
ಇದೇ ಬರುವ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಕಟ್ಟಿಗೆ ಮುಹೂರ್ತಕ್ಕೆ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಿತಿಯ ಗೌರವಾಧ್ಯಕ್ಷರಾದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಶ್ರೀಮಠದಿಂದ ಆಹ್ವಾನ ಪತ್ರಿಕೆಯನ್ನು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ನೀಡಿ ಸ್ವಾಗತಿಸಿದರು. ಅವರೊಂದಿಗೆ ಮೋಹನ್ ಭಟ್, ಸಂದೀಪ್ ಮಂಜ ಮತ್ತು ನಂದನ್ ಜೈನ್ ಉಪಸ್ಥಿತರಿದ್ದರು.