NEWS BY: ಜನತಾಲೋಕವಾಣಿನ್ಯೂಸ್
ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಕಾಪು ತಾಲೂಕು ಉಚ್ಚಿಲ ವಲಯದ ಅದಮಾರು ಕಾರ್ಯಕ್ಷೇತ್ರದಲ್ಲಿ ಆಂತರಿಕ ಲೆಕ್ಕ ಪರಿಶೋಧನೆಯನ್ನು, ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀಮತಿ,ಜಯಂತಿ ಇವರು ದೀಪ ಪ್ರಜ್ವಲನೆ ಮಾಡಿ ತಾಲೂಕಿನಲ್ಲಿ ನಡೆಯುವ ಲೆಕ್ಕ ಪರಿಶೋಧನೆಗೆ ಚಾಲನೆ ನೀಡಿ, ಎಲ್ಲಾ ಸಂಘಗಳು ಅತ್ಯುನ್ನತ ಶ್ರೇಣಿಯಾದ S ಶ್ರೇಣಿಯಲ್ಲಿ ಇರಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಅದಮಾರು ಒಕ್ಕೂಟದ ಅಧ್ಯಕ್ಷರಾದ ವೀಣಾ ಯತಿನ್,ಉಡುಪಿ ಜಿಲ್ಲಾ *ಲೆಕ್ಕ ಪರಿಶೋಧನಾ ವಿಭಾಗದ ಪ್ರಬಂಧಕರಾದ ಪ್ರದೀಪ್, ತಾಲೂಕಿನ ಲೆಕ್ಕಪರಿಶೋಧಕರಾದ ವಿಶ್ವನಾಥ ಪೂಜಾರಿ,ವಲಯದ ಮೇಲ್ವಿಚಾರಕರಾದ ಭಾಸ್ಕರ್,ಸೇವಾಪ್ರತಿನಿಧಿಯಾದ ಪಾರ್ವತಿ ಹಾಗೂ ಸಂಘದ ಪ್ರಬಂಧಕರು ,ಸಂಯೋಜಕರು, ಕೋಶಾಧಿಕಾರಿ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು