ಕೊರಂಗ್ರಪಾಡಿ ಬಿಜೆಪಿ ಶಕ್ತಕೇಂದ್ರದ ಬೂತ್ ಗಳಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಉಡುಪಿ: ಕೊರಂಗ್ರಪಾಡಿ ಶಕ್ತಿಕೇಂದ್ರದ 4 ಬೂತ್ ಸಂಖ್ಯೆಗಳಾದ – 62, 63,64, 66 ನೇ ವಾರ್ಡ್ ಗಳಲ್ಲಿ ಪಂಡಿತ್ ದೀನದಯಾಳ್ ಜನ್ಮದಿನದ ಆಚರಣೆ ನಡೆಯಿತು. ಒಂದನೇ ಬೂತ್ ನ ಕಾರ್ಯಕ್ರಮ ಪಂಚಾಯತ್ ಸದಸ್ಯರಾದ ಆಶಿಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕೆಮ್ತೂರಿನಲ್ಲಿ, ಮೂರನೇ ಬೂತ್ ಅಧ್ಯಕ್ಷರಾದ ಕೇಶವ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಕೊರಂಗ್ರಪಾಡಿಯಲ್ಲಿ, ಐದನೆ ಬೂತ್ ಅಧ್ಯಕ್ಷರಾದ ಅಕ್ಷಯ್ ಸೇರಿಗಾರ್ ಇವರ ಅಧ್ಯಕ್ಷತೆಯಲ್ಲಿ ಮಾರ್ಪಳ್ಳಿಯಲ್ಲಿ ನಡೆಯಿತು.

ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ಪಂಡಿತ್ ದೀನದಯಾಳ್ ರವರ ಜೀವನದ ಕುರಿತಂತೆ ಮಾಹಿತಿ ನೀಡಿ ಅವರ ಆದರ್ಶಗಳನ್ನು ನಾವೆಲ್ಲ ಬಿಜೆಪಿ ಕಾರ್ಯಕರ್ತರು ಅಳವಡಿಸಿ ಪಕ್ಷ ಸಂಘಟನೆ ಮಾಡಬೇಕು ಎಂದರು. ಶಕ್ತಿಕೇಂದ್ರ ಪ್ರಮುಖ್ ಆಶಿಶ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

Design a site like this with WordPress.com
Get started