

ಭಾರತೀಯ ಜನತಾ ಪಾರ್ಟಿ *ಕಾಪು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ* ಗುಜ್ಜಿ ವಾರ್ಡ್, ಜನರಲ್ ಶಾಖೆ, ಅಹಮ್ಮದಿ ಮಾಲ್ ಈ ವಾರ್ಡ್ ಗಳ ವಾರ್ಡ್ ಸಭೆಯು ಇಂದು ಮಲ್ಲಾರು ಮಾರಿಗುಡಿ ಬಳಿ ವಾರ್ಡ್ ಅಧ್ಯಕ್ಷರುಗಳಾದ ಶ್ರೀನಿವಾಸ್, ಬಾಬು, ಮತ್ತು ಹೈದರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಕಾಪು ಕ್ಷೇತ್ರ ಅಧ್ಯಕ್ಷರು ಆದ ಶ್ರೀಕಾಂತ್ ನಾಯಕ್ ಇವರು ವಾರ್ಡ್ ಅಧ್ಯಕ್ಷರುಗಳ ಜವಾಬ್ದಾರಿ, ಪ್ರಧಾನ ಮಂತ್ರಿಗಳ ಮನ್ ಕೀ ಬಾತ್, ವಾರ್ಡ್ ಸಭೆ ಬಗ್ಗೆ, ಚುನಾವಣೆಯ ಬಗ್ಗೆ, ಪಕ್ಷ ಸಂಘಟನೆ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಪು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಆದ ಸಂದೀಪ್ ಶೆಟ್ಟಿ, ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಕಾಪು ಪ್ರಾಧಿಕಾರ ಅಧ್ಯಕ್ಷರು ಆದ ಸುಧಾಮ ಶೆಟ್ಟಿ, ಮಾಜಿ ಪುರ ಸಭಾ ಸದಸ್ಯರು ಅದ ಮೋಹಿನಿ ಶೆಟ್ಟಿ, ಕಾಪು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಯಾದ ಶೈಲೇಶ್ ಅಮೀನ್ ಮತ್ತು ವಾರ್ಡ್ ನ ಪದಾಧಿಕಾರಿಗಳು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು.