ಬೂತ್ ವಿಜಯ ಅಭಿಯಾನ – ಭೈರಂಪಳ್ಳಿ ಗ್ರಾಮ‌ಪಂಚಾಯತ್ ಶಕ್ತಿಕೇಂದ್ರ ಸಭೆ

News by: ಜನತಾಲೋಕವಾಣಿನ್ಯೂಸ್

ಕಾಪು:ಭೈರಂಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಶಕ್ತಿಕೇಂದ್ರ ಸಭೆ ಇಂದು ನಡೆಯಿತು. ಆಧ್ಯಕ್ಷತೆಯನ್ನು ಶಕ್ತಿಕೇಂದ್ರ ಪ್ರಮುಖ್ ಪ್ರಸಾದ್ ಮಲ್ಯ ವಹಿಸಿದ್ದರು. ಪಂಚಾಯತ್ ಅಧ್ಯಕ್ಷರೂ ಮಹಾಶಕ್ತಿಕೇಂದ್ರ ಅಧ್ಯಕ್ಷರೂ ಆದ ಜಿಯಾನಂದ ಹೆಗ್ಡೆ, ಜಿಲ್ಲಾ ಉಸ್ತುವಾರಿ ದಿಲ್ಲೇಶ್ ಶೆಟ್ಟಿ, ಅವಿನಾಶ್ ಶೆಟ್ಟಿಗಾರ್, ಆರು ಬೂತ್ ಅಧ್ಯಕ್ಷರುಗಳು, ಸತೀಶ್ ಶೆಟ್ಟಿ, ಪದ್ಮರಾಜ್ ಭಟ್ ಮತ್ತಿತರರು ವೇದಿಕೆಯನ್ನು ಉಪಸ್ಥಿತರಿದ್ದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪಕ್ಷ ಬೆಳೆದು ಬಂದ ಹಾದಿ, ಮೋದೀಜಿ ಸರಕಾರದ ಸಾಧನೆಗಳು, ರಾಜ್ಯ ಸರಕಾರದ ಸಾಧನೆಗಳು ಹಾಗೂ *ಬೂತ್ ವಿಜಯ ಅಭಿಯಾನದ* ಬಗ್ಗೆ ಮಾಹಿತಿ ನೀಡಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾದ ಅನಿವಾರ್ಯತೆಗಳ ಬಗ್ಗೆ ವಿಶ್ಲೇಶಿಸಿ ಎಲ್ಲ ಕಾರ್ಯಕರ್ತರು ಚುನಾವಣೆ ತನಕ ಯುಧ್ಧೋಪಾದಿಯಲ್ಲಿ ತಯಾರಾಗಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ಎಲ್ಲರೂ ಶ್ರಮಿಸಲು ಕರೆ ನೀಡಿದರು.

Leave a comment

Design a site like this with WordPress.com
Get started