ಡಿಸೆಂಬರ್27, ಭಾನುವಾರ; 2020 : ಇಂದಿನ ರಾಶಿಭವಿಷ್ಯ

ಮೇಷ ರಾಶಿ. . ಇಂದಿನ ದಿನ ಇಂದು ನಿಮ್ಮ ಕೆಲಸದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ನಿಮ್ಮ ದೈಹಿಕ ಮತ್ತು ಲೌಕಿಕ ದೃಷ್ಟಿಕೋನವು ಇಂದು ಕೂಡ ಬದಲಾಗಬಹುದು. ಅದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ, ಅದು ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ನೀವು ಇಂದು ಉತ್ತಮ ಸಮಾಜವನ್ನು ಸೃಷ್ಟಿಸುವ ಕೆಲಸವನ್ನು ಪಡೆಯುತ್ತೀರಿ. ಇದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ವೃಷಭ ರಾಶಿ. . ಇಂದಿನ ದಿನ ಇಂದು, ಗ್ರಹಗಳ ಶುಭ ಮೊತ್ತವು ನಿಮಗೆ ಗೌರವ ಮತ್ತು ಖ್ಯಾತಿಯನ್ನುContinue reading “ಡಿಸೆಂಬರ್27, ಭಾನುವಾರ; 2020 : ಇಂದಿನ ರಾಶಿಭವಿಷ್ಯ”

ಗ್ರಾ.ಪಂ. ಚುನಾವಣಾ ಸೋಲಿನ ಭಯದಿಂದ ಮಾಜಿ ಸಚಿವ ಸೊರಕೆ ಅಪಪ್ರಚಾರ: ಜಿಲ್ಲಾ ಬಿಜೆಪಿ ಖಂಡನೆ

ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಚುನಾವಣೆಗಳ ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಗ್ರಾಮ ಪಂಚಾಯತ್ ಚುನಾವಣಾ ಸೋಲಿನ ಭಯದಿಂದ ಬಿಜೆಪಿ ವಿರುದ್ಧ ಅಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ. ಚುನಾವಣಾ ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸಿಗರಿಗೆ ಅಪಪ್ರಚಾರವೇ ಜೀವಾಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ಮೇಲೆ ಗೂಬೆ ಕೂರಿಸುವ ನಿಟ್ಟಿನಲ್ಲಿ ನೀಡಿರುವ ಹತಾಶ ಮನೋಭಾವದ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ. ಬಿಜೆಪಿContinue reading “ಗ್ರಾ.ಪಂ. ಚುನಾವಣಾ ಸೋಲಿನ ಭಯದಿಂದ ಮಾಜಿ ಸಚಿವ ಸೊರಕೆ ಅಪಪ್ರಚಾರ: ಜಿಲ್ಲಾ ಬಿಜೆಪಿ ಖಂಡನೆ”

ಡಿಸೆಂಬರ್26, ಶನಿವಾರ; 2020: ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರಮಾಸ,ಶುಕ್ಲಪಕ್ಷ,ಭರಣಿ ನಕ್ಷತ್ರ/ಕೃತಿಕ ನಕ್ಷತ್ರ,ರಾಹುಕಾಲ : 09:32 ರಿಂದ 10:58ಗುಳಿಕಕಾಲ : 06:41 ರಿಂದ 08:06ಯಮಗಂಡಕಾಲ : 01:49 ರಿಂದ 3.15 ಮೇಷ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಒತ್ತಡಗಳನ್ನು ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು. ವೃಷಭ ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ್ಯ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಗಣಪತಿ ಆರಾಧನೆ ಸೂಕ್ತ. ಮಿಥುನ ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದುContinue reading “ಡಿಸೆಂಬರ್26, ಶನಿವಾರ; 2020: ಇಂದಿನ ರಾಶಿಭವಿಷ್ಯ”

