದಿ. ‘ಒ’ :ಪ್ರಪಂಚದ ಜನಸಂಖ್ಯೆಯಲ್ಲಿ ಶೇ.38ರಷ್ಟು ಒ+ ಹಾಗೂ ಶೇ.6 ರಷ್ಟು ಒ- ರಕ್ತದ ಗುಂಪಿನವರಿದ್ದಾರೆ.ಗುಣ ಲಕ್ಷಣಗಳು : ವಿಶ್ವಾಸರ್ಹರು, ಬಲವಾದ ಆತ್ಮಸ್ಥೈರ್ಯ ಉಳ್ಳವರು, ಹೆಮ್ಮೆ ಪಡುವಂತಹ ವ್ಯಕ್ತಿತ್ವದವರು, ಎಲ್ಲರ ಜೊತೆ ಬೆರೆಯುವವರು, ಶಕ್ತಿಶಾಲಿ, ವಾಸ್ತವದಲ್ಲಿ ಯೋಚಿಸುವವರು, ಸವಾಲುಗಳನ್ನು ಇಷ್ಟಪಡುವವರು, ರಿಸ್ಕ್ ತೆಗೆದುಕೊಳ್ಳುವವರು, ಸ್ವಾವಲಂಭಿಗಳು,Continue reading “ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!”
ಜುಲೈ 19, 2020;ಆದಿತ್ಯವಾರ: ಇಂದಿನ ರಾಶಿ ಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಚತುರ್ದಶಿ ತಿಥಿ,ಭಾನುವಾರ, ಆರಿದ್ರಾ ನಕ್ಷತ್ರ ರಾಹುಕಾಲ: ಸಂಜೆ 5:17 ರಿಂದ 6:52ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 2:05 ಮೇಷ ಅಪೇಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲ ಪ್ರಯತ್ನಗಳಿಗೂ ಫಲ ದೊರಕಲಿದೆ. ಉದ್ಯೋಗದ ಅವಕಾಶಗಳು ತೆರೆಯಲಿವೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ವೃಷಭ ವಿನಾಕಾರಣ ವಾದ ವಿವಾದಗಳನ್ನು ನಡೆಸದಿರುವುದು ಒಳಿತು. ಹಿರಿಯರ ಸಲಹೆಗಳನ್ನು ಉಪೇಕ್ಷಿಸುವುದು ಸರಿಯಲ್ಲ. ವ್ಯವಹಾರದಲ್ಲಿ ಸಾಮಾನ್ಯ ಆದಾಯವನ್ನು ನಿರೀಕ್ಷಿಸಬಹುದು.Continue reading “ಜುಲೈ 19, 2020;ಆದಿತ್ಯವಾರ: ಇಂದಿನ ರಾಶಿ ಭವಿಷ್ಯ”