ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಪು ಕ್ಷೇತ್ರದ ಕಾಜರಗುತ್ತಿನ ಸುಬ್ರಹ್ಮಣ್ಯ ಕಾಮತ್ ಮತ್ತು ಸುಪ್ರೀತ ಕಾಮತ್ ಇವರಿಗೆ ಕಾಪು ಬಿಜೆಪಿ ವತಿಯಿಂದ ಸನ್ಮಾನ

ಇತ್ತೀಚೆಗೆ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಪು ಕ್ಷೇತ್ರದ ಉಡುಪಿ ತಾಲೂಕಿನ ಕಾಜರಗುತ್ತಿನ ರಘುನಾಥ ಕಾಮತ್ ಮತ್ತು ರಾಧಿಕಾ ಕಾಮತ್ ಇವರ ಮಕ್ಕಳಾದ ಸುಬ್ರಹ್ಮಣ್ಯ ಕಾಮತ್ ಮತ್ತು‌ ಸುಪ್ರೀತ ಕಾಮತ್ ಇವರಿಗೆ ಕಾಪು ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ಗೌರವಾರ್ಪಣೆ ಸಲ್ಲಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ ನಿಮ್ಮನ್ನು ಗುರುತಿಸಿ ಗೌರವಾರ್ಪಣೆ ಮಾಡಿರುವುದು ನಿಮ್ಮ ಸಾಧನೆಗೆ ಅಭಿನಂದನೆ ಸಲ್ಲಿಸಲು ಇತರರಿಗೆ ಪ್ರೇರಣೆಯಾಗಿ ಮತ್ತಷ್ಟು ಜನ ಇದೇ ರೀತಿಯ ಸಾಧನೆ ಮಾಡಬೇಕು. ಕಾಪು ಕ್ಷೇತ್ರದ ಜನರ ವತಿಯಿಂದ ನಿಮಗೆ ಈ ಅಭಿನಂದನೆ. ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಿ ಇತರರಿಗೆ ಪ್ರೇರಣಾ ಶಕ್ತಿಯಾಗಿರಿ ಎಂದರು.

ಸದಾನಂದ ಪ್ರಭು ಪೆರ್ಣಂಕಿಲ ಸ್ವಾಗತಿಸಿದರು. ಮಂಡಲ ಉಪಾಯ ಸಂಧ್ಯಾ ಕಾಮತ್, ಸುಭಾಸ್ ನಾಯ್ಕ್ ಪಂಚಾಯತ್ ಸದಸ್ಯರಾದ ಗೀತಾ, ಸ್ಥಳೀಯರಾದ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು

Leave a comment

Design a site like this with WordPress.com
Get started