ಡಿಸೆಂಬರ್ 25,ಶುಕ್ರವಾರ;2020: ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರ ಮಾಸ,ಶುಕ್ಲಪಕ್ಷ, ಏಕಾದಶಿ,ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ,ರಾಹುಕಾಲ: 10:57 ರಿಂದ 12: 23ಗುಳಿಕಕಾಲ: 08 :06 ರಿಂದ 09:32ಯಮಗಂಡಕಾಲ: 03:14ರಿಂದ 04:39 ಮೇಷ ನಿಮ್ಮನ್ನು ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ಹಿತಶತ್ರುಗಳನ್ನು ನಯವಾಗಿಯೇ ದೂರ ಇರಿಸುವುದು ಉತ್ತಮ. ಹಿರಿಯರ ಸಹಕಾರದಿಂದ ಎಲ್ಲ ಆಪತ್ತುಗಳಿಂದ ಹೊರಬರಲಿದ್ದೀರಿ. ವೃಷಭ ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸುತ್ತಿದ್ದಾರೆ. ಇನ್ನೊಬ್ಬರ ಪ್ರತಿ ನಡೆಯಲ್ಲಿಯೂ ತಪ್ಪನ್ನು ಹುಡುಕಲು ಹೋಗಿ ನಿಮ್ಮ ಮೇಲಿಟ್ಟಿರುವ ವಿಶ್ವಾಸ ಕಳೆದುಕೊಳ್ಳುವContinue reading “ಡಿಸೆಂಬರ್ 25,ಶುಕ್ರವಾರ;2020: ಇಂದಿನ ರಾಶಿಭವಿಷ್ಯ”

ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಬೆಂಗಳೂರು: ಇತ್ತೀಚಿಗೆ ಭಾರಿ ಸುದ್ದಿಯಾದ ರೂಪಾಂತರ ಕೊರೋನಾ 2ನೇ ಅಲೆ ವೈರಸ್ ಇದೀಗ ಬ್ರಿಟನ್ ನಿಂದ ವಿಶ್ವದ ಬೇರೆ ಬೇರೆ ದೇಶಗಳಿಗೂ ಆತಂಕವನ್ನುಂಟು ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಗೆ ರಾಜ್ಯ ಸರ್ಕಾರ ಅಸ್ತು ಎಂದಿತು ಇದೀಗ ರಾಜ್ಯ ಸರ್ಕಾರದ ನೈಟ್ ನೈಟ್ ಕರ್ಫ್ಯೂ ಚಿಂತನೆ ವಿಫಲವಾಗಿದ್ದು, ಹಲವೆಡೆ ಈ ವಿಚಾರವಾಗಿ ಪರವಿರೋಧ ಚರ್ಚೆಗಳು ನಡೆದು ಜನಾಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಿ ಇಂದಿನಿಂದ ನಡೆಯಬೇಕಾಗಿದ್ದ ನೈಟ್ ಕರ್ಫ್ಯೂ ಹಿಂಪಡೆದಿದೆ. ಸಾರ್ವಜನಿಕರುContinue reading “ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ”

ಡಿಸೆಂಬರ್24 ,ಗುರುವಾರ ; 2020 :ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರಮಾಸ,ಶುಕ್ಲಪಕ್ಷ, ದಶಮಿ, ಗುರವಾರ, ”ಅಶ್ವಿನಿ ನಕ್ಷತ್ರ”,ರಾಹುಕಾಲ 01:48 ರಿಂದ 03:14ಗುಳಿಕಕಾಲ 09:31 ರಿಂದ 10:57ಯಮಗಂಡಕಾಲ 6:40 ರಿಂದ 08:05 ಮೇಷ ಆರ್ಥಿಕಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೂ ದುಡುಕುತನದಿಂದ ನಷ್ಟವಾಗಬಹುದು. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಗಣಪತಿ ಆರಾಧನೆಯಿಂದ ಕಾರ್ಯದಲ್ಲಿ ಯಶಸ್ಸು. ವೃಷಭ ವೈದ್ಯವೃತ್ತಿಯವರಿಗೆ ಅಧಿಕ ಶ್ರಮವಾಗಿ ವಿಪರೀತ ಆಯಾಸ. ಸ್ತ್ರೀಯರಿಗೆ ಅನುಕೂಲಕರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿ ದಾಳವನ್ನಾಡಿಸುವ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿವೆ. ಮಿಥುನ ನಿಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿ ನಿಭಾಯಿಸಿಕೊಳ್ಳುವಲ್ಲಿContinue reading “ಡಿಸೆಂಬರ್24 ,ಗುರುವಾರ ; 2020 :ಇಂದಿನ ರಾಶಿಭವಿಷ್ಯ”

