ಆದಿಉಡುಪಿಯಲ್ಲಿ ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ನೂತನ ಶಾಖೆ ಉದ್ಘಾಟನೆ



ಉಡುಪಿ:ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ., ಬ್ರಹ್ಮಾವರ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ನ.7ರಂದು ಆದಿಉಡುಪಿಯ ಜೈ ಜವಾನ್ ರೋಡ್ ನಲ್ಲಿರುವ ವೀರ ಭವನ ಕಟ್ಟಡದಲ್ಲಿ ನಡೆಯಿತು.

ಹಿರಿಯ ಲೆಕ್ಕ ಪರಿಶೋಧಕ ಸಿಎ. ದೇವ್ ಆನಂದ್ ಅವರು ಜ್ಯೋತಿ ಬೆಳಗಿಸಿ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ವಿವಿದೋದ್ಧೇಶ ಸಹಕಾರ ಸಂಘ (ರಿ.) ಅಧ್ಯಕ್ಷ ಕೆ.ಸುಭಾಷ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮಶಿವ, ಸಿಎ. ರೇಖಾ ದೇವಾನಂದ್, ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಆಡಳಿತ ನಿರ್ದೇಶಕರಾದ ಸಚಿನ್ ಪೂಜಾರಿ, ಧೀರಜ್ ಜೆ. ಶೆಟ್ಟಿ ಹಾಗೂ ನೂತನ ಶಾಖೆ ಕಛೇರಿಯ ಪಾಲುದಾರರಾದ ಕಾರ್ತಿಕ್ ಬಿ.ಎಸ್., ರಕ್ಷಿತ್ ಶೆಟ್ಟಿಗಾರ್, ಅಭಿಷೇಕ್ ಆಚಾರ್ಯ, ಸಿಎಸ್. ಸುಷ್ಮಾ ಶ್ರೀಪಾದ್ ಉಪಸ್ಥಿತರಿದ್ದರು.

ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ಪ್ರಧಾನ ಕಛೇರಿ ಬ್ರಹ್ಮಾವರದ ಎಸ್.ಎಮ್.ಎಸ್. ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದು ಈ ಸಂಸ್ಥೆಯು ಸಿಎ (ಚಾರ್ಟರ್ಡ್ ಅಕೌಂಟೆಂಟ್), ಸಿಎಸ್ (ಕಂಪನಿ ಸೆಕ್ರೆಟರಿ) ಅವರನ್ನೊಳಗೊಂಡಿದ್ದು, ಅಕೌಂಟಿಂಗ್ ಸರ್ವಿಸಸ್, ಬುಕ್ ಕೀಪಿಂಗ್, ಐಟಿ ಫೈಲಿಂಗ್, ಜಿಎಸ್ಟಿ, ಟಿಡಿಎಸ್ ಫೈಲಿಂಗ್, ರಿಜಿಸ್ಟ್ರೇಷನ್, ಕಂಪೆನಿ ರಿಜಿಸ್ಟ್ರೇಷನ್ ಮತ್ತು ಕಂಪ್ಲೈನ್ಸ್, ಇಂಟರ್ನಲ್ ಆಡಿಟ್, ಪ್ರೊಜೆಕ್ಟ್ ರಿಪೋರ್ಟ್, ಡಿಜಿಟಲ್ ಸಿಗ್ನೇಚರ್ ಸಹಿತ ಇನ್ನಿತರ ಸೇವೆಯನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ http://www.flexibizservices.com ಸಂಪರ್ಕಿಸಬಹುದು.

Leave a comment

Design a site like this with WordPress.com
Get started