
ಕಾಂಗ್ರೆಸ್ ನಾಯಕ ಸರಳ ಸಜ್ಜನ ರಾಜಕಾರಣಿ ಮಾಜಿ ಕೇಂದ್ರ ಸಚಿವರಾಗಿರುವ ಒಸ್ಕರ್ ಫೆರ್ನಾಂಡಿಸ್ ಅವರು ಇಂದು ವಿಧಿವಶರಾದರು.ಅವರ ಆತ್ಮಕ್ಕೆ ಚಿರಶಾಂತಿ ಸದ್ಗತಿ ದೊರೆಯಲೆಂದು ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಅದ್ಯಕ್ಷ ಶ್ರೀಕಾಂತ್ ನಾಯಕ್ .ಸುರೇಶ್ ಶೆಟ್ಟಿ ಗುರ್ಮೆ ,ಶಿಲ್ಪಾ ಜಿ ಸುವರ್ಣ, ನಯನ ಗಣೇಶ್ ,ರಾಧಾಕೃಷ್ಣ ಬೋಳ್ಜೆ,ವಿಜಯ ಕುಮಾರ್ ಉದ್ಯಾವರ,ರವಿ ಕೋಟ್ಯಾನ್ ಪಡುಕರೆ,ರಾಜೇಶ್ ಕುಂದರ್,ಸಚಿನ್ ಪೀತ್ರೋಡಿ, ಸಚಿನ್ ಬೊಳ್ಜೆ,ಸತೀಶ್ ಬಿರಪಾಡಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು,ಹಾಗು ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು