
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತ್ರತ್ವದಲ್ಲಿ ನಾಳೆ ಜು.28 ರಂದು ಶುಕ್ರವಾರ ನಡೆಯುವ ಪ್ರತಿಭಟನಾ ಸಭೆಯಲ್ಲಿ ಕಾಪುವಿನಿಂದ ಕನಿಷ್ಠ ಒಂದು ಸಾವಿರ ಜನ ಭಾಗವಹಿಸಲಿರುವರು ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ಈ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು ಅವರ ಜೆಹಾದಿ ಮಾನಸಿಕತೆಯಿಂದ ಮುಂದೆ ಪ್ರತಿಯೊಬ್ಬ ಮನೆಯವರೂ ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆ ವಿಡಿಯೋ ಡಿಲಿಟ್ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದರೂ ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವರ್ಷದ ನಂತರ ವೈರಲ್ ಆಗಿ ಬಹಳಷ್ಟು ಕಷ್ಟ ನಷ್ಟ ಅನುಭವಿಸಿದ ಎಷ್ಟೋ ಉದಾಹಣೆಗಳಿವೆ. ಆದ್ದರಿಂದ ಈ ಘಟನೆಗೆ ಯಾವುದಾದರೂ ದೇಶದ್ರೋಹಿ ಸಂಘಟನೆಗಳ ಲಿಂಕ್ ಇದೆಯೇ ಎನ್ನುವುದನ್ನು ಸಮಗ್ರವಾಗಿ ತನಿಖೆ ನಡೆಸಿ ಇದರ ಸತ್ಯಾಸತ್ಯತೆಯನ್ನು ಅರಿಯಬೇಕು. ಆ ವಿದ್ಯಾರ್ಥಿಗಳನ್ನು ಅಮಾನತು ಮಾಡಿರಷ್ಟೇ ಸಾಲದು. ಸಮಗ್ರವಾಗಿ ಅವರ ವಿಚಾರಣೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಯಾವುದಧ ಘಟನೆ ಮರುಕಳಿಸದಂತೆ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕು. ಅದು ಬಿಟ್ಟು ತೇಪೆ ಹಚ್ಚು ಕೆಲಸ ಮಾಡಿ ಯಾರನ್ನೋ ಓಲೈಸಲು ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಇದರ ಪ್ರತಿಭಟನೆ ನಡೆಸಬೇಕೋ ಅದೇ ರೀತಿಯಲ್ಲಿ ಪ್ರತಿಭಟನೆ ಮಾಡಿ ಜನ ಜಾಗ್ರತಿ ಮಾಡಿಸುವ ಕೆಲಸ ಬಿಜೆಪಿ ಮಾಡಲಿದೆ.
ನಾಳೆಯ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಕಾರ್ಯಕರ್ತರು ಪ್ರತೀ ಬೂತ್ ಗಳಿಂದ ಭಾಗವವಹಿಸಲಿದ್ದು ಜಿಲ್ಲಾ ಬಿಜೆಪಿಯ ಹೋರಾಟಕ್ಕೆ ಶಕ್ತಿ ತುಂಬಲಿರುವೆವು ಎಂದು ಹೇಳಿರುವರು.