ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಮ್. ಅಮೀನ್ ವಡಬಾಂಡೇಶ್ವರ ಆಯ್ಕೆ



ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 2024-26ನೇ ಸಾಲಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಮ್. ಅಮೀನ್ ವಡಭಾoಡೇಶ್ವರ ಇವರು ಡಿ.22ರಂದು ಗರೋಡಿಯ ಪ್ರಾಂಗಣದಲ್ಲಿ ನಡೆದ 2022-24ನೇ ಸಾಲಿನ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಅಚ್ಯುತ ಎ. ಅಮೀನ್ ಕಲ್ಮಾಡಿ, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸಿ. ಬಂಗೇರ, ಹರೀಶ್ ಎಮ್.ಕೆ. ಕಲ್ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಜತ್ತನ್ ಮಲ್ಪೆ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿಯಾಗಿ ವಿನಯ ಕುಮಾರ್ ಕಲ್ಮಾಡಿ, ಜೊತೆ ಕೋಶಾಧಿಕಾರಿಯಾಗಿ ಜಯಕರ ಪೂಜಾರಿ ಕೊಡವೂರು , ಸಂಘಟನಾ ಕಾರ್ಯದರ್ಶಿಯಾಗಿ ಮಧ್ವನಗರ ಶಂಕರ ಪೂಜಾರಿ ಹಾಗೂ ಆಡಳಿತ ಸಮಿತಿಯ ಸದಸ್ಯರುಗಳಾಗಿ ಪ್ರಕಾಶ್ ಜಿ. ಕೊಡವೂರು, ಶೇಖರ್ ಕಲ್ಮಾಡಿ, ಬಾಲಕೃಷ್ಣ ಕೊಡವೂರು, ವಿನಯಕುಮಾರ್ ಪಡುಕರೆ, ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಭಾಸ್ಕರ್ ಜೆ. ಕರ್ಕೇರ ಗರ್ಡೆ, ರತ್ನಾಕರ ಅಮೀನ್, ಜಗದೀಶ್ ಬಂಗೇರ ಮಲ್ಪೆ, ಸತೀಶ್ ಬಂಗೇರ ಹಾಗೂ ಎ.ಜಯಕರ ಶೆಟ್ಟಿ ಪಠೇಲರ ಮನೆ ಅಂಬಲಪಾಡಿ, ಪಿ. ವಿ. ಭಾಸ್ಕರ್ ಕಲ್ಮಾಡಿ, ಎಮ್. ಸುರೇಶ್ ಮಲ್ಪೆ ( ಗೌರವ ಸಲಹೆಗಾರರು), ಕರುಣಾಕರ ಪೂಜಾರಿ ಪಡುದಡ್ಡಿ( ಸನ್ನುದಾರ), ನಾರಾಯಣ ಪೂಜಾರಿ ಕಲ್ಮಾಡಿ (ಗರೋಡಿ ಮನೆ ಪ್ರತಿನಿಧಿ), ವೇದ ಕುಮಾರ್ ಕಲ್ಮಾಡಿ (ಬೆಂಗಳೂರು ಸಂಚಾಲಕರು) ಆಯ್ಕೆಯಾಗಿದ್ದಾರೆ.

Leave a comment

Design a site like this with WordPress.com
Get started