ರೂಪಾಂತರಿತ ಕೊರೋನಾ ಎಫೆಕ್ಟ್: ನಾಳೆಯಿಂದ ರಾತ್ರಿ ಪ್ರತಿಬಂಧಕಾಜ್ಞೆ ಜಾರಿ

ಬೆಂಗಳೂರು: ಬ್ರಿಟನ್ ಮೂಲದಿಂದ ಮತ್ತೆ ವೈರಸ್ ಹರಡುವ ಬೀತಿಯಿಂದ ದೇಶದ ಕೆಲವು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೂ ನೈಟ್ ಕರ್ಫ್ಯೂ ಮಾಡಲು ಮುಂದಾಗಿದ್ದು ಈ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ರಾತ್ರಿ 11ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಮಾಡಲು ಸರಕಾರ ತೀರ್ಮಾನ ಮಾಡಿದ್ದು ಈ ನೀತಿಯು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಹಗಲಲ್ಲಿ ಬಹಳಷ್ಟು ಜನಸಂಚಾರ ಇರುವುದರಿಂದ ಈ ವ್ಯವಸ್ಥೆಯು ದಾರಿContinue reading “ರೂಪಾಂತರಿತ ಕೊರೋನಾ ಎಫೆಕ್ಟ್: ನಾಳೆಯಿಂದ ರಾತ್ರಿ ಪ್ರತಿಬಂಧಕಾಜ್ಞೆ ಜಾರಿ”

ಕೋವಿಡ್19 ‘ತಾಂತ್ರಿಕ ಸಲಹಾ ಸಮಿತಿ’ ಸಭೆ ಮುಕ್ತಾಯ : ರಾಜ್ಯದಲ್ಲಿ ಮತ್ತೆ ‘ರಾತ್ರಿ ಕರ್ಫ್ಯೂ’ ಜಾರಿಯಾಗಲಿದೆಯೇ?

ಬೆಂಗಳೂರು : ಯುಕೆ ಕೋವಿಡ್ ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ, ಇಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಕ್ಕೆ ಬರಲಾಗಿದ್ದು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವಂತ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ.Continue reading “ಕೋವಿಡ್19 ‘ತಾಂತ್ರಿಕ ಸಲಹಾ ಸಮಿತಿ’ ಸಭೆ ಮುಕ್ತಾಯ : ರಾಜ್ಯದಲ್ಲಿ ಮತ್ತೆ ‘ರಾತ್ರಿ ಕರ್ಫ್ಯೂ’ ಜಾರಿಯಾಗಲಿದೆಯೇ?”

ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನಿಷೇಧಿಸಿದ ರಾಜ್ಯಸರಕಾರ!

ಬೆಂಗಳೂರು: ಕೋವಿಡ್‌-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೋವಿಡ್‌-19ರ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆ ಮತ್ತು ಅಂಗಡಿ ಮಳಿಗೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಗರಿಷ್ಠContinue reading “ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನಿಷೇಧಿಸಿದ ರಾಜ್ಯಸರಕಾರ!”

ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ

ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ. ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂContinue reading “ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ”

Design a site like this with WordPress.com
Get started