
ಉಡುಪಿ : ಜಿಲ್ಲಾ ಆರೋಗ್ಯ ಇಲಾಖೆ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ. ಗ್ರಾಮ ಪಂಚಾಯತ್ ಅಲೆವೂರು.ಅಲೆವೂರು ಯುವಕ ಸಂಘ (ರಿ) ರಾಮಪುರ, ಮತ್ತು ಅಲೆವೂರು ಮಹಿಳಾ ಸಂಘ ರಾಮಪುರ ಇದರ ಸಹಯೋಗದಲ್ಲಿ *ಸುಬೋಧಿನಿ ಹಿರಿಯ ಪ್ರಾಥಮಿಕ* ಶಾಲೆ ರಾಮಪುರ ಅಲೆವೂರು ಇಲ್ಲಿ ಬ್ರಹತ್ ವ್ಯಾಕ್ಸಿನೇಶನ್ ಮೇಳ ನಡೆಯಿತು. ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ
ಅಶೋಕ್ ಶೆಟ್ಟಿಗಾರ್ ಹಾಗೂ ಅಲೆವೂರು ಮಹಿಳಾ ಸಂಘದ ಅಧ್ಯಕ್ಷರಾದ ರಮಾ ಜೆ ರಾವ್ ಇವರು ಜಂಟಿಯಾಗಿ ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಕಾಂತ ನಾಯಕ್, ಕೋವಿಡ್ ಮೂರನೇ ಅಲೆ ತಡೆಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು, ಅದರೊಂದಿಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇತ್ಯಾದಿಗಳನ್ನು ಕಡ್ಡಾಯವಾಗಿ ಅನುಸರಿಸಲು ಕರೆ ನೀಡಿದರು. ಅಲ್ಲದೆ ಕುಟುಂಬದ ಭದ್ರತಾ ಯೋಜನೆಗಳನ್ನು ಮಾಡಿಸಿಕೊಳ್ಳಲು ಕರೆ ನೀಡಿದರು. ದೇಶಾದ್ಯಂತ ಪ್ರತಿಯೊಬ್ಬ ಪ್ರಜೆಗೂ ಉಚಿತ ವ್ಯಾಕ್ಸಿನ್ ನೀಡುತ್ತಿರುವ ದೇಶದ ಹೆಮ್ಮೆಯ ಪ್ರಧಾನಿಗಳಾದ ಮೋದೀಜಿಯವರಿಗೆ ಧನ್ಯವಾದ ಸಲ್ಲಿಸಿದರು.
ವೈದ್ಯಾಧಿಕಾರಿ ಡಾ.ಆಂಜಲಿ ವಾಗ್ಳೆ ಮಾತನಾಡಿ ವ್ಯಾಕ್ಸಿನ್ ಬಳಕೆಯಿಂದ ಉಪಯೋಗಗಳು ಹಾಗೂ ಸಾರ್ವಜನಿಕರ ಅನುಮಾನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಬೋಧಿನಿ ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಲತಾ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶೇಖರ ಆಚಾರ್ಯ, ಪಂಚಾಯತ್ ಸದಸ್ಯರುಗಳಾದ ಮಮತಾ ಶೆಟ್ಟಿಗಾರ್, ಆಶಿಶ್ ಶೆಟ್ಟಿ, ಪುಷ್ಪಲತಾ ಮಾರ್ಪಳ್ಳಿ, ಶಶಿಕಲಾ ಶೆಟ್ಟಿ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೇಬಿ ರಾಜೇಶ್, ಸ್ಥಳೀಯರಾದ ರವಿ ಸೇರಿಗಾರ್, ಸತೀಶ್ ಸೇರಿಗಾರ್, ರಾಜೇಶ್ ಸೇರಿಗಾರ್, ಅನುರಕ್ಷ, ಸನಿಹ, ಪ್ರಥ್ವಿ, ಅರುಣ್ ಆಚಾರ್ಯ, ಪ್ರಸಾದ್ ಪೂಜಾರಿ, ಸುಬೋಧಿನಿ ಶಾಲಾ ಮಾಜಿ ಮುಖೋಪಾಧ್ಯಾಯರಾದ ರಾಘವ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.