
ಕಾಪು: ಅಲೆವೂರು ಶಕ್ತಿಕೇಂದ್ರದ 5 ಬೂತ್ ಸಂಖ್ಯೆಗಳಾದ – 57,58,59,60 ಮತ್ತು 61 ನೇ ವಾರ್ಡ್ ಗಳಲ್ಲಿ ಇಂದು ಪಂಡಿತ್ ದೀನದಯಾಳ್ ಜನ್ಮದಿನದ ಆಚರಣೆ ನಡೆಯಿತು. ಒಂದನೇ ಬೂತ್ ನ ಕಾರ್ಯಕ್ರಮ ಕರ್ವಾಲಿನಲ್ಲಿ ಬೂತ್ ಅಧ್ಯಕ್ಷರಾದ ಸುರೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವಿಶಿಷ್ಟವಾಗಿ ನಡೆದು 105 ದೀಪ ಬೆಳಗಿಸಿ ಆಚರಿಸಿದೆವು. ಎರಡನೇ ಬೂತ್ ಅಧ್ಯಕ್ಷರಾದ ಸತೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನೆಹರೂ ನಗರದಲ್ಲಿ, ಮೂರನೇ ಬೂತ್ ಅಧ್ಯಕ್ಷರಾದ ಹನುಮಪ್ಪ ಇವರ ಅಧ್ಯಕ್ಷತೆಯಲ್ಲಿ ಪ್ರಗತಿನಗರದಲ್ಲಿ, ನಾಲ್ಕನೆ ಬೂತ್ ಅಧ್ಯಕ್ಷರಾದ ಅರುಣ್ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಪಡು ಅಲೆವೂರಿನಲ್ಲಿ, ಐದನೆ ಬೂತ್ ಅಧ್ಯಕ್ಷರಾದ ರಾಜೇಶ್ ಸೇರಿಗಾರ್ ಇವರ ಅಧ್ಯಕ್ಷತೆಯಲ್ಲಿ ರಾಮಪುರದಲ್ಲಿ ನಡೆಯಿತು.
ಎಲ್ಲ ಕಡೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ಪಂಡಿತ್ ದೀನದಯಾಳ್ ರವರ ಜೀವನದ ಕುರಿತಂತೆ ಮಾಹಿತಿ ನೀಡಿದರು. ಅವರ ಆದರ್ಶಗಳನ್ನು ಪಕ್ಷದ ಎಲ್ಲ ಕಾರ್ಯಕರ್ತರು ಅಳವಡಿಸಿಕೊಂಡು ನಿಸ್ವಾರ್ಥವಾಗಿ ಪಕ್ಷ ಬೆಳೆಸಬೇಕೆಂದರು. ಅಲೆವೂರು ಶಕ್ತಿ ಕೇಂದ್ರ ಪ್ರಮಖ್ ಶೇಖರ ಆಚಾರ್ಯ ಉಪಸ್ಥಿತರಿದ್ದರು.