ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ  ಶೀರೂರು‌ ಮಠದ ಬಾಳೆ ಮುಹೂರ್ತದ ಆಹ್ವಾನ ಪತ್ರಿಕೆ ಸಲ್ಲಿಕೆ

ಶೀರೂರು ಮೂಲಮಠದಲ್ಲಿ ಡಿ.14 ಮತ್ತು 15 ರಂದು ನಡೆಯಲಿರುವ ಶ್ರೀರಾಮ ತಾರಕ‌ಮಹಾಮಂಡಲ ಪೂಜೆ, ರಾಮತಾರಕ ಯಾಗ, ಮನ್ಯುಸೂಕ್ತ ಯಾಗ, ವಾಯುಸ್ತುತಿ ಯಾಗ, ದತ್ತಾತ್ರೇಯ ಯಾಗ ಹಾಗೂ ಡಿ. 6 ರಂದು ನಡೆಲಿರುವ ಶೀರೂರು‌ ಮಠದ ಬಾಳೆ ಮುಹೂರ್ತದ ಆಹ್ವಾನ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಪ್ರೀತಿಯಿಂದ ಆಹ್ವಾನಿಸಲಾಯಿತು

ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯದಾರರಾದ ಶ್ರೀಶ ಭಟ್,  ಸಮಿತಿಯ ಕಾರ್ಯಾಧ್ಯಕ್ಷರೂ ಉಡುಪಿಯ ಶಾಸಕರೂ ಆದ ಯಶ್ ಪಾಲ್ ಸುವರ್ಣ, ಜಿಲ್ಲಾ ಸಮಿತಿಯ ಸಂಚಾಲಕರಾದ ಶ್ರೀಕಾಂತ ನಾಯಕ್, ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಮೋಹನ್ ಭಟ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ನಯನಾ ಗಣೇಶ್, ಹಿಂದೂ ಯುವಸೇನೆಯ ಹಿರಿಯಡ್ಕ ವಿಭಾಗದ ಗೌರವಾಧ್ಯಕ್ಷರಾದ ಶೇಖರ್ ಶೆಟ್ಟಿ ಪ್ರಮುಖರಾದ ನಂದನ್, ಸಚಿನ್, ಅಕ್ಷಯ್ ಶೆಟ್ಟಿ,  ಜಿಲ್ಲಾ ಮಹಿಳಾ ಪ್ರಮುಖರಾದ ಪೂರ್ಣಿಮಾ ಶೆಟ್ಟಿ, ಭಾರತಿ ಚಂದ್ರಶೇಖರ್,  ಉಪಸ್ಥಿತರಿದ್ದರು

Leave a comment

Design a site like this with WordPress.com
Get started