
ಮಣಿಪುರ ಗ್ರಾಮದ ಕುಂತಳ ನಗರ ಮೋಕ್ಷಗಿರಿ ಪುಣ್ಯ ಕೇತ್ರ ಮತ್ತು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಡಂಪಿಂಗ್ ಯಾರ್ಡ್ ಮತ್ತು ಸ್ಮಶಾನ ನಿರ್ಮಾಣಕ್ಕೆ ಹುನ್ನಾರ – ಸ್ಥಳೀಯ ಜನರಿಂದ ಬಾರಿ ವಿರೋಧ
ಮಣಿಪುರ ಗ್ರಾಮದ ಕುಂತಳ ನಗರದ ಮೋಕ್ಷ ಗಿರಿ ಪುಣ್ಯ ಕೇತ್ರದಲ್ಲಿ ದೇವಸ್ಥಾನ ನಿರ್ಮಾಣ, ಪಿಲಿ ಪಂಜರವನ್ನು ದೇಶದ ಒಂದು ಟೂರಿಸಮ್ಮ್ ಕೇತ್ರ ಮಾಡುವ ಉದ್ದೇಶದಿಂದ ಹಲವಾರು ವರ್ಷಗಳ ಹಿಂದೆ 30ಎಕ್ರೆ ಜಾಗದಲ್ಲಿ ಕಾರ್ಯಕ್ರಮ ರೂಪಿಸಿ ಕಾಮಗಾರಿ ನಡೆದಿತ್ತು. ಆದರೆ ಜಗನ್ನಾಥ ಶೆಟ್ಟಿ ಯವರ ನಿಧನದಿಂದ ಈ ಕೆಲಸ ನಿಂತಿತ್ತು.
ಈ ಜಾಗದ ಹತ್ತಿರ ಸುಪ್ರಸಿದ್ದ ಕೋಡಂಗಳ ವಿಷ್ಣು ಮೂರ್ತಿ ದೇವಸ್ಥಾನ ಇದೆ. ಇಲ್ಲಿ ದಿನಾ ಪೂಜೆ ಪೂರಸ್ಕಾರ, ಜಾತ್ರೆ ನಡೆಯುತಿದ್ದು ಬಹು ದೊಡ್ಡ ಪುಣ್ಯ ಕೇತ್ರ ವಾಗಿ ಜನ ಆಕರ್ಷಣೆಗೆ ಕಾರಣವಾಗಿದೆ. ಈ ಕ್ಷೇತ್ರವು ಅತೀ ಎತ್ತರವಾದ ಪ್ರದೇಶದಲ್ಲಿದ್ದು ಕುಂಜಾರು ಗಿರಿ, ಮಣಿಪಾಲ, ಕಡಲ ತೀರ ನೋಡಲು ಪ್ರೇಕ್ಷಣಿಯ ಸ್ಥಳವಾಗಿದೆ. ಈ ಪ್ರದೇಶದ ಹತ್ತಿರ, ಹೋಗುವ ರಸ್ತೆಯಲ್ಲೇ ಭಾರತೀ ಹಿರಿಯ ಪ್ರಾಥಮಿಕ ಶಾಲೆ, ಗೋ ಆಸ್ಪತ್ರೆ, ಗೋಚರ ಸ್ಥಳ, ಹಲವಾರು ಮನೆಗಳಿದ್ದು ಇಂತಹ ಸುಂದರ, ಪರಿಸರ ಪ್ರೇಮಿ ಪ್ರದೇಶ, ಹಿಂದೂಗಳ ಭಾವನೆಗೆ ವಿರುದ್ಧವಾಗಿ ಮಣಿಪುರ ಗ್ರಾಮ ಪಂಚಾಯತ್ ಯಾರಿಗೂ ತಿಳಿಸದೇ ಡಂಪಿಂಗ್ ಯಾರ್ಡ್ ನಿರ್ಮಾಣ ಮತ್ತು ಸ್ಮಶಾನ ಕಟ್ಟಲು ಸರ್ವೇ ನಂಬರ್ 242 – 1.6 ಎಕ್ರೆ ಜಗದಲ್ಲಿ ಜೆ ಸಿ ಬಿ ಮೂಲಕ ಕೆಲಸ ಪ್ರಾರಂಸಿರುವುದು ಜನರನ್ನು ರೊಚ್ಚಿಗೇರಿಸಿದೆ. ಜನರ ಬಾರಿ ವಿರೋಧ, ಹಿಂದೂ ಜನರ ಭಾವನೆಗೆ ವಿರುದ್ಧ ಮಾಡುವ ಇಂತಹ ಕಾರ್ಯಕ್ಕೆ ವಿರೋಧ ಬಂದ ನೆಲೆಯಲ್ಲಿ ಮಣಿಪುರ ಪಂಚಾಯತ್ ಕಾಮಗಾರಿ ಕೆಲಸ ಸ್ಥಗಿತ ಗೊಳಿಸಿದೆ.
ಸ್ಥಳೀಯ ನಿವಾಸಿಗಳು ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು, ಜನರ ಭಾವನೆಗೆ ಮನ್ನಣೆ ಕೊಟ್ಟು, ಬೇರೆ ಸ್ಥಳದಲ್ಲಿ ಜನರ ಅಭಿಪ್ರಾಯ ಪಡೆದು ಮಾಡಬೇಕೆಂದು ಮಣಿಪುರ ಗ್ರಾಮ ಪಂಚಾಯತ್ ಗೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ CEO ರವರಿಗೆ ಮನವಿ ಮಾಡಿರುತ್ತಾರೆ. ಯಾವುದೇ ಕಾರಣಕ್ಕೂ ಜನರ ಅಭಿಪ್ರಾಯ ಕೇಳದೆ ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಊರಿನ ಜನತೆ ಬಿಡುವುದಿಲ್ಲ ಎಂದು ಊರ ಮುಖಂಡರು, ಜನ ಪ್ರತಿನಿಧಿಗಳು ತಿಳಿಸಿರುತ್ತಾರೆ