Design a site like this with WordPress.com
Get started

ಮೇ 19, ಬುಧವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ,
ಬುಧವಾರ, ಸಪ್ತಮಿ , ಆಶ್ಲೇಷ ನಕ್ಷತ್ರ
ಧ್ರುವ ಯೋಗ , ವಣಿಜ ಕರಣ
ರಾಹುಕಾಲ:12.19 ರಿಂದ 1.53
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09
ಮೇಷ: ಅಧಿಕ ಖರ್ಚು, ಶತ್ರು ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ಭೂ ವಿಚಾರದಲ್ಲಿ ಲಾಭ.

ಮೇಷ

ಕುಟುಂಬ ಸದಸ್ಯರಲ್ಲಿನ ಭಿನ್ನಮತದಿಂದಾಗಿ ಬೇಸರದ ವಾತಾವರಣ. ಹಿರಿಯರ, ಹಿತೈಷಿಗಳ ಮಧ್ಯಪ್ರವೇಶದಿಂದಾಗಿ ಎಲ್ಲವೂ ನಿರ್ಧಾರಕ್ಕೆ ಬರಲಿದೆ. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿಂಜರಿಕೆ ಕಂಡುಬರಲಿದೆ.

ವೃಷಭ

ಸಂಯಮದಿಂದ ಕಾರ್ಯ ಪ್ರವೃತರಾಗಿ. ಸಾಂಸಾರಿಕವಾಗಿ ತಲೆದೋರಿರುವ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗುರುಹಿರಿಯರ ಸಕಾಲಿಕ ನೆರವಿನಿಂದ ಸಂತಸದ ಕ್ಷಣಗಳು ನಿಮ್ಮದಾಗುವವು.

ಮಿಥುನ

ನಿಮ್ಮ ಮುಂದಾಳುತನದ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುವುದು. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ. ಯಶಸ್ಸಿನ ಅಮಲಿನಲ್ಲಿ ಸಂಸಾರದ ಬಗ್ಗೆ ಅವಗಣನೆ ಸಲ್ಲ.

ಕಟಕ

ನಿಮ್ಮ ಬಹುದಿನದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಮುಗಿದು ಮನಸ್ಸಿಗೆ ನೆಮ್ಮದಿ ನೀಡಲಿದೆ. ಆರ್ಥಿಕ ರಂಗದಲ್ಲಿಯೂ ಉತ್ತಮ ಪ್ರಗತಿಯನ್ನು ಹೊಂದಿ ನೆಮ್ಮದಿ. ಮನೆಯಲ್ಲಿ ಹಬ್ಬದ ವಾತಾವರಣ.

ಸಿಂಹ

ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಯೋಜಿತ ಕ್ರಮದಂತೆ ಸುಗಮವಾಗಿ ಕೈಗೂಡುವುದು. ಮನಸ್ಸಿಗೆ ನೆಮ್ಮದಿ ದೊರೆತು ನಿರಾಳರಾಗುವಿರಿ. ಸಂಗಾತಿಯೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಸುಯೋಗ.

ಕನ್ಯಾ

ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಇತರರಲ್ಲಿ ಅಚ್ಚರಿ ಮೂಡುವುದು. ಹೊಸ ವಿಚಾರವೊಂದು ಮನದಲ್ಲಿ ಮೂಡಿ ಚಿಂತನೆಗೆ ಹಚ್ಚಲಿದೆ. ಸಮತೋಲನ ದೃಷ್ಟಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ತುಲಾ

ಪರಿಸ್ಥಿತಿ ನಿಮಗೆ ವಿರೋಧವಾಗಿರುವುದರ ಜೊತೆಗೆ ಮಕ್ಕಳ ನಡೆ ನುಡಿಗಳಿಗೆ ನೀವು ತಲೆ ತಗ್ಗಿಸುವ ಸಂದರ್ಭ ಒದಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕುಲದೇವತಾ ಆರಾಧನೆ ಮಾಡ.

ವೃಶ್ಚಿಕ

ನಿಮ್ಮ ಕೆಲಸ ಕಾರ್ಯಗಳು ಎಂದಿನಂತೆ ಸುಗಮವಾಗಿ ಸಾಗುತ್ತಿರುವಾಗ ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ಮಾನಸಿಕ ಕಿರಿಕಿರಿ. ಸಂಯಮದಿಂದ ಹಸ್ತಕ್ಷೇಪವನ್ನು ಕಡೆಗಣಿಸುವುದು ಉತ್ತಮ. ಆರ್ಥಿಕ ರಂಗದಲ್ಲಿ ಪ್ರಗತಿ.

ಧನು

ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಆಯ್ಕೆ ದೊರೆಯುವುದು. ಕ್ಷಿಪ್ರ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದಿನದಾಂತ್ಯಕ್ಕೆ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಮಕರ

ಬಾಹ್ಯ ಸೌಂದರ್ಯದ ಸೆಳೆತದಿಂದಾಗಿ ಸಂಕಟಗಳು ಎದುರಾಗುವ ಸಾಧ್ಯತೆ. ಮನೋವೃತ್ತಿಯ ಮೇಲೆ ಹಿಡಿತ ಸಾಧಿಸಿ ದಿನನಿತ್ಯದ ಕಾರ್ಯಗಳಲ್ಲಿ ಗಮನ ವಹಿಸುವುದು ಉತ್ತಮ. ಸಂಗಾತಿ ಮಾತಿಗೆ ಮನ್ನಣೆ ನೀಡಿ.

ಕುಂಭ

ಕಾವ್ಯ, ಕವನಗಳ ಬರವಣಿಗೆ ವಿಚಾರಗಳಲ್ಲಿ ಆಸಕ್ತಿ ಮೂಡುವುದು. ನಿಮ್ಮ ಮೇಲಿನ ಎಲ್ಲ ಆಪಾದನೆಗಳಿಂದ ಮುಕ್ತಿ ಪಡೆದು ಅಭಿಮಾನಕ್ಕೆ ಪಾತ್ರರಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮೀನ

ಕೆಲಸ ಕಾರ್ಯಗಳಲ್ಲಿ ಹೊಸತನ, ಉತ್ಸಾಹಗಳು ಮೂಡಿಬರಲಿವೆ. ವೈದ್ಯಕೀಯ ವಲಯದಲ್ಲಿರುವವರಿಗೆ ವಿಶೇಷ ಧನಪ್ರಾಪ್ತಿ. ಹೊಸ ಹೊಸ ಸ್ನೇಹಿತರಿಂದ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿವಳಿಕೆ. ಸಾಮಾಜಿಕ ಗೌರವ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: