

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಗ್ರಾಮ ಒನ್ ಕಚೇರಿ ಅಲೆವೂರಿನ ರಾಮಪುರದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರಿಂದ ಉದ್ಘಾಟನೆಗೊಂಡಿತು. ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಗ್ರಾಮ ಒನ್ ನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತ ಗ್ರಾಮೀಣ ಭಾಗದ ಜನರು ನಾಡಕಚೇರಿ ಹಾಗೂ ಬೇರೆ ಕಡೆ ತೆರಳಿದೆ ಗ್ರಾಮದಲ್ಲಿಯೆ ಎಲ್ಲ ಸರಕಾರಿ ಸವಲತ್ತು ನೀಡುವ ಯೋಚನೆಯಿಂದ ಈ ಯೋಜನೆ ಮಾಡಲಾಗಿದ್ದು ಮುಂದೆ ಎಲ್ಲ ಸೇವೆಗಳೂ ಇದರಲ್ಲಿಯೇ ಲಭ್ಯವಾಗಲಿದ್ದು ಜನ ಇದರ ಸದುಪಯೋಗ ಪಡೆಯಬೇಕೆಂದರು. ಕ್ಷೇತ್ರ ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಇ ಸ್ಟ್ಯಾಂಪ್ ಬಿಡುಗಡೆಗೊಳಿಸಿದರು. ಜಿಲ್ಲಾ ಗ್ರಾಮ ಒನ್ ಉಸ್ತುವಾರಿ ನವೀಶ್, ಉದ್ಯಮಿಗಳಾದ ಗಂಗಾಧರ್ ಸುವರ್ಣ, ಶಶಿಧರ್ ವಾಗ್ಳೆ, ಯಶ್ ಪಾಲ್ ಸುವರ್ಣ, ಕಾರ್ತಿಕ್ ಶೆಟ್ಟಿ, ಮೋಹನ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ನಯನ ಗಣೇಶ್, ಶಿಲ್ಪಾ ಜಿ ಸುವರ್ಣ,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬೇಬಿ ರಾಜೇಶ್ ಉಪಸ್ಥಿತರಿದ್ದರು. ಸ್ಥಳೀಯರಾದ ರಾಘವ ನಾಯ್ಕ್, ಅಪ್ಪು ಸೇರಿಗಾರ್, ನಾರಾಯಣ್ ಶೆಟ್ಟಿಗಾರ್ ಆಶೋಕ್ ಶೆಟ್ಟಿಗಾರ್, ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಆಚಾರ್ಯ, ಪುಷ್ಪಲತಾ ಮಾರ್ಪಳ್ಳಿ, ಶಶಿಕಲಾ ಕೆ ಶೆಟ್ಟಿ, ಗೀತಾ ಕೇಶವ ಶೆಟ್ಟಿಗಾರ್, ಮಮತಾ ಅಶೋಕ್ ಶೆಟ್ಟಿಗಾರ್, ಸುರೇಶ್ ನಾಯಕ್ ಕರ್ವಾಲು, ಪುರುಶೋತ್ತಮ ನಾಯಕ್, ರಾಘವೇಂದ್ರ ಆಚಾರ್ಯ, ರಮೇಶ್ ಕಾಮತ್, ರಾಜೇಶ್ ಸೇರಿಗಾರ್, ಪ್ರಭಾಕರ ಅಂಚನ್, ಹರೀಶ್ ಸೇರಿಗಾರ್, ಅಶೋಕ್ ಕುಮಾರ್ ಅಲೆವೂರು, ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ದಿನಕರ್ ಬಾಬು ಆಗಮಿಸಿ ಶುಭಹಾರೈಸಿದರು. ಮಾಲಕರಾದ ಶ್ರೀಕಾಂತ ನಾಯಕ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.