Design a site like this with WordPress.com
Get started

ಜಲ ಜೀವನ್ ಮಿಷನ್ ಅಲೆವೂರು ಪಂಚಾಯತ್ ಗೆ ರೂ.10 ಕೋಟಿ ಅನುದಾನ – ಶ್ರೀಕಾಂತ ನಾಯಕ್

News by: ಜನತಾಲೋಕವಾಣಿನ್ಯೂಸ್

ಕಾಪು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯಡಿ ಅಲೆವೂರು ಗ್ರಾಮ ಪಂಚಾಯತ್ ಗೆ ಸುಮಾರು 10 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಪ್ರಕ್ರಿಯ ಅಂತಿಮ ಹಂತದಲ್ಲಿರುತ್ತದೆ. ಈ ಯೋಜನೆಯ ಪ್ರಕಾರ ಮುಂದಿನ ಮೂವತ್ತು ವರ್ಷಗಳ ಕಾಲ ಎಲ್ಲಾ ಮನೆ ಮನೆ ಗಳಿಗೆ ಶುಧ್ದ ನೀರನ್ನು ಪ್ರತೀ ವ್ಯಕ್ತಿಗೆ ಕನಿಷ್ಠ 55 ಲೀಟರ್ ನಷ್ಟು ನೀರು ಒದಗಿಸುವ ಯೋಜನೆ. ಈ ಯೋಜನೆಗೆ ಕೇಂದ್ರ ಸರಕಾರ ಶೇ.45, ರಾಜ್ಯ ಸರಕಾರ ಶೇ.45 ರಷ್ಟು ಅನುದಾನ ನೀಡುತ್ತಿದ್ದು ಶೇ.10 ರಷ್ಟನ್ನು ಬಳಕೆದಾರರು ಭರಿಸಬೇಕಾಗಿದೆ.

ಅಲೆವೂರಿನಲ್ಲಿ ಬೇಸಿಗೆಯಲ್ಲಿ ಹಲವು ಕಡೆ ವಿಪರೀತ ನೀರಿನ ಸಮಸ್ಯೆ ಇದೆ. ನೆಹರೂ ನಗರ, ಸೊಸೈಟಿ ಕಾಲನಿ, ರಾಮಪುರ, ದುರ್ಗಾನಗರ, ಪ್ರತಿನಗರ, ಸಿಧ್ದಾರ್ಥನಗರ, ನಡು ಅಲೆವೂರು, ಮಾರ್ಪಳ್ಳಿ, ಕೊರಂಗ್ರಪಾಡಿ ಹಲವೆಡೆ ನೀರಿನ ಸಮರ್ಪಕ ವ್ಯವಸ್ಥೆ ಅಗತ್ಯವಿದೆ. ನೀರಿನ ಮೂಲದ ಕೊರತೆಯಿರುವ ನಮ್ಮ ಪಂಚಾಯತ್ ಗೆ ಉಡುಪಿ ನಗರಸಭೆಯ ವಾರಾಹಿ ಯೋಜನೆಯ ನೀರನ್ನು ನಮ್ಮ ಪಂಚಾಯತ್ ಗೆ ನೀಡುವ ಯೋಜನೆ ಇದಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ. 2024 ರ ಜನವರಿಯ ಒಳಗೆ ಎಲ್ಲ ಮನೆ ಮನೆಗೆ ನೀರನ್ನು ಒದಗಿಸುವ ಯೋಜನೆ ಸಿಧ್ಧಪಡಿಸಲಾಗಿದೆ. ಇಂತಹ ಮೂಲಭೂತ ಬೇಡಿಕೆಗೆ ಸಮರ್ಥ ಯೋಜನೆ ತಂದ ನಮ್ಮ ದೇಶದ ನೆಚ್ಚಿನ ಪ್ರಧಾನಿ ಮೋದೀಜಿಯವರಿಗೆ, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರಿಗೆ, ಅತೀ ಹೆಚ್ಚು ಅನುದಾನ ನೀಡಲು ಶ್ರಮಿಸಿದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರಿಗೆ ಧನ್ಯವಾದಗಳು ಎಂದು ಕಾಪು ಬಿಜೆಪಿ ಅಧ್ಯಕ್ಷರೂ, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆದ ಶ್ರೀಕಾಂತ ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: